Neer Dose Karnataka
Take a fresh look at your lifestyle.

Kannada Astrology: ಜೀವನದಲ್ಲಿ ಏನೇ ಮಾಡಿದರೂ ಅಡೆ ತಡೆ ಬರುತ್ತಿದೆಯೇ? ಮೆಣಸಿನಕಾಯಿ ತಗೊಂಡು ಹೀಗೆ ಮಾಡಿ ಸಾಕು. ಏನು ಅಡ್ಡ ಬರಲ್ಲ.

Kannada Astrology: ಕೆಲವೊಮ್ಮೆ ಜೀವನದಲ್ಲಿ ಏನೇ ಮಾಡಲು ಹೊರಟರು ಒಂದಲ್ಲಾ ಒಂದು ಅಡೆತಡೆಗಳು ಬರುತ್ತಲೇ ಇರುತ್ತದೆ. ಎಷ್ಟೇ ಪ್ರಯತ್ನ ಪಟ್ಟರು ಕೂಡ ಸಮಸ್ಯೆಗಳನ್ನು ಪರಿಹರಿಸಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಕೆಲವು ಪರಿಹಾರಗಳು ಬೇರೆ ರೀತಿಯಲ್ಲಿ ಮಾಡಬಹುದು, ಅದರಲ್ಲಿ ಒಂದು ಮೆಣಸಿನಕಾಯಿ ಇಂದ ಮಾಡುವ ಪರಿಹಾರ. ಮೆಣಸಿನಕಾಯಿ ಎನ್ನುವುದು ಅಡುಗೆಗೆ ಖಾರದ ರುಚಿ ನೀಡುವುದು ಮಾತ್ರವಲ್ಲ, ಜೀವನದ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುವುದಕ್ಕೆ, ತಂತ್ರಗಳನ್ನು ಸಹ ಹೇಳಿಕೊಡುತ್ತದೆ. ಈ ಮೆಣಸಿನಕಾಯಿಯಿಂದ ಏನೆಲ್ಲಾ ಒಳ್ಳೆಯದಾಗುತ್ತದೆ ಎಂದು ತಿಳಿಸುತ್ತೇವೆ ನೋಡಿ..

*ಒಂದು ವೇಳೆ ನಿಮಗೆ ಶತ್ರು ಸಮಸ್ಯೆ ಇದ್ದರೆ, ಮಂಗಳವಾರದ ದಿನ ರಾತ್ರಿ ನಿಮ್ಮ ಮನೆಯಿಂದ ಹೊರಗೆ ಹೋಗಿ, ಎಲ್ಲಾದರೂ ಒಂದು ಕಡೆ ಒಂದು ಗುಂಡಿ ತೋಡಿ, ಐದು ಮೆಣಸಿನಕಾಯಿಯನ್ನು ನಿಮ್ಮ ತಲೆಯಿಂದ ಹೊರತೆಗೆದು, ಅದನ್ನು ಆ ಗುಂಡಿಗೆ ಹೊಡೆಯಿರಿ. ನಂತರ ಗುಂಡಿಯನ್ನು ಮುಚ್ಚಿ, ಹಿಂದಿರುಗಿ ನೋಡದೆ ಆ ಜಾಗದಿಂದ ಮನೆಗೆ ಹೋಗಿ. ಈ ರೀತಿ ಮಾಡುವುದರಿಂದ ನಿಮ್ಮ ಶತ್ರುಗಳಿಂದ ಮುಕ್ತಿ ಪಡೆಯುತ್ತೀರಿ.
*ಒಂದು ವೇಳೆ ಮನೆಯಲ್ಲಿ ಸಮಸ್ಯೆಗಳು ಇದ್ದರೆ, ಅದರಿಂದ ಹೊರಬರಲು, ರಾತ್ರಿ ಮಲಗುವುದಕ್ಕಿಂತ ಮೊದಲು, ನೀರಿಗೆ 21 ಮೆಣಸಿನಕಾಯಿಗಳನ್ನು ಹಾಕಿ, ನಂತರ ಇದನ್ನು ನೀವು ಮಲಗುವ ದಿಂಬಿನ ಬಳಿ ಇಡಿ, ಬೆಳಗ್ಗೆ ಎದ್ದ ನಂತರ, ನಿಮ್ಮ ತಲೆಯಿಂದ 7 ಸಾರಿ ಇಳಿ ತೆಗೆದು, ಮನೆಯಿಂದ ಹೊರಗೆ ಬಿಸಾಕಿ. ಇದನ್ನು ಓದಿ.. Kannada Astrology: ಮನೆಯಲ್ಲಿ ಹಣದ ಸಮಸ್ಯೆಯೇ? ಹಾಗಿದ್ದರೆ ಈ ತಪ್ಪು ಮಾಡಿರುತ್ತೀರಿ. ಚಿಕ್ಕದೇ ತಪ್ಪು, ಆದರೆ ಸರಿ ಪಡಿಸಿ. ಹಣ ಕೂಡುತ್ತದೆ.

*ಒಂದು ವೇಳೆ ನಿಮ್ಮ ಮನೆಯಲ್ಲಿ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಇದ್ದರೆ, ಶುಕ್ರವಾರದ ದಿನ ಒಂದು ಕೆಂಪು ಬಟ್ಟೆ ತೆಗೆದುಕೊಂಡು 7 ಕೆಂಪು ಮೆಣಸಿನಕಾಯಿ, ಸ್ವಲ್ಪ ಕಪ್ಪು ಎಳ್ಳು, ಏಳು ಅಡಿಕೆ ಮತ್ತು ಸ್ವಲ್ಪ ಧನಿಯಾವನ್ನು ಆ ಬಟ್ಟೆಯ ಮೇಲೆ ಇಟ್ಟು, ಅದನ್ನು ಕಟ್ಟಿ ರೋಗಿಯ ಹತ್ತಿರ ಇಡಿ. ಮರುದಿನ ಅದನ್ನು ಅರಳಿಮರದ ಹತ್ತಿರ ಇಡಿ.
*ಒಂದು ವೇಳೆ ನಿಮ್ಮ ಬ್ಯುಸಿನೆಸ್ ಚೆನ್ನಾಗಿ ನಡೆಯುತ್ತಿಲ್ಲ ಎನ್ನುವುದಾದರೆ, ಸ್ವಲ್ಪ ಹಳದಿ ಸಾಸಿವೆ, ಎಳ್ಳು, ಕಲ್ಲು ಉಪ್ಪು, ಕೊತ್ತಂಬರಿ ಬೀಜ ಮತ್ತು ಒಂದು ಕೆಂಪು ಮೆಣಸಿನಕಾಯಿ ಇವುಗಳನ್ನು ಮೂರು ಮಣ್ಣಿನ ದೀಪಗಳಲ್ಲಿ ಇಡಿ. ನಿಮ್ಮ ಬ್ಯುಸಿನೆಸ್ ಇರುವ ಕಡೆ ಈ ದೀಪವನ್ನು ಇರಿಸಿ.

*ಒಂದು ವೇಳೆ ನಿಮ್ಮ ಉದ್ಯೋಗದಲ್ಲಿ ಪದೇ ಪದೇ ಸಮಸ್ಯೆಗಳು ಆಗುತ್ತಿದ್ದರೆ, ಒಂದು ಜಗ್ ಅಥವಾ ಮಡಿಕೆಗೆ ನೀರು ತುಂಬಿಸಿ, ಅದಕ್ಕೆ 21 ಮೆಣಸಿನಕಾಯಿಗಳನ್ನು ಹಾಕಿ, ಈ ನೀರಿನಿಂದ ನಿಮ್ಮ ತಲೆಯನ್ನು 7 ಸಾರಿ ಇಳಿ ತೆಗೆದು, ನಂತರ ಇದನ್ನು ರಸ್ತೆಗೆ ಎಸೆಯಿರಿ.
*ಒಂದು ವೇಳೆ ನೀವು ಯಾವುದಾದರೂ ಕೆಲಸಕ್ಕಾಗಿ ಹೊರಗಡೆ ಹೋಗುತ್ತಿದ್ದರೆ, ಮನೆಯ ಬಾಗಿಲಿನ ಬಳಿ ಐದು ಮೆಣಸಿನಕಾಯಿಗಳನ್ನು ಇಟ್ಟು, ಅದನ್ನು ದಾಟಿ ಹೊರಡಿ. ಇದರಿಂದ ಎಲ್ಲಾ ಕೆಲಸಗಳಲ್ಲೂ ಯಶಸ್ಸು ನಿಮ್ಮದೇ ಆಗುತ್ತದೆ. ಇದನ್ನು ಓದಿ..Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.

Comments are closed.