Kannada News: ನಡುಗಿದ ಕೇರಳ ಚಿತ್ರರಂಗ: ರಾತ್ರೋ ರಾತ್ರಿ ಮಲಗಿದ್ದಾಗಲೇ ಪ್ರಾಣ ಕಳೆದುಕೊಂಡ ನಟ ದುಲ್ಕರ್ ಡ್ರೈವರ್. ಏನಾಗಿದೆ ಗೊತ್ತೇ?
Kannada News: ಕೆಲವೊಮ್ಮೆ ಜೀವನದಲ್ಲಿ ಯಾವ ಘಟನೆ ಹೇಗೆ ಯಾವಾಗ ನಡೆಯುತ್ತದೆ ಎಂದು ಹೇಳೋದಕ್ಕೆ ಆಗುವುದಿಲ್ಲ. ಸಾವು ಎನ್ನುವುದು ಯಾವಾಗ ಬರುತ್ತದೆ ಎಂದು ಊಹೆ ಮಾಡೋದಕ್ಕೂ ಆಗುವುದಿಲ್ಲ. ಅಂಥದ್ದೇ ಒಂದು ಘಟನೆ ಈಗ ಚಿತ್ರರಂಗದಲ್ಲಿ ನಡೆದಿದೆ. ಮಲಯಾಳಂ ನ ಖ್ಯಾತ ನಟ ದುಲ್ಕರ್ ಸಲ್ಮಾನ್ (Dulquer Salmaan) ಅವರ ಡ್ರೈವರ್ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ದಾರೆ, ಈ ಸುದ್ದಿ ಕೇಳಿ ಚಿತ್ರರಂಗವೆ ಶಾಕ್ ಆಗಿದೆ. ದುಲ್ಕರ್ ಸಲ್ಮಾನ್ ಅವರನ್ನು ಏರ್ ಪೋರ್ಟ್ ಗೆ ಡ್ರಾಪ್ ಮಾಡಿ ಬರುವಾಗ ಈ ರೀತಿ ಘಟನೆಯೊಂದು ಸಂಭವಿಸಿದೆ.
ದುಲ್ಕರ್ ಸಲ್ಮಾನ್ ಅವರ ಡ್ರೈವರ್ ಹೆಸರು ಭಾಸ್ಕರ್ ಪ್ರಸಾದ್ (Bhaskar Prasad), ದುಲ್ಕರ್ ಸಲ್ಮಾನ್ ಅವರ ಚೆನ್ನೈ ನಗರದ ಮನೆಯಲ್ಲಿ ಈ ಘಟನೆ ನಡೆದಿದೆ. ದುಲ್ಕರ್ ಸಲ್ಮಾನ್ ಅವರನ್ನು ಚೆನ್ನೈ (Chennai) ಏರ್ ಪೋರ್ಟ್ ಗೆ ಡ್ರಾಪ್ ಮಾಡಿ, ಮನೆಗೆ ಬಂದಿರುವ ಭಾಸ್ಕರ್ ಅವರು ಪಿಜ್ಜಾ ತಿಂದು ಜ್ಯುಸ್ ಕುಡಿದು ಮಲಗಿದ್ದಾರೆ, ಮಲಗಿದ್ದಲ್ಲೇ ಅವರಿಗೆ ಪ್ರಾಣ ಹೋಗಿದೆಯಂತೆ. ಮನೆಯ ಸೆಕ್ಯೂರಿಟಿ ಗಾರ್ಡ್ ಈ ವಿಚಾರದ ಬಗ್ಗೆ ಮಾಹಿತಿ ನೀಡಿದ್ದಾರೆ. ದುಲ್ಕರ್ ಅವರನ್ನು ಡ್ರಾಪ್ ಮಾಡಿ ಬಂದ ನಂತರ ಪಿಜ್ಜಾ ತಿಂದು, ಜ್ಯುಸ್ ಕುಡಿದು ಮಲಗಿರುವ ಭಾಸ್ಕರ್ ಸ್ವಲ್ಪ ಹೊತ್ತಿನ ನಂತರ ಕೆಮ್ಮುವುದಕ್ಕೆ ಶುರು ಮಾಡಿದ್ದಾರೆ. ಇದನ್ನು ಓದಿ..Biggboss Kannada: ಪ್ರೇಕ್ಷಕರ ಮನಗೆದ್ದಿದ್ದರೂ ಹೊರಗೆಹೋದ ಅರುಣ್ ಸಾಗರ್: ಕೊನೆಯಲ್ಲಿ ಪಡೆದ ದಾಖಲೆ ಸಂಭಾವನೆ ಕೇಳಿದರೆ, ಕೈಯೆಲ್ಲ ನಡುಗುತ್ತದೆ. ಎಷ್ಟು ಗೊತ್ತೇ??
![](http://bbctimenews.com/wp-content/uploads/2022/12/kannada-news-dulquer-salmaan-driver-case-1024x536.jpg)
ಕೆಮ್ಮು ಜಾಸ್ತಿ ಆಗುತ್ತಿದ್ದ ಹಾಗೆ, ಪ್ರಜ್ಞೆ ತಪ್ಪಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ಪ್ರಯತ್ನ ಪಟ್ಟಾಗ, ಆಸ್ಪತ್ರೆಗೆ ಹೋಗುವುದಕ್ಕಿಂತ ಮೊದಲೇ ಅವರ ಪ್ರಾಣ ಪಕ್ಷಿ ಹಾರಿ ಹೋಗಿದೆ ಎಂದು ಮಾಹಿತಿ ನೀಡಿದ್ದಾರೆ. ಈ ಸಾವು ನಿಜಕ್ಕೂ ಎಲ್ಲರಿಗೂ ಶಾಕ್ ನೀಡಿದೆ. ದುಲ್ಕರ್ ಸಲ್ಮಾನ್ ಅವರು ಕೂಡ ತಮ್ಮ ಡ್ರೈವರ್ ಗೆ ಈ ರೀತಿ ಆಗಿದ್ದಕ್ಕೆ ಕಣ್ಣೀರು ಹಾಕಿದ್ದು, ಭಾಸ್ಕರ್ ಪ್ರಸಾದ್ ತುಂಬಾ ಒಳ್ಳೆಯ ಡ್ರೈವರ್ ಎಂದು ಹೇಳಿದ್ದಾರೆ. ಇದನ್ನು ಓದಿ.. Aadhar Card: ಆಧಾರ್ ಕಾರ್ಡ್ ನಲ್ಲಿ ನಿಮ್ಮ ಮುಖ ನೀವೇ ನೋಡೋಕೆ ಆಗ್ತಾ ಇಲ್ವಾ? ಹಾಗಿದ್ದರೆ ಹೀಗೆ ಮಾಡಿ ಫೋಟೋ ಬದಲಾಯಿಸಿ.
Comments are closed.