Neer Dose Karnataka
Take a fresh look at your lifestyle.

Karnataka Free Pass: ಫ್ರೀ ಪಾಸ್ ಕೊಡಲು ಆಗಲ್ಲ ಎನ್ನುತ್ತಿರುವ ಸಾರಿಗೆ ಸಂಸ್ಥೆಗಳು. ಯಾಕೆ ಅಂತೇ ಗೊತ್ತೇ?? ಇವರ ಕಷ್ಟ ಕೇಳೋರು ಯಾರು? ಏನಾಗುತ್ತಿದೆ ಗೊತ್ತೇ?

Karnataka Free Pass: ಕಾಂಗ್ರೆಸ್ ಸರ್ಕಾರವು ನಮ್ಮ ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಿತ್ತು. ಪಕ್ಷ ಅಧಿಕಾರಕ್ಕೆ ಬಂದರೆ ಅವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿತ್ತು. ಈಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ, ಇನ್ನು ಕೆಲವೇ ಸಮಯದಲ್ಲಿ ಯೋಜನೆಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಮಾತು ಕೊಟ್ಟ. ಸರ್ಕಾರ ಕೊಟ್ಟ ಗ್ಯಾರಂಟಿಗಳಲ್ಲಿ ಒಂದು ಎಲ್ಲಾ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ.

ಮಹಿಳೆಯರು ಎಲ್ಲಿಂದ ಎಲ್ಲಿಗೆ ಹೋಗಬೇಕಾದರು ಮಹಿಳೆಯರು ಉಚಿತವಾಗಿ ಹೋಗಬಹುದು ಎಂದು ಡಿಕೆ ಶಿವಕುಮಾರ್ ಅವರು ತಿಳಿಸಿದ್ದರು. ಆದರೆ ಈಗ ಸಾರಿಗೆ ಇಲಾಖೆ ಬೇರೆಯದೇ ಮಾತನ್ನು ಹೇಳುತ್ತಿದೆ, ಸಾರಿಗೆ ಇಲಾಖೆ ಅಧಿಕಾರಿಗಳು ಈಗ ತಮಗೆ ಬರುತ್ತಿರುವ ಆದಾಯದಲ್ಲಿ ಫ್ರೀ ಬಸ್ ಪಾಸ್ ಕೊಡಲು ಖಂಡಿತವಾಗಿಯೂ ಸಾಧ್ಯವಿಲ್ಲ ಎಂದಿದ್ದಾರೆ. ಸಾರಿಗೆ. ನಿಗಮಗಳು ತಾವೇ ಬಸ್ ಪಾಸ್ ನೀಡುವ ಬಗ್ಗೆ ಸರ್ಕಾರ ಚರ್ಚೆ ಮಾಡಿದ್ದು, ಇದಕ್ಕೆ ನಾಲ್ಕು ನಿಗಮದ ಅಧಿಕಾರಿಗಳು ಆಗುವುದಿಲ್ಲ ಎಂದಿದ್ದಾರೆ. ಇದನ್ನು ಓದಿ..New CM candidate: ಈಗ ಇರುವ ಡಿ ಕೆ ರವರಿಗೆ ಇನ್ನು ಮುಖ್ಯಮಂತ್ರಿ ಕುರ್ಚಿ ಸಿಕ್ಕಿಲ್ಲ, ಆಗಲೇ ಲಕ್ಷ್ಮಿ ಹೆಬ್ಬಾಳ್ಕರ್ ಕಡೆ ಇಂದ ಷಾಕಿಂಗ್ ಹೇಳಿಕೆ. ಏನಾಗಿದೆ ಗೊತ್ತೇ??

KSRTC ಬಹಳ ಕಡಿಮೆ ಲಾಭದಲ್ಲಿದ್ದು ಇನ್ನುಳಿದ ಮೂರು ನಿಗಮಗಳು ನಷ್ಟದಲ್ಲಿದೆ. ಈಗ ಉಚಿತ ಪಾಸ್ ಕೊಡಬೇಕು ಎಂದರೆ ಸಾರಿಗೆ ನಿಗಮ ನಡೆಸುವುದೇ ಕಷ್ಟವಾಗುತ್ತದೆ ಎಂದಿದ್ದಾರೆ ಅಧಿಕಾರಿಗಳು. ಈ ಕಾರಣಕ್ಕೆ ಉಚಿತ ಪಾಸ್ ಹೊಣೆ ಸರ್ಕಾರದ ಮೇಲಿದ್ದು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಇದಕ್ಕಾಗಿ ಶಾಂತಿನಗರದಲ್ಲಿ ಸಭೆ ಆಯೋಜಿಸಿದ್ದರು. ಈ ಯೋಜನೆಯ ಬಗ್ಗೆ ಚರ್ಚೆ ಮಾಡುವುದಾಗಿ ತೀರ್ಮಾನ ಮಾಡಲಾಗಿದೆ.

ರಾಮಲಿಂಗರೆಡ್ಡಿ ಅವರು ಇದರ ಬಗ್ಗೆ ಮಾತನಾಡಿ, ಸಿಎಂ ಅವರು ಎಲ್ಲಾ ಅಧಿಕಾರಿಗಳ ಜೊತೆಗೆ ಚರ್ಚೆ ಮಾಡಿದ್ದಾರೆ. ಜೂನ್ 1ರಂದು ಕ್ಯಾಬಿನೆಟ್ ಮೀಟಿಂಗ್ ಇದೆ, ಎಲ್ಲವೂ ಒಳ್ಳೆಯದಾಗುತ್ತದೆ. ನಾವು ಹೇಳಿದ ಹಾಗೆ ಮಾಡುತ್ತೇವೆ..ತೀರ್ಮಾನ ಆದ ನಂತರ ತಿಳಿಸುತ್ತೇವೆ.. ಎಂದು ಹೇಳಿದ್ದಾರೆ. ಮಂಗಳವಾರ ಸಾರಿಗೆ ನಿಗಮಗಳ ಎಂಡಿಗಳ ಸಭೆ ಕರೆಯಲಾಗಿದೆ, ಎಷ್ಟು ಜನ ಹೆಣ್ಣುಮಕ್ಕಳಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಈಗ ನಿಗಮಗಳಲ್ಲಿ 40% ಬಸ್ ಗಳಲ್ಲಿ ನಷ್ಟವೆ ಆಗುತ್ತಿದೆ, ಆದರು ಜನಕ್ಕಾಗಿ ಓದಿಸುತ್ತಿದ್ದಾರೆ, ಇನ್ನು 40% ಬಸ್ ಗಳಲ್ಲಿ ಹೆಚ್ಚಿನ ಆದಾಯ ಇಲ್ಲ. ನಷ್ಟ ಕೂಡ ಇಲ್ಲ, 20% ಬಸ್ ಗಳು ಮಾತ್ರ ಲಾಭ ಮಾಡುತ್ತಿದೆ..ಎಂದಿದ್ದಾರೆ. ಇದನ್ನು ಓದಿ..Siddaramaiah: ಮತ್ತೊಂದು ಯು ಟರ್ನ್ ಹೊಡೆದ ಸಿದ್ದರಾಮಯ್ಯ- ಪ್ರವೀಣ್ ನೆಟ್ಟರ್ ಪತ್ನಿ ಕೇಸ್ ನಲ್ಲಿ ಟ್ವಿಸ್ಟ್ ಕೊಟ್ಟ ಸಿದ್ದು- ಅಸಮಾಧಾನ ವ್ಯಕ್ತಪಡಿಸಿದ ಫ್ಯಾನ್ಸ್.

Comments are closed.