Neer Dose Karnataka
Take a fresh look at your lifestyle.

ಅರವಿಂದ್ ಮರೆತರು ಕ್ರೀಡಾಸ್ಫೂರ್ತಿ, ಮತ್ತೊಮ್ಮೆ ಮೋಸ ಮಾಡಿ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅರವಿಂದ್, ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕೆಲವು ದಿನಗಳ ಹಿಂದೆ ಅರವಿಂದ್ ಎಂದ ತಕ್ಷಣ ನಮಗೆ ಒಬ್ಬ ಉತ್ತಮ ಆಟಗಾರ ಎಂಬ ಮಾತುಗಳು ಕೇಳಿ ಬರುತ್ತಿದ್ದವು. ಅಷ್ಟೇ ಅಲ್ಲದೆ ಅದೇ ಸಮಯದಲ್ಲಿ ಅವರು ಅತ್ಯುತ್ತಮ ಕ್ರೀಡಾ ಸ್ಪೂರ್ತಿಯನ್ನು ಹೊಂದಿರುವ ಆಟಗಾರ ಯಾವುದೇ ಕಾರಣಕ್ಕೂ ಯಾವ ವಿಚಾರವನ್ನು ಕೂಡ ನೇರವಾಗಿ ಹೇಳಲು ಹಿಂದೆ ಮುಂದೆ ಕೂಡ ಆಲೋಚನೆ ಮಾಡುವುದಿಲ್ಲ ಎಂಬ ಮಾತುಗಳು ಗಣನೀಯ ಪ್ರಮಾಣದಲ್ಲಿ ಕೇಳಿಬರುತ್ತಿದ್ದವು.

ಅದೇ ಕಾರಣಕ್ಕಾಗಿ ಜನರು ಇಷ್ಟು ದಿವಸ ಅರವಿಂದ್ ರವರು ಯಾರು ಎಂದು ತಿಳಿಯದೆ ಇದ್ದರೂ ಕೂಡ ಬಿಗ್ಬಾಸ್ ಮನೆಯಲ್ಲಿ ಅವರ ಆಟ ನೋಡಿ ಬೆಂಬಲಿಸಲು ಆರಂಭಿಸಿದರು. ಇವರ ಜನಪ್ರಿಯತೆಯನ್ನು ನೋಡಿದರೆ ಕಂಡಿತ ಇವರು ಫೈನಲ್ ಗೆ ಹೋಗುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಆದರೆ ಇತ್ತೀಚೆಗೆ ಅರವಿಂದ್ ರವರ ನಡವಳಿಕೆ ಯಾವ ರೀತಿ ಇದೆ ಎಂಬುದನ್ನು ನಿಮಗೆ ತಿಳಿಸುವ ಅವಶ್ಯಕತೆ ಇಲ್ಲ. ಅದೇ ಕಾರಣಕ್ಕಾಗಿ ಅರವಿಂದ್ ರವರ ವಿರುದ್ಧ ಅಭಿಮಾನಿಗಳ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸ್ವತಹ ಅರವಿಂದ್ ರವರ ಅಭಿಮಾನಿಗಳು ಕ್ರೀಡಾಸ್ಪೂರ್ತಿ ಮರೆತಿರುವುದನ್ನು ಒಪ್ಪಿಕೊಳ್ಳುತ್ತಿಲ್ಲ ಅಷ್ಟೇ ಅಲ್ಲದೆ ನೆನ್ನೆ ನಡೆದ ಟಾಸ್ಕ್ನಲ್ಲಿ ವೈಷ್ಣವೀ ರವರು ಹೆಚ್ಚಿನ ಬಾಚಿ ಕಟ್ಟಿದ್ದ ಕಾರಣ, ವೈಷ್ಣವಿ ರವರಿಗೆ ಹೆಚ್ಚು ಅಂಕಗಳು ನೀಡಬೇಕಾಗಿತ್ತು. ಆದರೆ ಅರವಿಂದ್ ರವರು ಆರು ಜನ ಇದ್ದೇವೆ ಎಲ್ಲರೂ ನೂರು ನೂರು ಅಂಕಗಳನ್ನು ತೆಗೆದು ಕೊಳ್ಳೋಣ ಎಂದು ಹೇಳಿದರು, ವೈಷ್ಣವಿ ರವರಿಗೆ ಎಲ್ಲರಿಗಿಂತ 20 ಹೆಚ್ಚು ಅಂಕಗಳನ್ನು ಬಾಚಿ ಕಟ್ಟಿದ್ದರೂ ಕೂಡ ಅವರಿಗೆ ಯಾವುದೇ ರೀತಿಯ ಹೆಚ್ಚಿನ ಅಂಕಗಳು ದೊರೆಯಲಿಲ್ಲ. ಇದನ್ನು ಪ್ರಶ್ನಿಸಿದಾಗ ಹಾಗೆ-ಹೀಗೆ ಲೆಕ್ಕ ಹೇಳಿ ವೈಷ್ಣವಿ ರವರನ್ನು ಅದೇಗೋ ಕನ್ಫ್ಯೂಸ್ ಮಾಡಿಬಿಟ್ಟರು, ಇದು ಪ್ರೇಕ್ಷಕರಿಗೆ ಇಷ್ಟವಾಗಿಲ್ಲ ಅದೇ ಕಾರಣಕ್ಕಾಗಿ ಮತ್ತೊಮ್ಮೆ ಅರವಿಂದ್ ಅವರು ತಮ್ಮ ಕಳೆದ ಕೆಲವು ವಾರಗಳ ಹಿಂದಿನ ಆಟವನ್ನು ನೆನಪು ಮಾಡಿಕೊಂಡು ಆ ರೀತಿ ಆಟವಾಡಬೇಕು ಎಂದಿದ್ದಾರೆ

Comments are closed.