Neer Dose Karnataka
Take a fresh look at your lifestyle.

Kannada News: ಬಾಲಿವುಡ್ ಗೆ ಮೊದಲ ಎಂಟ್ರಿ ಕೊಟ್ಟ ತಕ್ಷಣ ಸಪ್ತಮಿ ಗೆ ಬಂತು ಉಡುಗೊರೆ: ಗಿಫ್ಟ್ ಕಂಡು ಫುಲ್ ಕುಶ್ ಆದ ಸಪ್ತಮಿ ಗೌಡ. ಏನು ಗೊತ್ತೇ??

Kannada News: ಕಾಂತಾರ (Kantara) ಸಿನಿಮಾದ ಯಶಸ್ಸು ತಂಡದಲ್ಲಿದ್ದ ಎಲ್ಲರ ಕೆರಿಯರ್ ಗ್ರಾಫ್ ಅನ್ನು ಸಂಪೂರ್ಣವಾಗಿ ಬದಲಾಯಿಸಿದೆ ಎಂದರೆ ತಪ್ಪಾಗುವುದಿಲ್ಲ. ಸಿನಿಮಾದ ನಿರ್ದೇಶಕ ಮತ್ತು ನಾಯಕ ರಿಷಬ್ ಶೆಟ್ಟಿ (Rishab Shetty) ಅವರನ್ನು ಈ ಯಶಸ್ಸು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಿದೆ. ಬಾಲಿವುಡ್, ಟಾಲಿವುಡ್ ಎಲ್ಲಾ ಕಡೆಯಿಂದಲೂ ರಿಷಬ್ ಅವರಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ, ಆದರೆ ರಿಷಬ್ ಅವರು ಇನ್ನು ಯಾವುದೇ ಆಫರ್ ಗಳನ್ನು ಒಪ್ಪಿಕೊಂಡಿಲ್ಲ. ಇತ್ತ ನಾಯಕಿ ಸಪ್ತಮಿ ಗೌಡ (Saptami Gowda) ಅವರಿಗು ಸಹ ದೊಡ್ಡ ದೊಡ್ಡ ಆಫರ್ ಗಳು ಹುಡುಕಿಕೊಂಡು ಬರುತ್ತಿದೆ..

ಕನ್ನಡದಲ್ಲಿ ಕಾಳಿ ಸಿನಿಮಾ ಸೈನ್ ಮಾಡಿರುವ ಸಪ್ತಮಿ ಗೌಡ ಅವರಿಗೆ ಕಾಶ್ಮೀರ್ ಫೈಲ್ಸ್ (Kashmir Files) ಅಂತಹ revolutionary ಸಿನಿಮಾ ನಿರ್ದೇಶನ ಮಾಡಿರುವ ವಿವೇಕ್ ಅಗ್ನಿಹೋತ್ರಿ (Vivek Agnihotri) ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಕೋವಿಡ್ ಸಮಯದಲ್ಲಿ, ವ್ಯಾಕ್ಸಿನ್ ವಿಚಾರದಲ್ಲಿ ನಡೆದ ರಾಜಕೀಯದ ವಿಚಾರಗಳ ಬಗ್ಗೆ, ದಿ ವ್ಯಾಕ್ಸಿನ್ ವಾರ್ (The Vaccine War) ಹೆಸರಿನಲ್ಲಿ ಸಿನಿಮಾ ಮಾಡುತ್ತಿದ್ದು, ವಿವೇಕ್ ಅಗ್ನಿಹೋತ್ರಿ ಅವರ ಈ ಸಿನಿಮಾಗೆ ಕನ್ನಡತಿ ಸಪ್ತಮಿ ಗೌಡ ಅವರು ಆಯ್ಕೆ ಆಗಿದ್ದಾರೆ. ಕೆಲವು ದಿನಗಳ ಹಿಂದೆ ಸಿನಿಮಾ ಚಿತ್ರೀಕರಣ ಶುರುವಾಗಿತ್ತು. ಇದನ್ನು ಓದಿ.. Kannada News: ಪಾಪ ಕಣ್ರೀ ರಶ್ಮಿಕಾ: ಕೈ ಮೇಲೆ ಹಾಕಿಸಿಕೊಂಡಿರುವ ಟ್ಯಾಟೂ ಹಿಂದೆ ಯಾರಿದ್ದಾರೆ ಅಂತೇ ಗೊತ್ತೇ?? ಅದೇ ಕಾರಣ ಎಂದು ಬಹಿರಂಗವಾಗಿ ಹೇಳಿದ ರಶ್ಮಿಕಾ

ಆದರೆ ಚಿತ್ರೀಕರಣ ಸಮಯದಲ್ಲಿ ವಿವೇಕ್ ಅವರ ಪತ್ನಿಗೆ ಅಪಘಾತವಾದ ಕಾರಣ ಶೂಟಿಂಗ್ ನಿಂತಿತ್ತು. ಇದೀಗ ಮತ್ತೆ ಶುರುವಾಗಿದ್ದು, ಸಪ್ತಮಿ ಗೌಡ ಅವರು ಪಾಲ್ಗೊಂಡಿದ್ದಾರೆ, ಮೊದಲ ದಿನ ಶೂಟಿಂಗ್ ನಲ್ಲಿ ಸಪ್ತಮಿ ಗೌಡ ಅವರನ್ನು ಎಲ್ಲರೂ ಒಳ್ಳೆಯ ರೀತಿಯಲ್ಲಿ ಬರಮಾಡಿಕೊಂಡಿದ್ದು, ಮೊದಲ ದಿನವೇ ನಟರಾಜನ ಮೂರ್ತಿಯನ್ನು ಉಡುಗೊರೆಯಾಗಿ ಸಪ್ತಮಿ ಗೌಡ ಅವರಿಗೆ ನೀಡಿದ್ದಾರೆ, ಇದನ್ನು ನೋಡಿ ಫುಲ್ ಖುಷ್ ಆಗಿರುವ ಸಪ್ತಮಿ ಗೌಡ, ಗಿಫ್ಟ್ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ನಮ್ಮ ಕನ್ನಡದ ಹುಡುಗಿ ಬಾಲಿವುಡ್ ನಲ್ಲಿ ಮಿಂಚಲು ರೆಡಿ ಆಗಿದ್ದಾರೆ. ಇದನ್ನು ಓದಿ..Kannada News: ನಾಟಿ ಸ್ಟೈಲ್ ನಲ್ಲಿ ಹುಡುಗರಿಗೆ ಬೆವರು ಬರುವಂತೆ ಮಾಡಿದ ದೀಪಿಕಾ: ಈ ಟಿಕ್ ಟಾಕ್ ಸ್ಟಾರ್ ಅಂದ ನೋಡಿದರೆ, ಹುಡುಕಿಕೊಂಡು ಹೋಗ್ತೀರಾ. ಹೇಗಿದೆ ಗೊತ್ತೇ ಫೋಟೋಸ್?

Comments are closed.