ಲಕ್ಷಣ ಧಾರಾವಾಹಿಗೆ ವೈಷ್ಣವಿ ಎಂಟ್ರಿ ಕೊಟ್ಟಿರುವುದು ಯಾಕೆ ಗೊತ್ತೇ?? ಇದರ ಹಿಂದಿರುವ ಕೈವಾಡ ಯಾರದ್ದು ಗೊತ್ತೇ??
ಕಲರ್ಸ್ ಕನ್ನಡ ವಾಹಿನಿಯಲ್ಲಿ ರಾತ್ರಿ 8:30 ಕ್ಕೆ ಪ್ರಸಾರ ಆಗುತ್ತಿರುವ ಧಾರವಾಹಿ ಲಕ್ಷಣ ಈಗ ಭಾರಿ ಟ್ವಿಸ್ಟ್ ಗಳ ಮೂಲಕ ವೀಕ್ಷಕರಿಗೆ ಸಖತ್ ಮನರಂಜನೆ ನೀಡುತ್ತಿದೆ. ಭೂಪತಿ ನಕ್ಷತ್ರ ಗೆ ಇಷ್ಟು ದಿನಗಳ ಕಾಲ ಮೌರ್ಯ ವಿಲ್ಲನ್ ಆಗಿದ್ದನು, ಆದರೆ ಈಗ ಹೊಸ ವಿಲ್ಲನ್ ಎಂಟ್ರಿ ಆಗಿದೆ. ಚಂದ್ರಶೇಖರ್ ತಂಗಿ ಭಾರ್ಗವಿಯೇ ಡೇವಿಲ್ ಆಗಿದ್ದಾಳೆ..ಮನೆಯಲ್ಲೇ ಇದ್ದುಕೊಂಡು ಅಣ್ಣನ ವಿರುದ್ಧವೇ, ಅಣ್ಣನನ್ನೇ ಕೊಲೆ ಮಾಡಬೇಕು ಎಂದು ಹೊಂಚು ಹಾಕುತ್ತಿದ್ದಾಳೆ ಭಾರ್ಗವಿ. ಇಷ್ಟು ವರ್ಷಗಳ ಕಾಲ ಮನೆಯಲ್ಲಿ ಯಾರಿಗೂ ಡೌಟ್ ಬರದ ಹಾಗೆ ಅವರ ಜೊತೆಯಲ್ಲೇ ಇದ್ದಾಳೆ..
ಈ ಡೆವಿಲ್ ಕಥೆ ಒಂದು ಕಡೆ ಸಾಗುತ್ತಿದ್ದರೆ, ಮತ್ತೊಂದು ಕಡೆ ಲಕ್ಷಣ ಧಾರವಾಹಿಗೆ ಈಗ ಹೊಸ ಪಾತ್ರದ ಎಂಟ್ರಿ ಆಗಿದೆ. ಅಗ್ನಿಸಾಕ್ಷಿ ಧಾರವಾಹಿ ನಟಿ ವೈಷ್ಣವಿ ಗೌಡ ಅವರು ಲಕ್ಷಣ ಧಾರವಾಹಿಗೆ ಖಡಕ್ ವಿಲ್ಲನ್ ಪಾತ್ರದಲ್ಲಿ ಎಂಟ್ರಿ ಕೊಟ್ಟಿದ್ದಾರೆ. ಧಾರವಾಹಿಯಲ್ಲಿ ಸಹ ಇವರ ಪಾತ್ರದ ಹೆಸರು ವೈಷ್ಣವಿ. ಬರುತ್ತಿದ್ದ ಹಾಗೆ ನಕ್ಷತ್ರಾಳಿಗೆ ಆವಾಜ್ ಹಾಕಿದ್ದಾರೆ ವೈಷ್ಣವಿ. ನಿನ್ನ ಹೆಂಡಿತಿ ಪಟ್ಟ ಇವತ್ತಿಗೆ ಮುಗೀತು, ಇನ್ಮೇಲೆ ಭೂಪತಿ ಹೆಂಡತಿ ನಾನು.. ಎಂದು ಹೇಳಿದ್ದಾಳೆ ವೈಷ್ಣವಿ. ಈ ಮಾತು ಕೇಳಿ, ನಕ್ಷತ್ರ ಮಾತ್ರವಲ್ಲ ಶ್ವೇತಾ ಕೂಡ ಶಾಕ್ ಆಗಿದ್ದಾಳೆ. ಈ ಹೊಸ ವಿಲ್ಲನ್ ಯಾರು ಎಂದು ಶ್ವೇತಾ ತಲೆಕೆಡಿಸಿಕೊಂಡಿದ್ದಾಳೆ.
ಶ್ವೇತಾ ಮಾತ್ರವಲ್ಲದೆ, ಮನೆಯಲ್ಲಿ ಕುಳಿತು ಧಾರವಾಹಿ ವೀಕ್ಷಿಸುತ್ತಿರುವ ಜನರ ತಲೆಗೂ ಹುಳ ಸೇರಿಕೊಂಡಿದೆ, ಈ ವೈಷ್ಣವಿ ಯಾರು? ಈಗ ಯಾಕೆ ಬಂದಿದ್ದಾಳೆ ಎಂದು ಪ್ರಶ್ನೆ ಶುರುವಾಗಿದ್ದು, ಅದಕ್ಕೀಗ ಉತ್ತರ ಸಿಕ್ಕಿದೆ. ಸಧ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ, ವೈಷ್ಣವಿ ಈಗ ಭೂಪತಿ ಮನೆಗೆ ಬಂದಿರುವುದರ ಹಿಂದೆ ವಿಲ್ಲನ್ ಭಾರ್ಗವಿ ಕೈವಾಡ ಇದೆ. ನಕ್ಷತ್ರಾಗೆ ಟೆನ್ಷನ್ ಕೊಟ್ಟು ಅವಳು ಚಂದ್ರಶೇಖರ್ ವಿಚಾರಕ್ಕೆ ಬರಬಾರದು ಎನ್ನುವ ಹಾಗೆ ಮಾಡಬೇಕು ಎಂದು ಶ್ವೇತಾ ಭೂಪತಿ ಮನೆಗೆ ಹೋಗೋ ಹಾಗೆ ಮಾಡಿದ್ದರು ಕೂಡ ನಕ್ಷತ್ರ ಚಂದ್ರಶೇಖರ್ ವಿಚಾರಕ್ಕೆ ಬರುತ್ತಿದ್ದಾಳೆ. ಹಾಗಾಗಿ ನಕ್ಷತ್ರಾಳ ದಾರಿ ತಪ್ಪಿಸಲು ಈ ಹೊಸ ಪ್ಲಾನ್ ಮಾಡಲಾಗಿದೆ.
Comments are closed.