Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಕಲಿಯುಗ ಅಂತ್ಯ ಹತ್ತಿರಲ್ಲೇ ಇದೆಯಂತೆ, ಡೇಟ್ ಕೂಡ ಫಿಕ್ಸ್ ಮಾಡಿ ತಿಳಿಸಿದ ಬ್ರಹ್ಮಾಂಡ ಗುರೂಜಿ, ಯಾವಾಗ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕಳೆದ ಎರಡು ವರ್ಷಗಳಿಂದ ಇಡೀ ಜಗತ್ತೇ ಎಂತಹ ಸಂಕಷ್ಟದಲ್ಲಿ ಸಿಲುಕಿದೆ ಎಂಬುದು ನಿಮಗೆ ಗೊತ್ತಿರುವ ವಿಷಯವಾಗಿದೆ. ಹಲವಾರು ರೀತಿಯ ಪ್ರಕೃತಿ ವಿಕೋಪಗಳು ರೋಗರುಜಿನಗಳನ್ನು ಮರಣ ವಾರ್ತೆಯನ್ನು ಕೇಳಿ ಬಿಟ್ಟಿದ್ದೇವೆ. ಮೊದಲಿಗೆ ನಮ್ಮ ಭಾರತ ದೇಶಕ್ಕೆ ಮತ್ತು ಇಡೀ ವಿಶ್ವಕ್ಕೆ ಅಂಟಿಕೊಂಡಿದ್ದು ಈ ಮಹಾಮಾರಿ. ಮಹಾಮಾರಿಯ ಕಾರಣಕ್ಕಾಗಿ ಲಾಕ್ ಡೌನ್ ಅನ್ನು ವಿಧಿಸಿ ಯಾರು ಕೂಡ ಹೊರಬರದಂತೆ ಮಾಡಲಾಗಿತ್ತು.

ಈ ಸಂದರ್ಭದಲ್ಲಿ ಅದೆಷ್ಟೋ ಜನರು ಕೆಲಸವಿಲ್ಲದೆ ಕೈಯಲ್ಲಿ ಕಾಸು ಇಲ್ಲದೆ ತಮ್ಮ ಜೀವನವನ್ನು ಕಳೆದುಕೊಂಡಿದ್ದರು. ಇನ್ನು ಸುಶಾಂತ್ ಸಿಂಗ್ ರಜಪೂತ್ ಬುಲೆಟ್ ಪ್ರಕಾಶ್ ಚಿರು ಸರ್ಜಾ ಸಂಚಾರಿ ವಿಜಯ್ ಹಾಗೂ ಇತ್ತೀಚಿಗಷ್ಟೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಂತಹ ಅದೆಷ್ಟು ಪ್ರತಿಭಾನ್ವಿತರನ್ನು ಇತ್ತೀಚಿನವರೆಗೂ ನಾವು ಕಳೆದುಕೊಂಡಿದ್ದೇವೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಕಳೆದ ಎರಡು ವರ್ಷಗಳು ಮನುಕುಲಕ್ಕೆ ಶಾಪದಂತೆ ಇತ್ತು. ಈ ಸಂದರ್ಭದಲ್ಲಿ ಮತ್ತೆ ಈಗ ಹೊಸ ವಿಚಾರಗಳು ಕೇಳಲು ಆರಂಭವಾಗಿದ್ದಾವೆ.

ಹೌದು ಸ್ನೇಹಿತರೆ ನಿಮಗೆ ಬ್ರಹ್ಮಾಂಡ ಸ್ವಾಮೀಜಿಗಳು ಗೊತ್ತಿರಬಹುದು ಅಲ್ಲವೇ. ಜ್ಯೋತಿಷ್ಯ ಶಾಸ್ತ್ರಗಳ ಪರಿಣತರಾಗಿರುವ ಬ್ರಹ್ಮಾಂಡ ಗುರೂಜಿಗಳು ಈಗಾಗಲೇ ಒಂದು ಭವಿಷ್ಯವನ್ನು ನುಡಿದಿದ್ದು ಎಲ್ಲರೂ ಕೂಡ ಆತಂಕ ಹಾಗೂ ಆಶ್ಚರ್ಯಗಳಿಂದ ಈ ವಿಚಾರವನ್ನು ಕೇಳುತ್ತಿದ್ದಾರೆ. ಅದೇನೆಂದರೆ ಈ ಡಿಸೆಂಬರ್ ನಿಂದ ಕಲಿಯುಗ ಅಂತ್ಯವಾಗಲಿದೆ ಎಂಬ ಮಾತು. ಮುಂದಿನ ವರ್ಷ ಜನವರಿಯಿಂದ ಹೊಸಯುಗ ಪ್ರಾರಂಭವಾಗಲಿದೆ ಎಂದು ಬ್ರಹ್ಮಾಂಡ ಗುರೂಜಿಗಳು ಹೇಳಿದ್ದಾರೆ. ಇನ್ನು ಇದನ್ನು ಕೇವಲ ಸಿಮ್ ನ್ನು ಹೊಸ ಫೋನಿಗೆ ಹಾಕಿದಷ್ಟೇ ಬದಲಾವಣೆ ಎಂಬುದಾಗಿ ಹೋಲಿಸಿ ಮಾತನಾಡಿದ್ದಾರೆ ಬ್ರಹ್ಮಾಂಡ ಗುರೂಜಿಗಳು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳೇನು ಎಂಬುದನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.