Neer Dose Karnataka
Take a fresh look at your lifestyle.

ತೆಲುಗಿನ ಖ್ಯಾತ ನಟಿ ಕಾಜಲ್ ರವರಿಗೆ ಖಡಕ್ ವಾರ್ನಿಂಗ್ ಕೊಟ್ಟ ನಟ ಚಿರಂಜೀವಿ: ಮಗನ ವಿಚಾರಕ್ಕೆ ಖಡಕ್ ಆಗಿ ಹೇಳಿದ್ದೇನು ಗೊತ್ತೇ??

ಮೆಗಾಸ್ಟಾರ್ ಚಿರಂಜೀವಿ ಅವರ ಉತ್ತರಾಧಿಕಾರಿಯಾಗಿ ಎಂಟ್ರಿ ಕೊಟ್ಟ ರಾಮ್ ಚರಣ್ ಅಪ್ಪನ ಕಿರಿಯ ಉತ್ತರಾಧಿಕಾರಿಯಾಗಿ ಮಿಂಚುತ್ತಿದ್ದಾರೆ. ಅವರ ಚಿತ್ರಗಳು ಈಗಾಗಲೇ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿವೆ. ಕೆಲವೇ ಜನರು ಈ ರೀತಿ ಪಿತೃ ಪರಂಪರೆಯನ್ನು ಮುಂದುವರಿಸುತ್ತಾರೆ. ಅಂತಹವರ ಮೊದಲ ಸಾಲಿನಲ್ಲಿ ಚರಣ್ ಇರುತ್ತಾರೆ ಎಂದೇ ಹೇಳಬೇಕು. ಆದರೆ, ಅವರ ಮೊದಲ ಚಿತ್ರ ನಿರೀಕ್ಷಿತ ಯಶಸ್ಸು ನೀಡಲಿಲ್ಲ. ಮೊದಲ ಸಿನಿಮಾದಲ್ಲಿ ಚರಣ್ ನಟನೆ ಕೂಡ ಆಗ ಕೆಟ್ಟದಾಗಿ ಟ್ರೋಲ್ ಆಗಿತ್ತು. ಆದರೆ ಎರಡನೇ ಸಿನಿಮಾದಲ್ಲಿ ತಮ್ಮ ಶಕ್ತಿ ತೋರಿಸಿದ್ದರು.

ಆ ಸಿನಿಮಾ ದೊಡ್ಡ ಹಿಟ್ ಅಷ್ಟೇ ಅಲ್ಲ, ಮಗಧೀರ ಸಿನಿಮಾ ಇಂದ ಟಾಲಿವುಡ್ ಇಂಡಸ್ಟ್ರಿಯಲ್ಲಿ ಟಾಪ್ ಹೀರೋ ಆದರು ರಾಮ್ ಚರಣ್. ಅಂದಿನಿಂದ ಅವರು ಹಿಂತಿರುಗಿ ನೋಡುವ ಅಗತ್ಯವೇ ಇರಲಿಲ್ಲ. ಆ ನಂತರ ಅವರ ಚಿತ್ರಗಳು ಯಾವ ರೇಂಜ್ ನಲ್ಲಿ ಹಿಟ್ ಆಗುತ್ತಿವೆ ಎಂಬುದನ್ನು ಈಗಲೂ ಸಹ ನೋಡುತ್ತಿದ್ದೇವೆ. ಈ ನಡುವೆ ಮಗಧೀರ ಸಮಯದಲ್ಲಿ ಚರಣ್ ಅಷ್ಟೊಂದು ಸೀರಿಯಸ್ ಆಗಿರಲಿಲ್ಲ. ಯಾರು ಏನೇ ಹೇಳಿದರೂ, ಇಂಡಸ್ಟ್ರಿಗೆ ಆಗಷ್ಟೇ ಕಾಲಿಡುತ್ತಿದ್ದ ಕಾರಣ ಮರು ಮಾತಾಡದೆ ಕೇಳುತ್ತಿದ್ದರಂತೆ. ಇದನ್ನು ಲಘುವಾಗಿ ಪರಿಗಣಿಸಿದ್ದ ನಟಿ ಕಾಜಲ್ ಅಗರ್ವಾಲ್, ಆ ಸಮಯದಲ್ಲಿ ಚರಣ್ ಅವರಿಗೆ ಸ್ವಲ್ಪ ಟಾರ್ಚರ್ ನೀಡಿದ್ದೆ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ.

ಮಗಧೀರ ಸಿನಿಮಾ ಚಿತ್ರೀಕರಣ ಸಮಯಕ್ಕೆ ಸರಿಯಾಗಿ ಆಗುತ್ತಿರಲಿಲ್ಲ. ಶಾಟ್ ಸಿದ್ಧವಾಗುತ್ತಿತ್ತು ಆದರೆ ತಡವಾಗುತ್ತಿತ್ತು. ಆಗ ಆಕೆಯ ವರ್ತನೆಯಿಂದ ಚರಣ್ ಬೇಸರಗೊಂಡಿದ್ದರಂತೆ, ಹಾಗೂ ಅವರಿಂದಾಗಿ ನಿರ್ದೇಶಕ ರಾಜಮೌಳಿ ಅವರು ಕೂಡ ಕೆಲವು ಕಷ್ಟಗಳನ್ನು ಎದುರಿಸಿದ್ದರಂತೆ. ಈ ಬಗ್ಗೆ ಚರಣ್ ಕೂಡ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. ಆದರೆ ಈ ವಿಷಯ ಇನ್ನು ಹೆಚ್ಚಾದಾಗ, ಚಿರಂಜೀವಿ ಅವರ ಬಳಿಗೂ ಈ ವಿಚಾರ ಹೋಗಿ, ಚಿರು ಅವರು ಅದನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡು, ನನ್ನ ಮಗನಿಗೆ ತೊಂದರೆ ಕೊಡುತ್ತೀಯಾ ಎಂದು ಕಾಜಲ್ ಅವರಿಗೆ ವಾರ್ನಿಂಗ್ ಕೊಟ್ಟಿದ್ದರಂತೆ, ಈ ಸುದ್ದಿಯೊಂದು ಆಗಿನ ಸಮಯದಲ್ಲಿ ಕೇಳಿಬಂದಿತ್ತು.

Comments are closed.