Neer Dose Karnataka
Take a fresh look at your lifestyle.

Kannada News: ರವಿಚಂದ್ರನ್ ರವರಿಗೆ ಟಾಪ್ ನಟರು ಸಹಾಯ ಮಾಡಿದ್ದಾರೆ ಅಂದುಕೊಂಡಿದ್ದೀರಾ?? ಇಲ್ಲವೇ ಇಲ್ಲ. ರವಿಚಂದ್ರನ್ ಕೊಟ್ಟ ಷಾಕಿಂಗ್ ಹೇಳಿಕೆ ಏನು ಗೊತ್ತೇ?

Kannada News: ಕನ್ನಡ ಚಿತ್ರರಂಗದ ಶೋಮ್ಯಾನ್ ಕ್ರೇಜಿಸ್ಟಾರ್ ರವಿಚಂದ್ರನ್ (Crazystar Ravichandran) ಅವರು ಕೆಲವು ಸಮಯದಿಂದ ಕಷ್ಟದಲ್ಲಿದ್ದಾರೆ ಎನ್ನುವುದು ಗೊತ್ತಿರುವ ವಿಷಯ. ರವಿಚಂದ್ರನ್ ಅವರು ತಮ್ಮ ಮನೆಯನ್ನು ಖಾಲಿ ಮಾಡಿ, ಹೊರಗೆ ಬಂದಿದ್ದಾರೆ ಎನ್ನುವ ವಿಷಯ ಗೊತ್ತಾದ ತಕ್ಷಣ, ರವಿಚಂದ್ರನ್ ಅವರಿಗೆ ಅವರು ಸಹಾಯ ಮಾಡಿದ್ದಾರೆ ಇವರು ಸಹಾಯ ಮಾಡಿದ್ದಾರೆ ಅಂತೆಲ್ಲಾ ಸುದ್ದಿಗಳು ಕೇಳುಬರುತ್ತಲೇ ಇದೆ. ಸ್ಟಾರ್ ನಟರು ರವಿಚಂದ್ರನ್ ಅವರ ಜೊತೆಗೆ ನಿಂತಿದ್ದಾರೆ ಎಂದು ಮಾಧ್ಯಮಗಳು ತಿಳಿಸಿದೆ. ಆದರೆ ಅದೆಲ್ಲವೂ ಸುಳ್ಳು ಎಂದು ರವಿಚಂದ್ರನ್ ಅವರು ಹೇಳಿದ್ದಾರೆ.

ಇತ್ತಿಚೆಗೆ ತಿಲಲಕ್ಷದೀಪೋತ್ಸವ ಕಾರ್ಯಕ್ರಮದಲ್ಲಿ ರವಿಚಂದ್ರನ್ ಅವರು ಭಾಗವಹಿಸಿದ್ದರು. ಆಗ ಈ ವಿಚಾರದ ಬಗ್ಗೆ ಮಾತನಾಡಿ, ತಮ್ಮ ಅಭಿಪ್ರಾಯವನ್ನು ನೇರವಾಗಿ ಹೇಳಿಕೊಂಡಿದ್ದಾರೆ. ರವಿಚಂದ್ರನ್ ಅವರು ಯಾವಾಗಲೂ ಯಾವುದೇ ವಿಚಾರವನ್ನು ಮುಚ್ಚಿ ಇಟ್ಟವರಲ್ಲ, ಓಪನ್ ಆಗಿಯೇ ಮಾತನಾಡುವ ರವಿಚಂದ್ರನ್ ಅವರು, ಈ ವಿಚಾರದಲ್ಲಿ ಕೂಡ ಅದೇ ರೀತಿ ಹೇಳಿದ್ದಾರೆ, “ಸೋಷಿಯಲ್ ಮೀಡಿಯಾದಲ್ಲಿ ಟಿವಿಯಲ್ಲಿ ಎಲ್ಲರೂ ಹೇಳ್ಕೊಂಡು ಓಡಾಡ್ತಾ ಇದ್ದಾರೆ. ಅವರು ಬಂದು ಸಹಾಯ ಮಾಡಿಡ್ದಾರೆ, ಇವರು ಬಂದು ಸಹಾಯ ಮಾಡಿದ್ದಾರೆ ಅಂತ. ಆದೆಲ್ಲಾ ಕೇವಲ ಸುಳ್ಳು ರೀ. ಅಂತಹ ಪರಿಸ್ಥಿತಿ ನನಗೆ ಬಂದಿಲ್ಲ. ಅದು ನನಗೆ ಬೇಕಾಗು ಇಲ್ಲ. ಅಂತಹ ಪರಿಸ್ಥಿತಿ ಸಧ್ಯಕ್ಕೆ ಇಲ್ಲ..” ಎಂದು ಹೇಳಿದ್ದಾರೆ ಕ್ರೇಜಿಸ್ಟಾರ್. ಇದನ್ನು ಓದಿ.. Kannada News: ಪಾರು ಸೀರಿಯಲ್ ನಟ ಆದಿ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತೇ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ಈ ಮೂಲಕ ತಮಗೆ ಯಾರ ಸಹಾಯವು ಬೇಕಿಲ್ಲ ಎಂದಿದ್ದಾರೆ. ಇನ್ನು ತಮ್ಮ ಸ್ನೇಹಿತರು ಮತ್ತು ಅಭಿಮಾನಿಗಳ ಬಗ್ಗೆ ಮಾತನಾಡಿ, ದಿಲ್ ಸೇ ದಿಲೀಪ್ ಅವರು ನನ್ನ ಜೊತೆ ಎರಡು ವರ್ಷ ಇದ್ರು, ಅವರು ಬಂದು ನನಗೆ ದುಡ್ಡು ಕೊಟ್ಟು, ಇಟ್ಕೊಳ್ಳಿ ಸಾರ್, ಮನೇಲಿ ಬಿದ್ದಿದೆ ನಿಮಗೆ ಯಾವುದಕ್ಕೆ ಬೇಕಾದರು ಬಳಸಿಕೊಳ್ಳಿ ಅಂತ ಹೇಳ್ದ. ಕೆಲವು ಅಭಿಮಾನಿಗಳು ಕೂಡ ಇದ್ದಾರೆ, ಇಲ್ಲಿಗೆ ಬರುವಾಗ ಕೊಟ್ರೇಶಿ, ಅಣ್ಣ ಮುಂದಿನ ವರ್ಷ ಹಣ ಸಂಪಾದನೆ ಮಾಡ್ತೀನಿ. ಅದನ್ನ ನಿಮಗೆ ತಂದು ಕೊಡ್ತೀನಿ. ಸಿನಿಮಾ ಮಾಡಿಕೊಡಿ ಅಂತ ಹೇಳ್ತಾನೆ. ಇಂಥಹ ಕೆಲವು ಜನರನ್ನ ಸಂಪಾದನೆ ಮಾಡಿದ್ದೀನಲ್ಲ. ನನಗೆ ಅಷ್ಟೇ ಸಾಕು.. ಎಂದು ಹೇಳಿದ್ದಾರೆ ಕ್ರೇಜಿಸ್ಟಾರ್. ಇದನ್ನು ಓದಿ..Biggboss Kannada: ಕಳಪೆ ವಿಚಾರದಲ್ಲಿ ಬಿಗ್ ಬಾಸ್ ಮನೆಯನ್ನು ಮತ್ತೊಮ್ಮೆ ಶೇಕ್ ಮಾಡಿದ ಪ್ರಶಾಂತ್ ಸಂಭರ್ಗಿ; ಕಿಚ್ಚ ಯಾರ ಪರ ನಿಲ್ಲುತ್ತಾರೋ.

Comments are closed.