Neer Dose Karnataka
Take a fresh look at your lifestyle.

Kannada Astrology: ಈ ವಸ್ತುಗಳನ್ನು ಮನೆಗೆ ತಂದರೆ ಏನಾಗುತ್ತದೆ ಎಂದು ತಿಳಿದರೇ, ಸಾಲ ಮಾಡಿ ಆದ್ರೂ ಸರಿ ಇಂದೇ ಮನೆಗೆ ತರುತ್ತೀರಿ.

Kannada Astrology: ಕೆಲವೊಮ್ಮೆ ಜೀವನದಲ್ಲಿ ಎಷ್ಟೇ ಕಷ್ಟಪಟ್ಟು ಏನೇ ಮಾಡಿದರು, ಹಣ ನಮ್ಮಲ್ಲಿ ಉಳಿಯುವುದಿಲ್ಲ. ಹೇಗೆ ಖರ್ಚಾಗುತ್ತದೆ ಎಂದು ಹೇಳೊದಕ್ಕೂ ಆಗುವುದಿಲ್ಲ. ಆ ರೀತಿ ಹಣ ನೀರಿನ ಹಾಗೆ ಖಾಲಿ ಆಗುತ್ತಲೇ ಹೋಗುತ್ತದೆ. ಇದಕ್ಕೆ ವಾಸ್ತು ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ. ನೀವು ಮನೆಗೆ ಕೆಲವು ವಸ್ತುಗಳನ್ನು ತರುವುದರಿಂದ, ನಿಮ್ಮ ಲಕ್ ಬದಲಾಗುತ್ತದೆ, ಹಣ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ, ಆ ವಸ್ತುಗಳು ಏನೇನು ಎಂದು ತಿಳಿಸುತ್ತೇವೆ ನೋಡಿ.

ಲೋಹದ ಆಮೆ :- ಹಿತ್ತಾಳೆ ಅಥವಾ ಬೆಳ್ಳಿಯಲ್ಲಿ ಮಾಡಿದ ಆಮೆಯನ್ನು ಕೆಲಸ ಮಾಡುವ ಸ್ಥಳದಲ್ಲಿ ಅಥವಾ ಹಲವರ ಮನೆಗಳಲ್ಲಿ ನೋಡಿರುತ್ತೀರಿ. ಆಮೆಗಳು ಭಗವಾನ್ ವಿಷ್ಣುವಿನ ರೂಪ ಎಂದು ಹೇಳಲಾಗುತ್ತದೆ. ಹಾಗಾಗಿ ಇವುಗಳನ್ನು ಮನೆಯಲ್ಲಿ ಇರಿಸುತ್ತಾರೆ. ಆಮೆಗಳನ್ನು ಮನೆಯಲ್ಲಿ ಇಡುವುದರಿಂದ ವಿಷ್ಣುವಿನ ಅನುಗ್ರಹ ನಿಮ್ಮ ಮೇಲಿರುತ್ತದೆ ಹಾಗೂ ಆರ್ಥಿಕ ಸಮಸ್ಯೆಗಳು ದೂರವಾಗುತ್ತದೆ.
ಗೋಮತಿ ಚಕ್ರ :- ಇದನ್ನು ಬಹಳ ಶುಭಕರ ಎಂದು ಪರಿಗಣಿಸುತ್ತಾರೆ. ಗೋಮತಿ ಚಕ್ರವು ಲಕ್ಷ್ಮೀದೇವಿಯ ಪತಿ ಭಗವಾನ್ ವಿಷ್ಣುವಿಗೆ ಪ್ರಿಯವಾದದ್ದು, ಇದು ಪ್ರಪಂಚದ ಪೋಷಕ. ಇದನ್ನು ಭಗವಾನ್ ಶ್ರೀಕೃಷ್ಣನ ಸುದರ್ಶನ ಚಕ್ರದ ಸ್ವರೂಪ ಎಂದು ಕರೆಯುತ್ತಾರೆ. ಇದನ್ನು ಮನೆಯಲ್ಲಿ ಇಡುವುದರಿಂದ ಸಮೃದ್ಧಿ ಮತ್ತು ಸಂತೋಷ ನಿಮ್ಮ ಮನೆಯಲ್ಲಿರುತ್ತದೆ. ಹಾಗೂ ನಿಮ್ಮ ಜೀವನದ ಎಲ್ಲಾ ಸಮಸ್ಯೆಗಳು ಇದರಿಂದ ಪರಿಹಾರ ಆಗುತ್ತದೆ ಎನ್ನುವ ನಂಬಿಕೆ ಕೂಡ ಇದೆ. ಹಾಗಾಗಿ ಇದನ್ನು ಮನೆಯಲ್ಲಿ ಇಡುತ್ತಾರೆ. ಇದನ್ನು ಓದಿ.. Kannada News: ನಾನು ಪ್ರಭಾಸ್ ನನ್ನು ಮದುವೆಯಾಗಲು ಸಿದ್ದ ಎಂದ ಟಾಪ್ ನಟಿ, ಪ್ರಭಾಸ್ ಕೂಡ ಒಪ್ಪಿಕೊಳ್ಳುತ್ತಾರಾ?? ಆ ಸುಂದರಿ ಯಾರು ಗೊತ್ತೇ?

ಪಿರಮಿಡ್ :- ಇದನ್ನು ಮನೆಯಲ್ಲಿ ಇಡುವುದು ಬಹಳ ಒಳ್ಳೆಯದು. ಮನೆಯಲ್ಲಿ ಸ್ಫಟಿಕದ ಪಿರಮಿಡ್ ಇಡುವುದರಿಂದ ನಿಮ್ಮ ಮಮೆಯಲ್ಲಿರುವ ಎಲ್ಲರ ಆದಾಯ ಬಹಳ ಬೇಗ ಹೆಚ್ಚುತ್ತದೆ ಎಂದು ಹೇಳುತ್ತಾರೆ. ಇದರಿಂದ ಮನೆಯಲ್ಲಿ ಸಮೃದ್ಧಿ ಹೆಚ್ಚಾಗುತ್ತದೆ. ಮನೆಯ ಜನರು ಯಾವಾಗಲೂ ಜೊತೆಯಾಗಿ ಮನೆಯೊಳಗೆ ಯಾವ ಜಾಗದಲ್ಲಿ ಇರಬೇಕು ಎಂದು ಬಯಸುತ್ತಾರೋ ಆ ಜಾಗದಲ್ಲಿ ಪಿರಮಿಡ್ ಅನ್ನು ಇಡಬೇಕು ಎಂದು ಹೇಳುತ್ತಾರೆ.
ಕಮಲದ ಮಾಲೆ :- ನಿಮ್ಮ ಮನೆಗೆ ಕಮಲಗಟ್ಟದ ಮಾಲೆಯನ್ನು ತಂದು ಪೂಜೆ ಮಾಡುವುದರಿಂದ, ಹಣ ಸಂಪಾದನೆಗೆ ಹೊಸ ಮಾರ್ಗಗಳು ಸೃಷ್ಟಿಯಾಗುತ್ತದೆ ಎಂದು ಹೇಳುತ್ತಾರೆ. ಪ್ರತಿದಿನ ಇದರಲ್ಲಿ ಜಪ ಮಾಡುವುದರಿಂದ ನಿಮಗೆ ಊಹೆ ಮಾಡಲು ಕೂಡ ಸಾಧ್ಯವಾಗದ ಪ್ರಯೋಜನಗಳನ್ನು ಪಡೆಯುತ್ತೀರಿ..

ಶ್ರೀಫಲ್ :- ತುಂಬಾ ಚಿಕ್ಕದಾದ ತೆಂಗಿನಕಾಯಿಯನ್ನು ಶ್ರೀಫಲ್ ಎಂದು ಕರೆಯುತ್ತಾರೆ. ಈ ತೆಂಗಿನಕಾಯಿಯನ್ನು ಗುರುತಿಸಲು ಎಲ್ಲರಿಂದಲೂ ಸಾಧ್ಯ ಆಗುವುದಿಲ್ಲ. ಇವು ತುಂಬಾ ಚಿಕ್ಕದಾಗಿರುತ್ತದೆ, ಇವುಗಳನ್ನು ಇಡುವ ಮನೆಯಲ್ಲಿ ಹಣದ ಕೊರತೆ ಬರುವುದಿಲ್ಲ.
ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಸಮಸ್ಯೆಗೂ ಪರಿಹಾರಗಳನ್ನು ತಿಳಿಸಲಾಗಿದೆ. ನೀವು ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾಗ, ಈ ಪರಿಹಾರಗಳನ್ನು ಅನುಸರಿಸಿ, ಪೂಜೆ ಮಾಡಿದರೆ, ನಿಮ್ಮ ಜೀವನದಲ್ಲಿ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ. ಇದನ್ನು ಓದಿ.. Lakshana: ದಿಡೀರ್ ಎಂದು ಟ್ವಿಸ್ಟ್ ಕೊಟ್ಟ ಲಕ್ಷಣ: ಮೌರ್ಯ ಪಾತ್ರವನ್ನೇ ಮುಗಿಸಿದ್ದು ಯಾಕೆ ಗೊತ್ತೆ?ಏನಾಗಲಿದೆ ಗೊತ್ತೇ ಮುಂದೆ?

Comments are closed.