Neer Dose Karnataka
Take a fresh look at your lifestyle.

ಎಲ್ಲಾ ಗಾಳಿ ಸುದ್ದಿಗಳಿಗೆ ಬ್ರೇಕ್: ಕೊನೆಗೂ ತಾನೇ ಕ್ಯಾಮೆರಾ ಮುಂದೆ ಬಂದು ತನ್ನ ಒಟ್ಟು ಆಸ್ತಿಯ ಮೌಲ್ಯ ತಿಳಿಸಿದ ಆರ್ಯವರ್ಧನ್ ಗುರೂಜಿ. ಎಷ್ಟು ಅಂತೇ ಗೊತ್ತೇ??

ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಅನೇಕ ಕಾರಣಗಳಿಂದ ಕುತೂಹಲ ಹೆಚ್ಚಿಸಿದೆ, ಓಟಿಟಿ ನಲ್ಲಿ ಮಾತ್ರ ಪ್ರಸಾರ ಆಗುತ್ತಿರುವ ಕಾರಣ ವೀಕ್ಷಕರಿಗೆ ಹೆಚ್ಚಾಗಿ ಬೇಸರವೇ ಆಗಿದೆ ಎಂದರೆ ತಪ್ಪಾಗುವುದಿಲ್ಲ. ಈ ಬಾರಿ ಮನೆಗೆ ಬಂದಿರುವ ಸ್ಪರ್ಧಿಗಳ ಮೇಲು ಸಹ ಪರ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಸೋನು ಶ್ರೀನಿವಾಸ್ ಗೌಡ, ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯೊಳಗೆ ಹೋಗಿರುವುದು ಜನರಿಗೆ ಇಷ್ಟವಾಗಿಲ್ಲ. ಈ ನಡುವೆ ನಾನು ಯಾರು ಟಾಸ್ಕ್ ನಲ್ಲಿ ಆರ್ಯವರ್ಧನ್ ಗುರೂಜಿ ಆಡಿರುವ ಮಾತುಗಳು, ಹಾಗೂ ಅವರ ಆಸ್ತಿ ಮೌಲ್ಯ ಕೇಳಿ ಬಿಗ್ ಬಾಸ್ ವೀಕ್ಷಕರು ಹಾಗೂ ಮನೆಯ ಸ್ಪರ್ಧಿಗಳು ಶಾಕ್ ಆಗಿದ್ದಾರೆ.

ಆರ್ಯವರ್ಧನ್ ಗುರೂಜಿ ಹೇಳಿರುವ ಪ್ರಕಾರ, ಅವರು ಹಾಸನದವರು, “ಹಾಸನ ಮತ್ತು ಬೇಲೂರು ನಡುವೆ ನಮ್ಮದು 40 ಎಕರೆ ಭೂಮಿ ಇದೆ. ಸುತ್ತ ಮುತ್ತ ಕಾಡು, ಬೆಟ್ಟದ ಪ್ರದೇಶ ಮೂರು ಕೆರೆ ಇದೆ. ಅಲ್ಲಿ ಯಾವುದೇ ಮನೆ ಇಲ್ಲ. ಎಲ್ಲರೂ ಸಿಟಿ ಬಿಟ್ಟು ಹಳ್ಳಿಗೆ ಬರುತ್ತಾರೆ, ನಾವು ಹಳ್ಳಿಯಿಂದ ಸಿಟಿಗೆ ಬಂದವರು. ನಮಗೆ ಹಳ್ಳಿ ಅಂದ್ರೆ ಬೋರ್ ಆಗಿದೆ. ತುಂಬಾ ಜಮೀನು ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿಯನ್ನ ಪೂರ್ತಿ ಲೆಕ್ಕ ಹಾಕಿದರೆ, 5000 ಕೋಟಿ ಬೆಲೆ ಬಾಳುತ್ತದೆ. ನಾನು ಮನೆ ಬಿಟ್ಟು ಓಡಿ ಬಂದೆ ನನಗೂ ಆಸ್ತಿ ಕೊಟ್ಟಿದ್ದಾರೆ. ಅದರಲ್ಲಿ ನಾನು ಸಂತೋಷವಾಗಿದ್ದೀನಿ. ನಾನು ಯಾವ ರೀತಿಯ ಕಷ್ಟವನ್ನು ಪಟ್ಟಿಲ್ಲ.

ಕೇಳಿದವರಿಗೆಲ್ಲ ಹಣ ಸಹಾಯ ಮಾಡಿದ್ದೀನಿ. ಚೆನ್ನಾಗಿ ಜೀವನ ನಡೆಸುತ್ತಿದ್ದೀನಿ. ಚಿತ್ರರಂಗದವರಿಗೂ ಸಹಾಯ ಮಾಡಿದ್ದೀನಿ. ದೊಡ್ಡ ದೊಡ್ಡ ನಿರ್ಮಾಪಕರು ಮತ್ತು ನಿರ್ದೇಶಕರು ನನ್ನ ಸಹಾಯ ಪಡೆದಿದ್ದಾರೆ. ಅವರಿಗೆ ಹಣ ನೀಡಿದ್ದೀನಿ..” ಎಂದು ಆರ್ಯವರ್ಧನ್ ಗುರೂಜಿ ತಮ್ಮ ಬಗ್ಗೆ ತಾವು ಹೇಳಿಕೊಂಡಿದ್ದು, ಅವರ ಮಾತುಗಳನ್ನು ಕೇಳಿ, ಮನೆಯಲ್ಲಿರುವ ಸ್ಪರ್ಧಿಗಳು ಮತ್ತು ಹೊರಗಿನ ವೀಕ್ಷಕರಿಗೂ ಸಹ ಶಾಕ್ ಆಗಿದೆ. ಈ ವಿಚಾರದಿಂದ ಈಗ ಆರ್ಯವರ್ಧನ್ ಗುರೂಜಿ ಬಗ್ಗೆ ಹೆಚ್ಚಿನ ಚರ್ಚೆಗಳು ಸಹ ಶುರುವಾಗಿದೆ.

Comments are closed.