Neer Dose Karnataka
Take a fresh look at your lifestyle.

Kannada News: ಟ್ಯಾಟೂ ಹಾಕಿಸಿಕೊಂಡ ದರ್ಶನ್ ವಿರುದ್ಧ ಕೊಂಕು ತೆಗೆದ ಅಪ್ಪು ಅಭಿಮಾನಿಗಳು. ಎಲ್ಲವೂ ತಣ್ಣಗಾಗಿದ್ದಾಗ, ದರ್ಶನ್ ವಿರುದ್ದ ಮತ್ತೊಂದು ಆರೋಪ. ಏನು ಗೊತ್ತೆ?

Kannada News: ನಟ ದರ್ಶನ್ ಅವರಿಗೆ ಇರುವ ಫ್ಯಾನ್ ಬೇಸ್ ಎಂಥದ್ದು ಎಂದು ಎಲ್ಲರಿಗೂ ಗೊತ್ತಿದೆ, ಅವರಿಗೆ ಇರುಗ ಹಾಗೆ ಮಾಸ್ ಫ್ಯಾನ್ ಬೇಸ್ ಕರ್ನಾಟಕದಲ್ಲಿ ಬೇರೆ ನಾಯಕರಿಗೆ ಇಲ್ಲ ಎಂದೇ ಹೇಳಬಹುದು. ದರ್ಶನ್ ಅವರಿಗು ತಮ್ಮ ಅಭಿಮಾನಿಗಳ ಮೇಲೆ ಅಷ್ಟೇ ಪ್ರೀತಿ ಇದೆ, ಅಭಿಮಾನಿಗಳಿಗೆ ಅವರು ಮಾಡುವ ಸಪೋರ್ಟ್ ಇಂದಲೇ ಅದು ಗೊತ್ತಾಗುತ್ತದೆ. ಕ್ರಾಂತಿ ಸಿನಿಮಾಗೆ ದರ್ಶನ್ ಅವರ ಅಭಿಮಾನಿಗಳ ಸಪೋರ್ಟ್ ಹೇಗಿತ್ತು ಎಂದು ಎಲ್ಲರೂ ನೋಡಿದ್ದಾರೆ. ಅಭಿಮಾನಿಗಳಿಗೋಸ್ಕರ ದರ್ಶನ್ ಅವರು ಒಂದು ಹೆಜ್ಜೆ ಮುಂದೆ ಹೋಗಿ, ಟ್ಯಾಟೂ ಹಾಕಿಸಿಕೊಂಡಿದ್ದಾರೆ.

ನನ್ನ ಸೆಲೆಬ್ರಿಟಿಗಳು ಎಂದು ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಂಡು, ಅದರ ವಿಡಿಯೋ ಒಂದನ್ನು ದರ್ಶನ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಮತ್ತು ಎಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ಇದನ್ನು ನೋಡಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ಡಿಬಾಸ್ ಬಗ್ಗೆ ಅವರಿಗೆ ಇನ್ನಷ್ಟು ಹೆಮ್ಮೆ ಹೆಚ್ಚಾಗಿದೆ, ದರ್ಶನ್ ಅವರನ್ನು ದೇವರ ಹಾಗೆ ಆರಾಧನೆ ಮಾಡುತ್ತಿದ್ದ ಅಭಿಮಾನಿಗಳಿಗೆ ಅವರ ಮೇಲಿನ ಪ್ರೀತಿ ಇನ್ನು ಹೆಚ್ಚಾಗಿದೆ ಎಂದೇ ಹೇಳಬಹುದು. ಆದರೆ ಈಗ ಅಪ್ಪು ಅವರ ಅಭಿಮಾನಿಗಳು ಮತ್ತೊಂದು ವಿಷಯ ತೆಗೆದಿದ್ದಾರೆ. ಇದನ್ನು ಓದಿ..Kannada News: ತುಪ್ಪ ಬೇಕಾ ತುಪ್ಪ ಎಂದು ಹಾಡಿ ಕುಣಿದು, ದೇಶವನ್ನೇ ಗೆದ್ದಿರುವ ರಾಗಿಣಿ ಮದುವೆ ಯಾವಾಗ ಗೊತ್ತೇ? ಅಸಲಿಗೆ ಮದುವೆ ಆಗ್ತಾರಾ??

ಈ ಹಿಂದೆ ಒಂದು ಸಾರಿ ಅಪ್ಪು ಅವರು ನನ್ನ ಅಭಿಮಾನಿಗಳಿಗೋಸ್ಕರ ಎದೆಯ ಮೇಲೆ ಟ್ಯಾಟೂ ಹಾಕಿಸಿಕೊಳ್ತೀನಿ ಎಂದು ಹೇಳಿದ್ದರು. ಅದೇ ಮಾತನ್ನು ದರ್ಶನ್ ಅವರು ಕಾಪಿ ಮಾಡಿದ್ದಾರೆ ಎಂದು ಅಪ್ಪು ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದರಿಂದ ದರ್ಶನ್ ಅವರ ಅಭಿಮಾನಿಗಳು ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ. ಅಪ್ಪು ಅವರು ಯಾವತ್ತಿಗೂ ಫ್ಯಾನ್ ವಾರ್ ಬೇಡ ಎಂದೇ ಹೇಳುತ್ತಾ ಬಂದವರು. ಅಂತಹ ನಟನ ಅಭಿಮಾನಿಗಳು ಈ ರೀತಿ ಮಾಡುತ್ತಿರುವುದು ಸರಿ ಅಲ್ಲ ಎಂದು ನೆಟ್ಟಿಗರು ಹೇಳುತ್ತಿದ್ದು, ಈ ಟ್ಯಾಟೂ ಸುದ್ದಿ ಇನ್ನುಮುಂದೆ ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ..Kannada News: ಯುವ ನಟಿಯೇ ಬೇಕೇ ಬೇಕು ಎಂದು ಹಿಂದೆ ಬಿದ್ದ ನಿರ್ಮಾಪಕ: ಹೊಸ ನಟಿಯಾದರು ಕೋಟಿ ಖರ್ಚು ಮಾಡಲು ಸಿದ್ದವಾಗಿದ್ದು ಯಾವ ಬೆಡಗಿಗೆ ಗೊತ್ತೆ?

Comments are closed.