SBI Scheme: ಹಣವನ್ನೇ ಮನೆಯಲ್ಲಿ ಇಡುವ ಬದಲು ಈ ಭರ್ಜರಿ ಯೋಜನೆಯಲ್ಲಿ ಹೂಡಿಕೆ ಮಾಡಿ, ಹೆಚ್ಚು ಲಾಭ ಗಳಿಸುವುದು ಹೇಗೆ ಗೊತ್ತೇ?SBI ತಂದಿದೆ ಭರ್ಜರಿ ಯೋಜನೆ
SBI Scheme: ಭವಿಷ್ಯಕಾಲ ಚೆನ್ನಾಗಿರಬೇಕು ಎಂದರೆ ಈಗಿನಿಂದಲೇ ಹೂಡಿಕೆ ಮಾಡಿ, ಹಣ ಉಳಿಸುವುದು ಒಳ್ಳೆಯದು. ಪ್ರತಿಯೊಬ್ಬರು ಹೂಡಿಕೆ ಮಾಡಬಹುದು. ಹೂಡಿಕೆ ಮಾಡಿ, ನಿಮ್ಮ ಹಣವನ್ನು ಸುರಕ್ಷಿತವಾಗಿ ಇಡಲು ಸರ್ಕಾರಿ ಬ್ಯಾಂಕ್ ಗಳು ಸಹಾಯ ಮಾಡುತ್ತದೆ. ಇದೀಗ ಎಸ್.ಬಿ.ಐ (SBI) ನಿಮಗಾಗಿ ಅಮೃತ್ ಕಲಶ್ ಯೋಜನೆಯನ್ನು (Amrith Kalash Yojane) ಜಾರಿಗೆ ತಂದೆ. ಇದು 400 ದಿನಗಳ ಸ್ಥಿರ ಠೇವಣಿ ಯೋಜನೆ ಆಗಿದ್ದು, ಇಲ್ಲಿ ಹೂಡಿಕೆ ಮಾಡಿದರೆ, 7.10% ಬಡ್ಡಿ ಸಿಗುತ್ತದೆ. ಹಿರಿಯ ನಾಗರೀಕರಿಗೆ 7.60% ಬಡ್ಡಿ ಸಿಗುತ್ತದೆ, ಹಾಗೆಯೇ ನಿವೃತ್ತಿ ಹೊಂದಿರುವವರಿಗೆ 1% ಹೆಚ್ಚು ಬಡ್ಡಿ ಸಿಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ದಿನಾಂಕವನ್ನು ಜೂನ್ 30ರ ವರೆಗು ಬ್ಯಾಂಕ್ ವಿಸ್ತರಿಸಿದ್ದು, ಅಮೃತ್ ಕಲಶ್ ಯೋಜನೆ ಬಗ್ಗೆ ನಿಮಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ..

*ಈ ಯೋಜನೆಯಲ್ಲಿ ಹೂಡಿಕೆ ಉತ್ತಮ ಲಾಭ ಪಡೆಯುವ ಅವಕಾಶ ನಿಮಗೆ ಸಿಕ್ಕಿದೆ. ಹೂಡಿಕೆ ಮಾಡುವುದಕ್ಕೆ ಜೂನ್ 30ರ ವರೆಗು ಅವಧಿ ವಿಸ್ತರಣೆ ಮಾಡಲಾಗಿದ್ದು, ಇದರ ಲಾಭವನ್ನು ನೀವು ಪಡೆಯಬಹುದು. ಈ ಯೋಜನೆಯಲ್ಲಿ ಗರಿಷ್ಠ 2ಕೋಟಿ ರೂಪಾಯಿ ವರೆಗು ಹೂಡಿಕೆ ಮಾಡಬಹುದು.
*ಇದು 400 ದಿನಗಳ ಸ್ಥಿರ ಠೇವಣಿ ಯೋಜನೆ ಆಗಿದ್ದು, ಇಲ್ಲಿ ಹೂಡಿಕೆ ಮಾಡಿದರೆ ಹಣವನ್ನು ಮಧ್ಯದಲ್ಲಿ ವಾಪಸ್ ಪಡೆಯಲು ಆಗುವುದಿಲ್ಲ. ಆದರೆ ಈ ಯೋಜನೆಯ ಮೂಲಕ ನಿಮಗೆ ಬ್ಯಾಂಕ್ ಇಂದ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗುತ್ತದೆ. ಈ ಪ್ರಯೋಜನವನ್ನು ಸಹ ಪಡೆದುಕೊಳ್ಳಬಹದೂ.
*ಈ ಯೋಜನೆಗೆ ಸೇರುವುದು ಹೇಗೆ ಎಂದರೆ ನಿಮ್ಮ ಹತ್ತಿರದ ಎಸ್.ಬಿ.ಐ ಹೋಗಿ ಅರ್ಜಿ ಪಡೆಯಬಹುದು ಅಥವಾ ಯೋನೋ ಆಪ್ ಇಂದ ಆನ್ಲೈನ್ ಅರ್ಜಿ ತೆಗೆದುಕೊಂಡು ಫಿಲ್ ಮಾಡಿ ಸಲ್ಲಿಸಬಹುದು. ಜೊತೆಗೆ ಅಗತ್ಯವಿರುವ ದಾಖಲೆಗಳನ್ನು ನೀವು ಬ್ಯಾಂಕ್ ಗೆ ನೀಡಿ, ಸ್ವಲ್ಪ ಹಣವನ್ನು ಬ್ಯಾಂಕ್ ಗೆ ಪಾವತಿಸಿ, ಈ ಯೋಜನೆಯ ಫಲಗಳನ್ನಜ್ ಪಡೆಯಬಹುದು.
*ಇದು ಭಾರತೀಯ ಸ್ಟೇಟ್ ಬ್ಯಾಂಕ್ ಶುರು ಮಾಡಿರುವ ಯೋಜನೆ ಆಗಿರುವುದರಿಂದ, ಲಾಭದ ಬಗ್ಗೆ ನೀವು ಚಿಂತೆ ಮಾಡಬೇಕಿಲ್ಲ. ಸೀಮಿತವಾಗಿ ಹೂಡಿಕೆ ಮಾಡಿ, ಹೆಚ್ಚು ಲಾಭ ಪಡೆಯಬಹುದು.
*ಈ ಯೋಜನೆಗೆ ಸೇರುವವರಿಗೆ ಕೆಲವು ಮಾನದಂಡವಿದೆ, ಅದೇನೆಂದರೆ, ಈ ಯೋಜನೆಗೆ ಸೇರುವವರಿಗೆ ಕನಿಷ್ಠ 19 ವರ್ಷ ಆಗಿರಬೇಕು ಹಾಗೆಯೇ ಅವರು ಭಾರತದ ನಾಗರೀಕರೆ ಆಗಿರಬೇಕು. ಇವರು ಹೂಡಿಕೆ ಮಾಡಿ, ಹೆಚ್ಚು ಬಡ್ಡಿ ಪಡೆಯಬಹುದು.
*ಅಮೃತ್ ಕಲಶ್ ಯೋಜನೆಯಲ್ಲಿ ಹೂಡಿಕೆ ಮಾಡಲು,
ಆಧಾರ್ ಕಾರ್ಡ್, ಏಜ್ ಪ್ರೂಫ್, ಅಡ್ರೆಸ್ ಪ್ರೂಫ್, ಮೊಬೈಲ್ ನಂಬರ್, ಇಮೇಲ್ ಐಡಿ, ಆದಾಯ ಪ್ರಮಾಣ ಪತ್ರ, ಪಾಸ್ ಪೋರ್ಟ್ ಸೈಜ್ ಫೋಟೋ ಬೇಕಾಗುತ್ತದೆ.
Comments are closed.