Neer Dose Karnataka
Take a fresh look at your lifestyle.

ವೈರಲ್ ಆಯಿತು ವಿಡಿಯೋ ಒಂದರಲ್ಲಿ ದರ್ಶನ್ ರವರು ಸಂಚಾರಿ ವಿಜಯ್ ಅವರಿಗೆ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಹಲವಾರು ಸ್ಟಾರ್ ನಟರು ಸೇರಿ ನಮ್ಮ ಕನ್ನಡ ಚಿತ್ರರಂಗವನ್ನು ಇನ್ನೊಂದು ಹಂತಕ್ಕೆ ಹೋಗುವಂತೆ ಮಾಡಿದ್ದಾರೆ. ಆ ಕಾಲದಿಂದ ಹಿಡಿದು ಈ ಕಾಲದವರೆಗೂ ಸ್ಟಾರ್ ನಟರು ಅಭಿಮಾನಿಗಳ ಇಚ್ಛೆಯಂತೆ ಚಿತ್ರವನ್ನು ಮಾಡುತ್ತಾ ಕನ್ನಡದ ಹಿರಿಮೆಯನ್ನು ಎಲ್ಲೆಮೀರಿ ಪಸರಿಸುವಂತೆ ಮಾಡಿದ್ದಾರೆ. ಕೆಲವು ನಟರು ಪರಭಾಷೆಗಳಲ್ಲಿ ನಡೆಸಿ ಕನ್ನಡದ ಕಂಪನ್ನು ಪಸರಿಸಿದ ರೆ ಇನ್ನು ಕೆಲವರು ನಮ್ಮ ಭಾಷೆಯಲ್ಲಿ ಚಿತ್ರ ಮಾಡಿ ಕನ್ನಡವನ್ನು ಕನ್ನಡತನವನ್ನು ಇನ್ನಷ್ಟು ಜಾಸ್ತಿ ಅರಳಿಸಿದ್ದಾರೆ. ಆ ಪಟ್ಟಿಯಲ್ಲಿ ಒಬ್ಬರ ಕುರಿತಂತೆ ಇಂದು ನಾವು ಮಾತನಾಡಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿದ್ದು ಇನ್ನ್ಯಾರ ಬಗ್ಗೆ ಅಲ್ಲ. ಈಗಿನ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚಿನ ಮಾಸ್ ಅಭಿಮಾನಿಗಳನ್ನು ಹೊಂದಿರುವ ಏಕೈಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ. ಅಭಿಮಾನಿಗಳ ಪ್ರೀತಿಯ ಬಾಕ್ಸಾಫೀಸ್ ಈತನ ಎಲ್ಲರ ನೆಚ್ಚಿನ ಡಿ-ಬಾಸ್ ಎಂದೇ ಖ್ಯಾತರಾಗಿರುವ ದರ್ಶನ್ ತೂಗುದೀಪ್ ಶ್ರೀನಿವಾಸ್ ರವರು ತಮ್ಮ ಪರದೆಯ ಮೇಲೆ ನಟನೆಗೆ ಎಷ್ಟು ಖ್ಯಾತಿ ಹೊಂದಿದ್ದಾರೋ ಅಷ್ಟೇ ಖ್ಯಾತಿಯನ್ನು ಅವರು ಪರದೆ ಹಿಂದೆ ಜನರಿಗೆ ಪ್ರೀತಿ ನೀಡುವುದರಲ್ಲೂ ಕೂಡ ಪಡೆದಿದ್ದಾರೆ.

ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಖ್ಯಾತ ನಟರೊಬ್ಬರ ಮಗನಾಗಿದ್ದರೂ ಸಹ ಚಿತ್ರರಂಗದಲ್ಲಿ ಮೊದಲಿಗೆ ಲೈಟ್ ಬಾಯ್ ಆಗಿ ಕಾಲಿಟ್ಟು ನಂತರದ ದಿನಗಳಲ್ಲಿ ತಮ್ಮ ಸ್ವಂತ ಪರಿಶ್ರಮ ಹಾಗೂ ದೃಡ ನಿರ್ಧಾರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ನಮಗೆ ಹಲವಾರು ವಿಷಯಗಳಲ್ಲಿ ತುಂಬಾ ಇಷ್ಟವಾಗುತ್ತಾರೆ. ಇವರ ಸರಳ ಜೀವನ ಹಾಗೂ ವಿನಯ ಎಲ್ಲರನ್ನೂ ಕೂಡ ಮನ ಗೆಲ್ಲುತ್ತದೆ.

ಅಷ್ಟೊಂದು ಸಾಧಿಸಿದ್ದರೂ ಸಹ ಜನಸಾಮಾನ್ಯರಿಗೆ ಇವರು ಕೊಡುವ ಮರ್ಯಾದೆ ಹಾಗು ಗೌರವಗಳು ಇವರ ವ್ಯಕ್ತಿತ್ವವನ್ನು ಎತ್ತಿ ಹಿಡಿಯುತ್ತದೆ. ಇದಕ್ಕಾಗಿ ತಾನೆ ಜನರು ಅವರನ್ನು ಮನಃಪೂರ್ವಕವಾಗಿ ನೆಚ್ಚಿನ ಡಿ ಬಾಸ್ ಎಂದು ಕರೆಯುವುದು. ತಮ್ಮ ಬಳಿ ಬರುವ ಪ್ರತಿಯೊಬ್ಬ ಜನಸಾಮಾನ್ಯರಿಗೂ ತನ್ನ ಕೈಲಾದಷ್ಟು ಸಹಾಯ ಮಾಡುವ ಬಂಗಾರದ ಮನಸ್ಸುಳ್ಳ ವ್ಯಕ್ತಿತ್ವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದು. ಇನ್ನು ಚಿತ್ರರಂಗದಲ್ಲಿ ಬಂದರೆ ಯಾವುದೇ ಹೊಸ ಪ್ರತಿಭೆಗಳು ಹಾಗೂ ಉತ್ತಮ ಪ್ರತಿಭೆಯನ್ನು ಹೊಂದಿರುವಂತಹ ನಟರನ್ನು ಗುರುತಿಸಿ,

ಅವರಿಗೆ ಬೇಕಾದಂತಹ ಪ್ರೋತ್ಸಾಹವನ್ನು ಅವರು ಕೇಳದಿದ್ದರೆ ಸಹ ನೀಡುವಂತಹ ಒಳ್ಳೆಯ ಮನಸ್ಸು ನಮ್ಮ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ನೆಚ್ಚಿನ ದಾಸನದ್ದು. ಇನ್ನು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಆ ವಿಡಿಯೋದಲ್ಲಿ ಏನಿತ್ತು ಜನರು ಮೆಚ್ಚುವಂತದ್ದು ಏನಾಗಿತ್ತು ಎಂಬುದನ್ನು ನಾವು ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಇತ್ತೀಚೆಗಷ್ಟೇ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ರವರು ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ಇವರ ಕುರಿತಂತೆ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು. ಒಂದು ಕಾರ್ಯಕ್ರಮವೊಂದರಲ್ಲಿ ಎಲ್ಲಾ ಗಣ್ಯರು ಮುಂದೆ ಇದ್ದಾಗ ಸಂಚಾರಿ ವಿಜಯ್ ರವರನ್ನು ಕಡೆಗಣಿಸಲಾಗಿತ್ತು.

ಆಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಸಂಚಾರಿ ವಿಜಯ್ ಅವರನ್ನು ವೇದಿಕೆಯ ಮುಂಭಾಗಕ್ಕೆ ಹೇಳಿದ್ದೊಂದು ಬನ್ನಿ ಹೀರೋ ನೀವು ಮುಂದೆ ಇರಬೇಕು ಎಂದು ಪ್ರೋತ್ಸಾಹದ ನುಡಿಗಳನ್ನಾಡಿ ರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಎಲ್ಲರ ಮೆಚ್ಚುಗೆಯನ್ನು ಪಡೆದಿದೆ. ಇದಕ್ಕೆ ತಾನೆ ಡಿ ಬಾಸ್ ನಮಗೆ ಇಷ್ಟ ಆಗೋದು ಇದೇ ಗುಣವೇ ತಾನೇ ಅವರಿಗೆ ಕೋಟ್ಯಾಂತರ ಅಭಿಮಾನಿಗಳನ್ನು ತಂದುಕೊಟ್ಟಿರುವುದು. ಈ ವಿಡಿಯೋ ಬರೆದಂತೆ ನಿಮ್ಮ ಅನಿಸಿಕೆ ಹಾಗು ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.