Neer Dose Karnataka
Take a fresh look at your lifestyle.

Dk Shivakumar: ಗಂಡಸರಿಗೆ ಯಾಕೆ ಎರಡು ಸಾವಿರ ಕೊಡಲ್ಲ ಎಂದಿದ್ದಕ್ಕೆ ಡಿಕೆಶಿ ಹೇಳಿದ್ದೇನು ಗೊತ್ತೇ?? ಅಸಮಾಧಾನ ವ್ಯಕ್ತ ಪಡಿಸಿದ ಗಂಡಸರು. ಏನು ಗಂಡಸರಿಗೆ ಬೆಲೆ ಇಲ್ಲವೇ?

Dk Shivakumar: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು, ಸಿಎಂ ಸಿದ್ದರಾಮಯ್ಯ ಅವರು ಡಿಎಸಿಎಂ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿ. ಮೊದಲ ಸಂಪುಟ ಸಭೆ ಕೂಡ ನಡೆದಿದೆ. ಇದರಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆಗಿಂತ ಮೊದಲು ಜಾರಿಗೆ ತರುತ್ತೇವೆ ಎಂದು ಹೇಳಿದ್ದ ಎಲ್ಲಾ ಯೋಜನೆಗಳನ್ನು ಜಾರಿಗೆ ತರಲು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜೂನ್ 11ರಿಂದ ಶಕ್ತಿ ಯೋಜನೆ ಜಾರಿಗೆ ಬರಲಿದ್ದು, ಆಗಸ್ಟ್ 15ರಿಂದ ಗೃಹಲಕ್ಷ್ಮಿ ಯೋಜನೆ ಜಾರಿಗೆ ಬರಲಿದೆ..

ಸಂಪುಟ ಸಭೆ ಎಲ್ಲವೂ ಮುಗಿದ ಬಳಿಕ ನಿನ್ನೆ ಡಿಕೆಶಿ ಅವರು ತಮ್ಮ ಹುಟ್ಟೂರು ರಾಮನಗರಕ್ಕೆ ಹೋಗಿದ್ದರು. ಅಲ್ಲಿ ಹಲವೆಡೆ ಸನ್ಮಾನ ಪ್ರೀತಿ ಗೌರವಗಳನ್ನು ಸ್ವೀಕರಿಸಿದರು. ಬಳಿಕ ಡಿಕೆಶಿ ಅವರು ತಮ್ಮ ಜನರಿಗಾಗಿ ಮಾತನಾಡುವಾಗ, ಕಾಂಗ್ರೆಸ್ ಪಕ್ಷ ಜನರಿಗೆ ನೀಡುತ್ತಿರುವ ಸೌಲಭ್ಯವನ್ನು ಉಪಯೋಗಿಸಿಕೊಳ್ಳಿ ಆದರೆ ದುರುಪಯೋಗ ಪಡಿಸಿಕೊಳ್ಳಬೇಡಿ ಎಂದು ಹೇಳಿದ್ದಾರೆ. ಇದನ್ನು ಓದಿ..Tech News: ಬ್ಯಾನ್ ಅಗಿದು 74 ಕ್ಕೂ ಹೆಚ್ಚು ವಾಟ್ಸಪ್ಪ್ ಖಾತೆಗಳು- ಮೆಟಾ ಸಂಸ್ಥೆ ಯಾಕೆ ವಾಟ್ಸಪ್ಪ್ ಖಾತೆಗಳನ್ನು ಮುಚ್ಚುತ್ತಿದೆ ಗೊತ್ತೇ? ನೀವು ಈ ತಪ್ಪು ಮಾಡಬೇಡಿ.

ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತನ್ನು ನಡೆಸುತ್ತಿದೆ, ಆಗಸ್ಟ್ 15ರಿಂದ ಗೃಹಲಕ್ಷ್ಮಿ ನಿಮ್ಮ ಮನೆ ಬಾಗಿಲಿಗೆ ಬರುತ್ತಾಳೆ, ಮನೆಯ ಯಜಮಾನಿಯ ಖಾತೆಗೆ ನೇರವಾಗಿ ಹಣ ಹೋಗುತ್ತದೆ ಎಂದು ಹೇಳಿ, ಹಣವನ್ನು ನೋಡಿಕೊಡು ಖರ್ಚು ಮಾಡಿ ಎಂದರು.. ಆಗ ಅಲ್ಲೇ ಇದ್ದ ಕಾಂಗ್ರೆಸ್ ಕಾರ್ಯಕರ್ತನೊಬ್ಬ, ಅಣ್ಣ ನಮಗೆ ಏನಣ್ಣ ಎಂದು ಕೇಳಿದ್ದು, ಅದಕ್ಕೆ ಉತ್ತರಿಸಿದ ಡಿಕೆಶಿ ಅವರು, ನಿನಗೆ ಕೊಟ್ಟರೆ ವೈನ್ ಶಾಪ್ ಗೆ ಹೋಗ್ತೀಯಾ ಅಂತ ಗೊತ್ತು ಎಂದಿದ್ದಾರೆ..

ತಮ್ಮ ಪಕ್ಷದ ಕಾರ್ಯಕರ್ತನ ಕಾಲೆಳೆದು ತಮಾಷೆ ಮಾಡಿರುವ ಡಿಕೆಶಿ ಅವರು, ಹೆಣ್ಣುಮಕ್ಕಳ ಮೇಲೆ ತಮಗೆ ನಂಬಿಕೆ ಇದೆ, ಗಂಡಸರ ಮೇಲೆ ಇಲ್ಲ ಎಂದು ಹೇಳಿದ್ದಾರೆ. ಇನ್ನು ಶಕ್ತಿ ಯೋಜನೆ ಬಗ್ಗೆ ಮಾತನಾಡಿ, ಹಿಂದೆ ಸಿಎಂ ಆಗಿದ್ದ ಕುಮಾರಣ್ಣ, ಬೊಮ್ಮಾಯಿ ಯಾರಾದರೂ ಇಂಥ ಚಾನ್ಸ್ ಕೊಟ್ಟಿದ್ರಾ..ಹೆಣ್ಣುಮಕ್ಕಳು ಧರ್ಮಸ್ಥಳ ಕುಕ್ಕೆ ಎಲ್ಲಿಗಾದರು ಹೋಗಿಬನ್ನಿ.. ಎಲ್ಲವೂ ಫ್ರೀ.. ಎಂದು ವಿರೋಧ ಪಕ್ಷದ ನಾಯಕರ ಕಾಲೆಳೆದಿದ್ದಾರೆ. ಇದನ್ನು ಓದಿ..Delhi Sakshi Case: ಸಾಕ್ಷಿ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್- ಸಾಹಿಲ್ ಹಾಗೂ ಸಾಕ್ಷಿ ನಡುವೆ ಏನೆಲ್ಲಾ ನಡೆದಿತ್ತು ಗೊತ್ತೇ?? ಅದಾದ ಮೇಲೆ ಏನಾಯ್ತು ಗೊತ್ತೆ??

Comments are closed.