Neer Dose Karnataka
Take a fresh look at your lifestyle.

ಈ ವಾರದ ಎಲಿಮಿನೇಷನ್ ಪ್ರಕ್ರಿಯೆಗೆ ಟ್ವಿಸ್ಟ್ ನೀಡಿ ಸ್ಪರ್ಧಿಗಳಿಗೆ ಶಾಕ್ ನೀಡಿದ ಬಿಗ್ ಬಾಸ್, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಕೊನೆಯ ದಿನಗಳು ಹತ್ತಿರವಾಗುತ್ತಿದ್ದಂತೆ ಪ್ರತಿ ಕ್ಷಣವು ಕೂಡ ಸ್ಪರ್ಧಿಗಳ ನಡುವೆ ಸಾಕಷ್ಟು ಪೈಪೋಟಿ ಏರ್ಪಟ್ಟಿದೆ, ಇನ್ನೇನು ಕೆಲವೇ ಕೆಲವು ವಾರಗಳು ಮನೆಯಲ್ಲಿ ಸೇಫ್ ಆದರೆ ಫೈನಲ್ ವಾರದವರೆಗೆ ತಲುಪಬಹುದು ಎಂಬುದು ಪ್ರತಿಯೊಬ್ಬರ ಸ್ಪರ್ಧಿಗಳ ಲೆಕ್ಕಾಚಾರವಾಗಿದೆ. ಇಷ್ಟು ದಿವಸ ಒಂದು ವಾರ ಎರಡು ವಾರ 4 ವಾರ ಎಂಬ ಲೆಕ್ಕಾಚಾರಗಳನ್ನು ಆಟವಾಡುತ್ತಿದ್ದ ಸ್ಪರ್ಧಿಗಳು ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಫೈನಲ್ ವಾರದ ತಲುಪಬೇಕು ಎಂದು ಆಟವಾಡುತ್ತಿದ್ದಾರೆ.

ಹೀಗಿರುವಾಗ ಪ್ರತಿಯೊಬ್ಬ ಸ್ಪರ್ಧಿಗಳು ಕೂಡ ಮನೆಯಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಂಡು ಪ್ರೇಕ್ಷಕರಿಗೆ ಹತ್ತಿರವಾಗುವ ಕೆಲಸ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ಇನ್ನು ಹೀಗೆ ತಾವು ಪ್ರೇಕ್ಷಕರಿಗೆ ಹತ್ತಿರವಾಗುವ ಸಮಯದಲ್ಲಿ ನಮಗೆ ಕಾಂಪಿಟೇಶನ್ ನೀಡುವ ಇತರ ಸ್ಪರ್ಧಿಗಳು ಮನೆಯಿಂದ ಹೊರ ಹೋದರೆ ಸಾಕು ಎಂದು ಕಾದು ಕುಳಿತಿದ್ದಾರೆ. ಅದೇ ಕಾರಣಕ್ಕಾಗಿ ಇದೀಗ ಎಲಿಮಿನೇಷನ್ ನಲ್ಲಿ ಈ ವಾರ ಬಿಗ್ ಬಾಸ್ ಹೊಸದೊಂದು ಟ್ವಿಸ್ಟ್ ನೀಡಿದ್ದಾರೆ.

ಹೌದು ಸ್ನೇಹಿತರೇ ಈ ವಾರದ ನಾಮಿನೇಷನ್ ಪ್ರಕ್ರಿಯೆಯಲ್ಲಿ ಬದಲಾವಣೆಯನ್ನು ತರಲಾಗಿದ್ದು ಸರಣಿ ಟಾಸ್ಕ್ ಗಳನ್ನು ನೀಡುವ ಮೂಲಕ ನಾಮಿನೇಷನ್ ಯಾರು ಆಗಬೇಕು ಎಂಬುದನ್ನು ಬಿಗ್ಬಾಸ್ ನಿರ್ಧಾರ ಮಾಡಿದ್ದಾರೆ. ವಿಜಯ ಯಾತ್ರೆ ಹಾಗೂ ನಿಂಗ ಐತೆ ಇರು ತಂಡದ ನಡುವೆ ನಡೆದ ಈ ಸರಣಿ ಟಾಸ್ಕ್ ಗಳಲ್ಲಿ ನಿಂಗ ಐತೆ ಇರು ಇರೋ ತಂಡ ಗೆಲುವು ದಾಖಲಿಸಿದ್ದು, ವಿಜಯಯಾತ್ರೆ ತಂಡದ ನಾಯಕ ಅರವಿಂದ್ ಅವರನ್ನು ಹೊರತುಪಡಿಸಿ ಪ್ರಶಾಂತ್ ಸಂಬರ್ಗಿ ಪ್ರಿಯಾಂಕಾ ತಿಮ್ಮೇಶ್ ಶುಭ ಪೂಂಜಾ ಹಾಗೂ ವೈಷ್ಣವಿ ಗೌಡ ರವರು ನಾಮಿನೇಟ್ ಆಗಿದ್ದಾರೆ. ಈ ನಾಲ್ವರಲ್ಲಿ ಇವರ ಮನೆಯಿಂದ ಹೊರ ಹೋಗುವುದು ಖಚಿತವಾಗಿದೆ ನಿಮ್ಮ. ಅಭಿಪ್ರಾಯದ ಪ್ರಕಾರ ಮನೆಯಿಂದ ಯಾರು ಹೊರ ಹೋಗಬೇಕು ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

Comments are closed.