Neer Dose Karnataka
Take a fresh look at your lifestyle.

ಜೀವನದಲ್ಲಿ ಎಲ್ಲಾ ರೀತಿಯ ಕಷ್ಟಗಳನ್ನು ನೋಡಿರುವ ಮಂಜು ರವರ ಮೊದಲ ಐಷಾರಾಮಿ ಬರ್ತಡೆ ಸೆಲೆಬ್ರೇಶನ್ ಹೇಗಿತ್ತು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ ಎಂಟರಲ್ಲಿ ಗೆದ್ದಮೇಲೆ ಮಂಜು ಪಾವಗಡ ರವರ ಅದೃಷ್ಟವೇ ಬದಲಾಗಿ ಹೋಗಿದೆ. ನಿಮಗೆಲ್ಲ ತಿಳಿದಿರುವಂತೆ ಮಂಜು ಪಾವಗಡ ರವರು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲದಿಂದ ಬೆಂಗಳೂರಿನ ಜೆಪಿ ನಗರದ ಪೆಟ್ರೋಲ್ ಬಂಕಿಗೆ ಬಂದವರು. ಅಲ್ಲಿ ಕೆಲಸ ಮಾಡಿಕೊಳ್ಳುತ್ತಾ ತಮ್ಮಲ್ಲಿದ್ದ ನಟಿಸುವ ಆಸಕ್ತಿಯ ಮಾತನ್ನು ಕೇಳಿ ಮಜಾಭಾರತ ಆಡಿಶನ್ ನಲ್ಲಿ ಪಾಸಾಗಿ ವೇದಿಕೆಯ ಮೇಲೂ ಕೂಡ ತಮ್ಮ ಪ್ರತಿಭೆಯನ್ನು ಅನಾವರಣ ಮಾಡಿ ಕನ್ನಡ ಪ್ರೇಕ್ಷಕರು ಮನವನ್ನು ಗೆಲ್ಲಲು ಯಶಸ್ವಿಯಾಗುತ್ತಾರೆ.

ಮಜಾಭಾರತ ಕಾರ್ಯಕ್ರಮದಲ್ಲಿ ಮಂಜು ಪಾವಗಡ ರವರು ಪಡೆದುಕೊಂಡ ಜನಪ್ರಿಯತೆ ಅವರನ್ನು ನೇರವಾಗಿ ತಂದು ನಿಲ್ಲಿಸಿದ್ದು ಕನ್ನಡದ ಅತ್ಯಂತ ದುಬಾರಿ ರಿಯಾಲಿಟಿ ಶೋ ಎಂದೇ ಜನಜನಿತವಾಗಿರುವ ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಿಕೊಡುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ. ತಮ್ಮ ಸದಾಕಾಲದ ಹಾಸ್ಯ ಪ್ರವೃತ್ತಿಯಿಂದಾಗಿ ಎಲ್ಲರ ಮನವನ್ನು ಮಾತ್ರವಲ್ಲದೆ ವೀಕ್ಷಕರ ಮನವನ್ನು ಕೂಡ ಗೆಲ್ಲಲು ಮಂಜು ಪಾವಗಡ ಯಶಸ್ವಿಯಾಗಿ ದಾಖಲೆಯ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ.

ಇನ್ನು ಮಂಜು ಪಾವಗಡ ರವರು ಬಿಗ್ ಬಾಸ್ ನಲ್ಲಿ 50ಲಕ್ಷ ಹಣವನ್ನು ಗೆದ್ದ ನಂತರ ಮನೆಯನ್ನು ಕೂಡ ನಿರ್ಮಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಸಿನಿಮಾಗಳಿಂದ ಹಲವಾರು ಆಫರ್ ಗಳು ಕೂಡ ಅವರಿಗೆ ಹುಡುಕಿಕೊಂಡು ಬರುತ್ತಿವೆ. ಇನ್ನು ಇತ್ತೀಚಿಗೆ ಮಂಜು ಪಾವಗಡ ರವರು ತಮ್ಮ ಜನ್ಮದಿನಾಚರಣೆಯನ್ನು ಸ್ನೇಹಿತರೊಂದಿಗೆ ಆಚರಿಸಿಕೊಂಡಿದ್ದು ಅವರ ಫೋಟೋಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ನೀವು ಕೂಡ ಈ ಕೆಳಗಡೆ ಆ ವಿಡಿಯೋಗಳನ್ನು ನೋಡಬಹುದಾಗಿದೆ.

Comments are closed.