Neer Dose Karnataka
Take a fresh look at your lifestyle.

Kannada News: ಮೊದಲ ಸಿನಿಮಾ ಮಕಾಡೆ ಮಲಗಿದ ನಂತರ ಉಲ್ಟಾ ಹೊಡೆದ ಝೈದ್ ಖಾನ್ ಬಾಲಿವುಡ್ ಬಗ್ಗೆ ಹೇಳಿದ್ದೇನು ಗೊತ್ತೇ??

Kannada News: ಇತ್ತೀಚೆಗೆ ತೆರೆಕಂಡ ಬನಾರಸ್ (Banaras) ಸಿನಿಮಾ ಹೆಚ್ಚು ಸದ್ದು ಮಾಡಲಿಲ್ಲ, ಥಿಯೇಟರ್ ನಲ್ಲಿ ಬನಾರಸ್ ಸಿನಿಮಾ ಮಕಾಡೆ ಮಲಗಿತು, ಆದರೆ ಝೈದ್ ಖಾನ್ (Zaid Khan) ಅವರಿಗೆ ನಟನಾಗಿ ಎಲ್ಲರ ಮೆಚ್ಚುಗೆ ಸಿಕ್ಕಿತು. ಇವರ ಅಭಿನಯ ನೋಡಿದರೆ, ಮೊದಲ ಸಿನಿಮಾ ಎಂದು ಅನ್ನಿಸುವುದೇ ಇಲ್ಲ ಎನ್ನುವ ಮಾತುಗಳನ್ನು ಹಲವರು ಹೇಳಿದರು. ರಾಜಕಾರಣಿಯ ಮಗ ಆಗಿದ್ದರು ಸಹ, ಝೈದ್ ಖಾನ್ ಯಾವುದೇ ಬಿಲ್ಡಪ್ ಇಲ್ಲದೆ, ಸರಳ ಹುಡುಗನ ಪಾತ್ರದಲ್ಲಿ ನಟಿಸಿದ್ದರು. ಜಯತೀರ್ಥ (Jayateertha) ಅವರು ಬನಾರಸ್ ಸಿನಿಮಾ ನಿರ್ದೇಶನ ಮಾಡಿದ್ದರು.

ಬನಾರಸ್ ಸಿನಿಮಾ ಬಿಡುಗಡೆ ಆಗುವುದಕ್ಕಿಂತ ಮೊದಲು ಝೈದ್ ಖಾನ್ ಅವರು ಬಾಲಿವುಡ್ (Bollywood) ಗೆ ಸೂಟ್ ಆಗುವ ನಟ, ಅವರು ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎಂದು ಹೇಳಲಾಗಿತ್ತು. ಆದರೆ ಝೈದ್ ಖಾನ್ ಅವರು ಎಂಟ್ರಿ ಕೊಟ್ಟಿದ್ದು ಸ್ಯಾಂಡಲ್ ವುಡ್ ಇಂದ, ಬನಾರಸ್ ಸಿನಿಮಾ ಫ್ಲಾಪ್ ಆಗಿದ್ದರು ಸಹ, ಬಾಲಿವುಡ್ ನ ಖ್ಯಾತ ನಿರ್ದೇಶಕರೊಬ್ಬರು, ಇವರೊಡನೆ ಸಿನಿಮಾ ಮಾಡಲು ಮುಂದೆ ಬಂದಿದ್ದಾರಂತೆ. ಆದರೆ ಝೈದ್ ಖಾನ್ ಅವರು ಬಾಲಿವುಡ್ ಸಿನಿಮಾವನ್ನೇ ರಿಜೆ ಕ್ಟ್ ಮಾಡಿದ್ದಾರಂತೆ. ಇವರು ಬಾಲಿವುಡ್ ಆಫರ್ ರಿಜೆಕ್ಟ್ ಮಾಡಲು ಒಂದು ಮುಖ್ಯವಾದ ಕಾರಣ ಸಹ ಇದೆ. ಇದನ್ನು ಓದಿ.. Lakshana: ದಿಡೀರ್ ಎಂದು ಟ್ವಿಸ್ಟ್ ಕೊಟ್ಟ ಲಕ್ಷಣ: ಮೌರ್ಯ ಪಾತ್ರವನ್ನೇ ಮುಗಿಸಿದ್ದು ಯಾಕೆ ಗೊತ್ತೆ?ಏನಾಗಲಿದೆ ಗೊತ್ತೇ ಮುಂದೆ?

ಮೊದಲಿಗೆ ಸಿನಿಮಾ ಕಥೆ ಕೇಳಿ, ಇಷ್ಟವಾಗಿ ನಟಿಸುವುದಾಗಿ ಹೇಳಿದ್ದರಂತೆ ಝೈದ್ ಖಾನ್. ಬಾಲಿವುಡ್ ನ ಸ್ಟಾರ್ ನಟಿಯೊಬ್ಬರು ಈ ಸಿನಿಮಾದಲ್ಲಿ ನಟಿಸಬೇಕಿತ್ತಂತೆ. ಆದರೆ ಸಿನಿಮಾವನ್ನು ಹಿಂದಿ ಭಾಷೆಯಲ್ಲಿ ಮಾತ್ರ ಮಾಡುವುದಾಗಿ ಹೇಳಿದ್ದಕ್ಕೆ ಝೈದ್ ಖಾನ್ ಈ ಆಫರ್ ರಿಜೆಕ್ಟ್ ಮಾಡಿದ್ದಾರೆ. ಕನ್ನಡ ಮತ್ತು ಹಿಂದಿ ಎರಡು ಭಾಷೆಯಲ್ಲಿ ಸಿನಿಮಾ ಮಾಡುವುದಾದರೆ ಮಾತ್ರ ಒಪ್ಪುವುದಾಗಿ ಹೇಳಿದರಂತೆ ಝೈದ್ ಖಾನ್. ಆ ರೀತಿ ಆಗದ ಕಾರಣ, ಝೈದ್ ಖಾನ್ ಆಫರ್ ರಿಜೆಕ್ಟ್ ಮಾಡಿದ್ದಾರೆ.. “ನೀವು ನನ್ನನ್ನ ಅಪ್ರೋಚ್ ಮಾಡಲು ಕಾರಣವಾಗಿರದ್ದು ಬನಾರಸ್ ಸಿನಿಮಾ. ಆ ಸಿನಿಮಾ ತಯಾರಾಗಿದ್ದು, ಗೆದ್ದಿದ್ದು ಕನ್ನಡಿಗರಿಂದ. ನಾನು ಯಾವುದೇ ಕಾರಣಕ್ಕೂ ಕನ್ನಡ ಚಿತ್ರರಂಗ ಬಿಟ್ಟು ಬರುವ ಮಾತೇ ಇಲ್ಲ..” ಎಂದಿದ್ದಾರಂತೆ ಝೈದ್ ಖಾನ್. ಇದನ್ನು ಓದಿ..Kannada Astrology: ಈ ವಸ್ತುಗಳನ್ನು ಮನೆಗೆ ತಂದರೆ ಏನಾಗುತ್ತದೆ ಎಂದು ತಿಳಿದರೇ, ಸಾಲ ಮಾಡಿ ಆದ್ರೂ ಸರಿ ಇಂದೇ ಮನೆಗೆ ತರುತ್ತೀರಿ.

Comments are closed.