Neer Dose Karnataka
Take a fresh look at your lifestyle.

ವೀರಪ್ಪನ್ ಜೊತೆ ಕಾಡಿನಲ್ಲಿ ಇದ್ದಾಗಲೂ ಕೂಡ ಅಪ್ಪು ಇದೊಂದು ಕೆಲಸ ಮಾಡಿದರೆ ಸಾಕು, ನಾನು ಸತ್ತರು ಪರವಾಗಿಲ್ಲ ಎನ್ನುತ್ತಿದ್ದ ಅಣ್ಣಾವ್ರು.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಕಂಗಾಲಾಗಿದೆ. ಉತ್ಸಾಹ ಹಾಗೂ ನಗುವಿನ ಚಿಲುಮೆಯಾಗಿದ್ದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ಮೇಲೆ ಕನ್ನಡ ಚಿತ್ರರಂಗ ಸಂಪೂರ್ಣವಾಗಿ ದುಃಖವನ್ನು ಆವರಿಸಿಕೊಂಡುಬಿಟ್ಟಿದೆ.

ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ನಂತರ ಅವರ ಕುಟುಂಬಸ್ಥರಿಗೆ ಸಾಂತ್ವನವನ್ನು ಹೇಳಲು ಬೇರೆ ಬೇರೆ ರಾಜ್ಯದ ಬೇರೆ ಬೇರೆ ಗಣ್ಯವ್ಯಕ್ತಿಗಳು ಸದಾಶಿವನಗರದಲ್ಲಿರುವ ಅಪ್ಪು ನಿವಾಸಕ್ಕೆ ಹಾಗೂ ನಾಗವರ ದಲ್ಲಿರುವ ಮಾನ್ಯತಾ ಟೆಕ್ ಪಾರ್ಕ್ ನ ಹಿಂದೆ ಇರುವ ಶಿವಣ್ಣನವರ ನಿವಾಸಕ್ಕೆ ಸಾಲುಗಟ್ಟಿ ಬರುತ್ತಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ ಪತ್ರಕರ್ತ ನಕ್ಕೀರನ್ ಗೋಪಾಲ್ ರವರು ಕೂಡ ಬಂದಿದ್ದಾರೆ. ನಕ್ಕೀರನ್ ಗೋಪಾಲ್ ರವರ ಕುರಿತಂತೆ ನೀವು ಕೂಡ ಈ ಹಿಂದೆ ಅಣ್ಣಾವ್ರನ್ನು ವೀರಪ್ಪನ್ ಅಪಹರಿಸಿದ ಸಂದರ್ಭದಲ್ಲಿ ಕೇಳಿರಬಹುದು. ಈ ಹಿಂದೆ ಅವರು ಅಣ್ಣಾವ್ರನ್ನು ವೀರಪ್ಪನ್ ಸಂದರ್ಶಿಸಿದಾಗ ಒಂದು ಮಾತು ಹೇಳಿದ್ದರಂತೆ.

ಹೌದು ಅಪ್ಪು ರವರ ಕುರಿತಂತೆ ಅಣ್ಣಾವ್ರು ನಕ್ಕಿರನ್ ಗೋಪಾಲನ್ ಅವರ ಬಳಿ ಅಪ್ಪು ಬಿಸಿನೆಸ್ ಅಂತ ಹೋಗುತ್ತಿದ್ದಾನೆ ಅವನು ಚಿತ್ರರಂಗಕ್ಕೆ ನಟಿಸಲು ಬಂದರೆ ಸಾಕು ನಾನು ಸ’ತ್ತರೂ ಪರವಾಗಿಲ್ಲ ಎಂಬುದಾಗಿ ಹೇಳಿದ್ದಾರಂತೆ. ಇದನ್ನು ನಕ್ಕಿರನ್ ಗೋಪಾಲನ್ರವರು ಅಪ್ಪು ಅವರ ಬಳಿ ಕೂಡ ಹೇಳಿದ್ದರಂತೆ. ಆದರೆ ಇಂದು ನಟನಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ದೇಶದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಅವರೇ ಈಗ ನಮ್ಮೊಂದಿಗೆ ಇಲ್ಲ. ಕಾಲ ಎನ್ನುವುದು ನಶ್ವರ ಗೆಳೆಯರೇ ಅದು ಯಾವಾಗ ತನ್ನ ನಿರ್ಧಾರವನ್ನು ಮಾಡಿಬಿಡುತ್ತದೆ ತಕ್ಷಣ ನಾವು ಹೊರಡಲೇ ಬೇಕು.

Comments are closed.