Neer Dose Karnataka
Take a fresh look at your lifestyle.

ಕರ್ಕಾಟಕ ರಾಶಿ ಪ್ರವೇಶ ಮಾಡಿದ ಸೂರ್ಯ ದೇವ. ಇದರಿಂದ ಯಾರೆಲ್ಲ ಅದೃಷ್ಟ ಬೆಳಗಲಿದೆ ಗೊತ್ತೇ?? ಕಷ್ಟದ ದಿನಗಳು ಯಾರ್ಯಾರಿಗೆ ಮುಗಿಯಲಿದೆ ಗೊತ್ತೇ?

ಜುಲೈ 16 ರಂದು, ಸೂರ್ಯದೇವ ತನ್ನ ರಾಶಿಯಂನಹ್ ಬದಲಾಯಿಸಲಿದ್ದಾನೆ. ಕರ್ಕಾಟಕ ರಾಶಿಗೆ ಸೂರ್ಯದೇವನ ಪ್ರವೇಶ ಆಗಲಿದ್ದು, ಇದರಿಂದಾಗಿ ಸೂರ್ಯನ ಸಂಚಾರವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಚಂದ್ರನು ಕರ್ಕಾಟಕ ರಾಶಿಯ ಅಧಿಪತಿಯಾಗಿರುವುದರಿಂದ, ಸೂರ್ಯದೇವ ಚಂದ್ರನ ಅತಿಥಿಯಾಗಿದ್ದಾನೆ. ಆದರೆ ಕುಂಭ ರಾಶಿಯ ಮೇಲೆ ಸೂರ್ಯದೇವನ ಪರಿಣಾಮ ಕೂಡಿ ಬರಲಿದೆ.

ಕುಂಭ ರಾಶಿಯವರು ಯಾವುದೇ ಯೋಜನೆಯನ್ನು ಕೈಗೊಂಡರೂ ಯಶಸ್ವಿಯಾಗುತ್ತಾರೆ. ಉದ್ಯೋಗಾಕಾಂಕ್ಷಿಗಳಿಗೆ ಈ ಸಮಯವು ಎಲ್ಲ ರೀತಿಯಿಂದಲೂ ಒಳ್ಳೆಯದು. ವ್ಯಾಪಾರದಲ್ಲಿ ಲಾಭವು ಉತ್ತಮವಾಗಿರುತ್ತದೆ. ಹೊಸ ವಸ್ತುಗಳು, ಹೊಸ ಬಟ್ಟೆಗಳನ್ನು ಖರೀದಿಸುವ ಮೂಲಕ ನೀವು ಲಾಭ ಪಡೆಯುವಿರಿ. ಇದಲ್ಲದೆ, ಆ ರಾಶಿಯವರ ವೃತ್ತಿಜೀವನವು ಅದ್ಭುತವಾಗಿರುತ್ತದೆ. ಜಮೀನು, ಆಸ್ತಿ, ಕಚೇರಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ನಡೆಯುತ್ತಿದ್ದರೆ ಆವುಗಳಿಂದ ಯಶಸ್ಸು ಪಡೆಯುತ್ತೀರಿ.

ಬಹಳ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಅದರಿಂದ ಮುಕ್ತಿ ಸಿಗುತ್ತದೆ. ಸರ್ಕಾರಿ ಅಧಿಕಾರಿಗಳ ಬಳಿ ಯಾವುದೇ ಕೆಲಸ ಬಾಕಿ ಇದ್ದರೆ ಆ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ಕುಟುಂಬ ಮತ್ತು ವ್ಯಾಪಾರ ವಿಷಯಗಳಲ್ಲಿ ಲಾಭ ಸಿಗುತ್ತದೆ. ಸಮಾಜದಲ್ಲಿ ನಿಮ್ಮ ಮನ್ನಣೆ ಹೆಚ್ಚಾಗುತ್ತದೆ. ಸೂರ್ಯನ ರಾಶಿ ಬದಲಾವಣೆ ಅವರ ಅದೃಷ್ಟವನ್ನು ಹೆಚ್ಚಿಸುತ್ತದೆ. ಇದರಿಂದಾಗಿ ಖ್ಯಾತಿ ಹೆಚ್ಚಾಗುತ್ತದೆ. ಈ ಜನರು ತಮಗೆ ಬೇಕಾದುದನ್ನು ಸಾಧಿಸುತ್ತಾರೆ.

Comments are closed.