Neer Dose Karnataka
Take a fresh look at your lifestyle.

Kannada Astrology: ಹನುಮಂತನೇ ನಿಮ್ಮನ್ನು ಕಾದು, ಎಲ್ಲ ಕಷ್ಟಗಳನ್ನು ನಿವಾರಣೆ ಮಾಡಬೇಕು ಎಂದರೆ ಈ ಎಲೆಯಿಂದ ಈ ಚಿಕ್ಕ ಕೆಲಸ ಮಾಡಿ ಸಾಕು.

Kannada Astrology: ಈಗ ಯಾರು ಕೂಡ ನೆಮ್ಮದಿಯಿಂದ ಇದ್ದಾರೆ ಎಂದು ಹೇಳಲು ಆಗುವುದಿಲ್ಲ. ಪ್ರತಿಯೊಬ್ಬರು ಕೂಡ ಒಂದಲ್ಲಾ ಒಂದು ಸಮಸ್ಯೆಗಳಿಂದ ಚಿಂತೆಗೆ ಒಳಗಾಗಿರುತ್ತಾರೆ. ಹಲವು ವಿಚಾರಗಳ ಬಗ್ಗೆ ಚಿಂತೆ ಮಾಡುತ್ತಿರುತ್ತಾರೆ, ಸಮಸ್ಯೆಗಳಿಗೆ ಸಿಲುಕಿಕೊಂಡಿರುತ್ತಾರೆ. ಮನುಷ್ಯರು ಅನುಭವಿಸುವ ಇಂತಹ ಅನೇಕ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಸೂಚಿಸಲಾಗಿದೆ. ಅವುಗಳನ್ನು ಪಾಲಿಸಿ, ನೀವು ಆಂಜನೇಯ ಸ್ವಾಮಿಯ ಆಶೀರ್ವಾದ ಪಡೆಯಬಹುದು. ಅರಳಿ ಮರದ ಕೆಲವು ಪರಿಹಾರಗಳಿದ್ದು, ಅವುಗಳಿಂದ ಮಾಡುವ ಸಣ್ಣದೊಂದು ಕೆಲಸದಿಂದ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಅವುಗಳು ಏನು ಎಂದು ತಿಳಿಸುತ್ತೇವೆ ನೋಡಿ..

ಜೀವನದಲ್ಲಿ ನೀವು ಸಮಸ್ಯೆಗಳಿಂದ ಬಳಲುತ್ತಿದ್ದರೆ, ಈ ರೀತಿ ಮಾಡಿ, ಇದು ಪುರಾತನ ಕಾಲದಿಂದ ಪಾಲಿಸಿಕೊಂಡು ಬಂದಿರುವ ವಿಧಾನ ಆಗಿದೆ, ಹುಣ್ಣಿಮೆಯ ದಿನ ಬೇಗ ಎದ್ದು ಸ್ನಾನ ಮಾಡಿದ ನಂತರ ಅರಳಿ ಮರದಿಂದ 11 ಅಥವಾ 21 ಎಲೆಗಳನ್ನು ಕಿತ್ತು ತನ್ನಿ, ಆಗ ಎಲೆಗಳು ಕೊಳಕಾಗಬಾರದು ಚೆನ್ನಾಗಿರಬೇಕು. ಅವುಗಳನ್ನು ಶುದ್ಧಗೊಳಿಸಿ, ಶ್ರೀಗಂಧದಲ್ಲಿ ಶ್ರೀರಾಮನ ಹೆಸರನ್ನು ಎಲೆಯ ಮೇಲೆ ಬರಿಯಿರಿ. ಬಳಿಕ ಈ ಎಲ್ಲಾ ಎಲೆಗಳನ್ನು ಸೇರಿಸಿ ಒಂದು ಮಾಲೆ ಮಾಡಿ, ಮಾಲೆಯನ್ನು ಮಾಡಲು ಬಣ್ಣದ ದಾರ ಬಳಸಿ. ಜೊತೆಗೆ ಹನುಮಂತನಿಗೆ ಬೆಲ್ಲವನ್ನು ಅರ್ಪಿಸಿ. ಇದನ್ನು ಓದಿ.. Bengaluru Bulls: ಬೆಂಗಳೂರು ಬುಲ್ಸ್ ತಂಡದಲ್ಲಿ ದೊಡ್ಡ ಬದಲಾವಣೆ | ಸ್ಟಾರ್ ಆಟಗಾರ ತಂಡದಿಂದ ಹೊರಗೆ ಯಾರು ಗೊತ್ತೇ?

ಕೊನೆಯಲ್ಲಿ ರಾಮನ ಸ್ತೋತ್ರವನ್ನು ಪಠಿಸಿ, ಆಂಜನೇಯ ಸ್ವಾಮಿಯನ್ನು ಪ್ರಸನ್ನಗೊಳಿಸಿ, ಅವರ ಆಶೀರ್ವಾದ ಪಡೆಯಲು ಇದು ಬಹಳ ಒಳ್ಳೆಯ ಪರಿಹಾರ ಆಗಿದೆ. ನಿಮ್ಮ ಮನೆಯಲ್ಲಿ ಪಾದರಸದಿಂದ ಮಾಡಿರುವ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ, ಈ ಮೂರ್ತಿಯನ್ನು ಪೂಜೆ ಮಾಡಿದರೆ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ, ವಾಸ್ತು ದೋಷಗಳು ಸರಿಹೋಗುತ್ತದೆ, ನಿಮ್ಮ ಮನೆಯ ವಾತಾವರಣ ಕೂಡ ಶುದ್ಧವಾಗಿರುತ್ತದೆ. ಪಿತೃದೋಷದಿಂದ ಸಮಸ್ಯೆ ಇರುವ ವ್ಯಕ್ತಿಗಳು, ಆಂಜನೇಯ ಸ್ವಾಮಿಗೆ ಪೂಜೆ ಮಾಡಿ, ಇದರಿಂದ ಪಿತೃದೋಷದಿಂದ ಮುಕ್ತಿ ಪಡೆಯುತ್ತೀರಿ, ಈ ನಂಬಿಕೆ ಪುರಾತನ ಕಾಲದಿಂದಲೂ ಇದೆ. ಇದನ್ನು ಓದಿ.. Biggboss Kannada: ಮನೆಯಲ್ಲಿ ಉಳಿದುಕೊಳ್ಳಲು ಧಾರವಾಹಿ ತಂತ್ರ: ಗೇಮ್ ಪ್ಲಾನ್ ಚೇಂಜ್ ಮಾಡಿ ಕಾವ್ಯ ಮಾಡುತ್ತಿರುವುದೇನು ಗೊತ್ತೇ?

Comments are closed.