Neer Dose Karnataka
Take a fresh look at your lifestyle.

ಅಪ್ಪು ಕೊನೆಯ ಸಿನೆಮಾಗೆ ನಡೆದಿದೆ ಮೋಸ: ಕಲೆಕ್ಷನ್ ನಲ್ಲಿ ಬಾರಿ ಕುಸಿತ ಕಾಣಲು ಕಾರಣವೇನು ಗೊತ್ತೇ?? ಗಳಿಸಿದ್ದು ಎಷ್ಟು ಕೋಟಿ ಗೊತ್ತೇ??

ಅಪ್ಪು ಅವರ ಬಹುವರ್ಷಗಳ ಕನಸು ಗಂಧದಗುಡಿ ಈ ಶುಕ್ರವಾರ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಅಪ್ಪು ಅವರನ್ನು ಕೊನೆಯ ಬಾರಿ ದೊಡ್ಡ ಪರದೆಯ ಮೇಲೆ ನೋಡುವ ಅವಕಾಶ ಇದು. ಹಾಗಾಗಿ ಇಡೀ ಕರ್ನಾಟಕದ ಜನತೆ ಗಂಧದಗುಡಿ ಸಿನಿಮಾ ನೋಡಲು ಥಿಯೇಟರ್ ಗೆ ಬರುತ್ತಿದ್ದಾರೆ. ಗಂಧದಗುಡಿ ಸಿನಿಮಾ ಮೂಲಕ ಅಪ್ಪು ಅವರು ಮನುಕುಲಕ್ಕೆ ಬೇಕಾದ ಮೌಲ್ಯಗಳನ್ನು ತಿಳಿಸಿಕೊಟ್ಟಿದ್ದಾರೆ. ತಮ್ಮದೇ ಆದ ಸರಳತೆಯ ಸ್ವಭಾವದಿಂದ ಮಾತೃ ಕರ್ನಾಟಕದ ಸೌಂದರ್ಯದಿಂದ ಅಪ್ಪು ಅವರು ಎಲ್ಲರನ್ನು ಬೇರೆಯದೇ ಲೋಕಕ್ಕೆ ಕರೆದುಕೊಂಡು ಹೋಗುತ್ತಾರೆ ಎಂದು ಹೇಳಬಹುದು.

ಸಿನಿಮಾದಲ್ಲಿ ಅಪ್ಪು ಅವರು ಮತ್ತು ಅಮೋಘವರ್ಷ ಅವರ ಪ್ಲಾನ್ ನ ಪ್ರಕಾರ ಕರ್ನಾಟಕವನ್ನು ಹಿಂದೆಂದೂ ಕಾಣದ ಹಾಗೆ ಅದ್ಭುತವಾಗಿ ತೋರಿಸಲಾಗಿದೆ. ಜೊತೆಗೆ ಅಪ್ಪು ಅವರ ಆ ನಗು ಮತ್ತು ಅವರು ಹೇಳುವ ಕೆಲವು ಮಾತುಗಳು ನಮ್ಮ ಮನಸ್ಸನ್ನು ಕಾಡುತ್ತದೆ. ಮುಂದಿನ ಪೀಳಿಗೆಗೆ ನಾವು ಏನು ನೀಡಬೇಕು ಎಂದು ತಿಳಿಸುತ್ತದೆ ಗಂಧದಗುಡಿ. ಅಪ್ಪು ಅವರು ಕೊನೆಯ ಸಿನಿಮಾದಲ್ಲಿ ತಾವಾಗಿ ಕಾಣಿಸಿಕೊಂಡಿರುವುದು ಇನ್ನು ವಿಶೇಷವಾದ ವಿಷಯ. ಗಂಧದಗುಡಿಯಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಸಹ ವಾಯ್ಸ್ ಓವರ್ ನೀಡಿ, ಶುರುವಿನಲ್ಲಿ ಕಾಣಿಸಿಕೊಂಡಿದ್ದಾರೆ. ಅಪ್ಪು ಅವರು ಆಗಾಗ ತಂದೆಯವರ ಬಗ್ಗೆ ಮಾತನಾಡುವುದು, ಹಳೆಯ ನೆನಪಿಗಳು ಇದೆಲ್ಲವೂ ಸಹ ವೀಕ್ಷಕರ ಕಣ್ಣಲ್ಲಿ ನೀರು ತರಿಸುತ್ತದೆ.

ಅಪ್ಪು ಅವರನ್ನು ಕೊನೆಯ ಸಾರಿ ನೋಡಲು ಅಭಿಮಾನಿಗಳು ಥಿಯೇಟರ್ ಗಳಿಗೆ ನುಗ್ಗಿ ಬರುತ್ತಿದ್ದಾರೆ. ಆದರೆ ಗಂಧದಗುಡಿ ಸಿನಿಮಾಗೆ ಅನ್ಯಾಯ ಆಗುತ್ತಿದೆ ಎಂದು ಹೇಳಬಹುದು ಏಕೆಂದರೆ, ಸಿನಿಮಾ ನೋಡಲು ತುದಿಗಾಲಿನಲ್ಲಿ ನಿಂತಿರುವ ಸಿನಿಪ್ರಿಯರು ಹಾಗೂ ಅಪ್ಪು ಅವರ ಅಭಿಮಾನಿಗಳು, ಎಷ್ಟೇ ಥಿಯೇಟರ್ ನಲ್ಲಿ ಸಿನಿಮಾ ಬಿಡುಗಡೆ ಮಾಡಿದರು ಕೂಡ ಖಂಡಿತವಾಗಿಯು ನೋಡುತ್ತಾರೆ. ಆದರೆ ಬೇರೆ ಭಾಷೆಯ ಸಿನಿಮಾಗಳಿಗೆ ನೀಡುವಷ್ಟು ಥಿಯೇಟರ್ ಗಳನ್ನು ಸಹ ಗಂಧದಗುಡಿ ಸಿನಿಮಾಗೆ ನೀಡಿಲ್ಲ. ಈ ಕಾರಣದಿಂದ ಎರಡು ದಿನಗಳಲ್ಲಿ ಗಂಧದಗುಡಿ ಸಿನಿಮಾ ಗಳಿಸಿರುವುದು ಬಹಳ ಕಡಿಮೆ, ಥಿಯೇಟರ್ ಸಂಖ್ಯೆ ಕಡಿಮೆ ಆಗಿರುವ ಕಾರಣ, ಬಿಡುಗಡೆಯಾದ ಎರಡು ದಿನಗಳಲ್ಲಿ 18 ಕಲೆಕ್ಷನ್ ಮಾಡಿದೆ ಎಂದು ಮಾಹಿತಿ ಸಿಕ್ಕಿದೆ.

Comments are closed.