Neer Dose Karnataka
Take a fresh look at your lifestyle.

Kannada News: ವಿಷ್ಣುವರ್ಧನ್ ಹಾಗೂ ಶಿವಣ್ಣ ಒಂದೇ ಪಾತ್ರದಲ್ಲಿ ನಟನೆ ಮಾಡ್ಬೇಕಾಗಿತ್ತು, ಆದರೆ ಕೊನೆ ಕ್ಷಣದಲ್ಲಿ ಸಿನಿಮಾ ನಿಂತದ್ದು ಯಾಕೆ ಗೊತ್ತೇ??

Kannada News: ಕನ್ನಡ ಚಿತ್ರರಂಗದ ಮೇರು ನಟರಲ್ಲಿ ಒಬ್ಬರು ಸಾಹಸಸಿಂಹ ವಿಷ್ಣುವರ್ಧನ್ (Vishnuvardhan) ಅವರು, ಮತ್ತೊಬ್ಬರು ಕರುನಾಡ ಚಕ್ರವರ್ತಿ ಶಿವಣ್ಣ (Shivanna) ಅವರು. ಅಣ್ಣಾವ್ರ ಕುಟುಂಬಕ್ಕೆ ಮತ್ತು ವಿಷ್ಣುವರ್ಧನ್ ಅವರ ಕುಟುಂಬಕ್ಕೆ ಬಹಳ ಆತ್ಮೀಯತೆ ಇತ್ತು. ವಿಷ್ಣುದಾದ ಮತ್ತು ಶಿವಣ್ಣ ಅವರ ನಡುವೆ ಕೂಡ ಬಹಳ ಆತ್ಮೀಯತೆ ಇತ್ತು. ಇವರಿಬ್ಬರು ಜೊತೆಯಾಗಿ ಒಂದು ಸಿನಿಮಾ ಮಾಡಬೇಕು ಎಂದುಕೊಂಡಿದ್ದರು, ಆ ಸಿನಿಮಾ ಮುಹೂರ್ತ ನಡೆದು, ಸೆಟ್ಟೇರಿತ್ತು. ಆದರೆ ಆ ವಿಶೇಷವಾದ ಸಿನಿಮಾ ಮುಂದುವರೆಯಲಿಲ್ಲ. ಅದಕ್ಕೆ ಕಾರಣ ಏನು ? ಆ ಸಿನಿಮಾ ಏನಾಯಿತು? ತಿಳಿಸುತ್ತೇವೆ ನೋಡಿ..

ವಿಷ್ಣುದಾದ ಅವರು ಮತ್ತು ಶಿವಣ್ಣ ಅವರು ಜೊತೆಯಾಗಿ ನಟಿಸಬೇಕಿದ್ದ ಸಿನಿಮಾ ಹೆಸರು ಕೃಷ್ಣಾರ್ಜುನ (Krishnarjuna). ಈ ಸಿನಿಮಾದಲ್ಲಿ ಮಹಾಭಾರತದ ಶ್ರೀಕೃಷ್ಣ ಮತ್ತು ಅರ್ಜುನನ ಪಾತ್ರಗಳನ್ನು 90ರ ದಶಕದ ಜೆನೆರೇಷನ್ ಗೆ ತಕ್ಕ ಹಾಗೆ ಚಿತ್ರಣ ಮಾಡಲಾಗಿತ್ತು, ಕೃಷ್ಣಾರ್ಜುನ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಎಲ್ಲವನ್ನು ಬರೆದವರು ಚಿ.ಉದಯಶಂಕರ್ ಅವರು, ಈ ಸಿನಿಮಾದ ಕಥೆಯನ್ನು ಅಣ್ಣಾವ್ರು (Dr Rajkumar), ಪಾರ್ವತಮ್ಮನವರು (Parvathamma Rajkumar), ಶಿವಣ್ಣ ಅವರು, ವಿಷ್ಣುದಾದ ಅವರು, ಎಲ್ಲರೂ ಒಪ್ಪಿದ್ದರು. ಸಿನಿಮಾದ ನಿರ್ದೇಶನವನ್ನು ಉದಯಶಂಕರ್ (Udayashankar) ಅವರ ಸಹೋದರ ಮಾಡಬೇಕಿತ್ತು. ಇದನ್ನು ಓದಿ..Kannada News: ಅನ್ನ ಕೊಟ್ಟ ಕನ್ನಡ ಬಿಟ್ಟು, ಯಶ್ ಬರ್ತ್ ಡೇ ಗೆ ಪ್ರಶಾಂತ್ ನೀಲ್ ವಿಶ್ ಮಾಡಿದ್ದು ಯಾವ ಭಾಷೆ ಗೊತ್ತೇ?? ಕನ್ನಡ ಓಲಾಟಗಾರರೇ ಇದು ಕಾಣುತ್ತಿಲ್ಲವೇ??

ಹಾಗೆಯೇ ಬೇರೆ ಜವಾಬ್ದಾರಿಗಳನ್ನು ಉದಯಶಂಕರ್ ಅವರ ಮಗ ಚಿ.ಗುರುದತ್ ಅವರು ತೆಗೆದುಕೊಳ್ಳಬೇಕಿತ್ತು, ಆದರೆ ಒಂದಲ್ಲಾ ಒಂದು ಸಮಸ್ಯೆಗಳು ಬರುತ್ತಲೇ ಇದ್ದ ಕಾರಣ, ಈ ಸಿನಿಮಾ ಪೋಸ್ಟರ್ ಗೆ ಮಾತ್ರವೇ ಸೀಮಿತವಾಯಿತು. ನಂತರದ ವರ್ಷಗಳಲ್ಲಿ ಚಿ.ಉದಯಶಂಕರ್ ಅವರು ಇನ್ನಿಲ್ಲವಾದರು, ಹಾಗೆಯೇ ಕಥೆ ಕೂಡ ಹಾಗೆ ಉಳಿದುಹೋಯಿತು. ವಿಷ್ಣು ಸರ್ ಜೊತೆಯಲ್ಲಿ ಸಿನಿಮಾ ಮಾಡಲಿಲ್ಲ ಎಂದು ಶಿವಣ್ಣ ಅವರಿಗೆ ಈಗಲೂ ಬೇಸರವಿದೆ. ವಿಷ್ಣು ಸರ್ ಅವರಿಗು ಶಿವಣ್ಣ ಅವರೊಡನೆ ನಟಿಸಬೇಕು ಎಂದು ಬಹಳ ಆಸೆ ಇತ್ತು. ಒಟ್ಟಿನಲ್ಲಿ ಕನ್ನಡ ಚಿತ್ರರಂಗದಲ್ಲಿ ದಾಖಲೆಗಳನ್ನು ಮುರಿಯಬೇಕಿದ್ದ ಅದೊಂದು ಸಿನಿಮಾ, ಶುರುವಾಗುವ ಮೊದಲೇ ನಿಂತು ಹೋಯಿತು. ಇದನ್ನು ಓದಿ.. Kannada News: ಮನೆಯಿಂದ ಹೊರಬಂದ ಮೇಲೆ ಸೋನು ರವರಿಗೆ ಕೈ ಕೊಟ್ಟ ರಾಕೇಶ್ ಅಡಿಗ: ಸುತ್ತಾಡುತ್ತಿರುವುದು ಯಾರ ಜೊತೆ ಗೊತ್ತೇ??

Comments are closed.