Neer Dose Karnataka
Take a fresh look at your lifestyle.

Kannada News:ಇಂದಿರಾ ಗಾಂಧಿ ಸಿನೆಮಾವನ್ನು ಪೂರ್ಣವಾಗಿ ತೆಗೆಯಲು ಆಸ್ತಿ ಅಡವಿಟ್ಟ ಕಂಗನಾ ರಾವತ್. ವಾಪಸ್ಸು ಬರುವುದೇ ಹಣ??

Kannada News: ನಟಿ ಕಂಗನಾ ರನಾವತ್ ಭಾರತ ಚಿತ್ರರಂಗದ ಅತ್ಯುತ್ತಮ ನಟಿಯರಲ್ಲಿ ಒಬ್ಬರು, ವೈಯಕ್ತಿಕ ಜೀವನದಲ್ಲಿ ಟೀಕೆಗಳನ್ನು ಮಾಡುತ್ತಾ, ಹೆಚ್ಚಾಗಿ ವಿವಾದಗಳಿಂದಲೇ ಸುದ್ದಿಯಾಗುವ ನಟಿ ಕಂಗನಾ ಅವರ ಮೇಲೆ ಆಗಾಗ ಕೇಸ್ ಗಳು ದಾಖಲಾಗುತ್ತಲೇ ಇರುತ್ತದೆ. ಆದರೆ ಈಗಿನ ಪೀಳಿಗೆಯಲ್ಲಿ ನಟನೆಯ ವಿಚಾರಕ್ಕೆ ಬಂದರೆ ಇವರನ್ನು ಮೀರಿಸುವ ನಟಿ ಬಾಲಿವುಡ್ ನಲ್ಲಿ ಮತ್ತೊಬ್ಬರಿಲ್ಲ ಎಂದು ಹೇಳಬಹುದು. ಸಿನಿಮಾಗಳಲ್ಲಿ ಯಾವುದೇ ಪಾತ್ರವಾದರು ಅದನ್ನು ಜೀವಿಸಿ ನಟಿಸುತ್ತಾರೆ.

ಎರಡು ಸಾರಿ ನ್ಯಾಷನಲ್ ಅವಾರ್ಡ್ ಪಡೆದಿರುವ ಕಂಗನಾ ಅವರು, ಈಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ, ಇಂದಿರಾ ಗಾಂಧಿ ಅವರ ಕುರಿತು ಸಿನಿಮಾ ಒಂದನ್ನು ಮಾಡುತ್ತಿದ್ದಾರೆ, ಈ ಸಿನಿಮಾ ಹೆಸರು ಎಮರ್ಜೆನ್ಸಿ, ನಮ್ಮ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಲ್ಲಿದ್ದ ಸಮಯದ ಕಥೆ ಇದಾಗಿದೆ. ಈ ಸಿನಿಮಾವನ್ನು ಕಂಗನಾ ಅವರೇ ನಿರ್ದೇಶಿಸಿ, ನಿರ್ಮಾಣ ಮಾಡಿ ಜೊತೆಗೆ ಇಂದಿರಾ ಗಾಂಧಿ ಅವರ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಚಿತ್ರೀಕರಣವನ್ನು ಕಂಗನಾ ಅವರು ಈಗಷ್ಟೇ ಮುಗಿಸಿದ್ದು, ಭಾವನಾತ್ಮಕವಾದ ಸಾಲುಗಳನ್ನು ಬರೆದು ಸಿನಿಮಾ ಬಗ್ಗೆ ತಿಳಿಸಿದ್ದಾರೆ, “ಒಬ್ಬ ನಟಿಯಾಗಿ, ನಿರ್ದೇಶಕಿಯಾಗಿ ಮತ್ತು ನಿರ್ಮಾಪಕಿಯಾಗಿ ಈ ಸಿನಿಮಾ ನನಗೆ ತುಂಬಾ ಮುಖ್ಯ. ಇದನ್ನು ಓದಿ.. Kannada News: ತನ್ನನ್ನು ಬೆಳೆಸಿದ ಧಾರವಾಹಿ ಲೋಕದ ಬಗ್ಗೆಯೇ ಷಾಕಿಂಗ್ ಹೇಳಿಕೆ ಕೊಟ್ಟ ನಟಿ: ಧಾರವಾಹಿ ಲೋಕದ ಮತ್ತೊಂದು ಮುಖ ಹೇಗಿರುತ್ತದೆ ಅಂತೇ ಗೊತ್ತೇ??

ಸಿನಿಮಾ ಚಿತ್ರೀಕರಣ ಮುಗಿಸೋದಕ್ಕೆ ನನ್ನ ಆಸ್ತಿಯನ್ನು ಅಡ ಇಟ್ಟಿದ್ದೇನೆ, ಮೊದಲ ಶೆಡ್ಯೂಲ್ ನಡೆಯುವಾಗ ನನಗೆ ಡೆಂಗ್ಯೂ ಬಂದು ತುಂಬಾ ತೊಂದರೆ ಆಗಿತ್ತು. ಬ್ಲಡ್ ಕೌಂಟ್ ಕಡಿಮೆ ಆಗಿತ್ತು. ನನ್ನ ಜೀವನದ ಬಗ್ಗೆ ಬಹಳಷ್ಟು ವಿಚಾರಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತೇನೆ, ಆದರೆ ಈ ವಿಷಯವನ್ನು ಹೇಳಬೇಕು ಅನ್ನಿಸಲಿಲ್ಲ, ಏಕೆಂದರೆ ನನ್ನ ಬಗ್ಗೆ ಆತಂಕ ಪಡುವುದು ನನಗೆ ಇಷ್ಟವಿರಲಿಲ್ಲ, ಹಾಗೆಯೇ ನನ್ನನ್ನು ದ್ವೇಷಿಸುವವರು ಈ ಸುದ್ದಿ ಕೇಳಿ ಸಂತೋಷ ಪಡುವುದು ನನಗೆ ಇಷ್ಟವಿರಲಿಲ್ಲ..” ಎಂದು ಬರೆದುಕೊಂಡಿದ್ದಾರೆ ನಟಿ ಕಂಗನಾ ರನಾವತ್. ಈ ಸಿನಿಮಾ ಮೇಲೆ ಭಾರಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅವರು ಅಂದುಕೊಂಡ ಹಾಗೆ, ಆಸ್ತಿಯನ್ನು ಅಡ ಇಟ್ಟಿರುವಾಗ ಸಿನಿಮಾ ಯಶಸ್ಸು ಕಂಡು, ಕಂಗನಾ ಅವರಿಗೆ ಹಣ ತಂದುಕೊಡುತ್ತಾ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಮತ್ತೊಂದು ವಿವಾದ ಕ್ರಾಂತಿಗೆ ಅಡ್ಡಿ; ಸಂವಿಧಾನ ವಿರೋಧಿ ಹೇಳಿಕೆ ಕೊಟ್ಟರೆ ರಚಿತಾ ರಾಮ್?? ಗಡಿಪಾರು ಮಾಡಲು ಆಗ್ರಹ.

Comments are closed.