Neer Dose Karnataka
Take a fresh look at your lifestyle.

Kannada News: ಕನ್ನಡತಿಯೇ ಬೇಕು ಎಂದು ಹುಡುಕಿಕೊಂಡು ಬಂದ ತೆಲುಗಿನ ನಟ ಪವನ್ ಕಲ್ಯಾಣ್; ಅವಕಾಶ ಪಡೆದ ಅದೃಷ್ಟವಂತೆ ಯಾರು ಗೊತ್ತೇ??

Kannada News: ಟಾಲಿವುಡ್ ನಲ್ಲಿ ಪವರ್ ಸ್ಟಾರ್ ಎಂದು ಖ್ಯಾತಿಯಾಗಿರುವವರು ನಟ ಪವನ್ ಕಲ್ಯಾಣ್. ಇವರಿಗೆ ಎಷ್ಟು ದೊಡ್ಡ ಫ್ಯಾನ್ ಬೇಸ್ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಇವರ ಸಿನಿಮಾದಲ್ಲಿ ನಟಿಸಲು ಎಲ್ಲಾ ಹೀರೋಯಿನ್ ಗಳು ಕಾಯುತ್ತಿರುತ್ತಾರೆ. ಪವನ್ ಕಲ್ಯಾಣ್ ಅವರ ಸಿನಿಮಾದಲ್ಲಿ ನಟಿಸಿದರೆ ಇವರಿಗೆ ಸಿಗುವ ಅವಕಾಶಗಳು ಕೂಡ ಹೆಚ್ಚಾಗುತ್ತದೆ ಎನ್ನುತ್ತಾರೆ.

ಇದೀಗ ಪವನ್ ಕಲ್ಯಾಣ್ ಅವರು ತಮ್ಮ ಸಿನಿಮಾದಲ್ಲಿ ನಟಿಸಲು ಕನ್ನಡತಿಯೇ ಬೇಕು ಎಂದು ಆಯ್ಕೆ ಮಾಡಿಕೊಂಡಿದ್ದಾರಂತೆ. ಈಗ ಪವನ್ ಕಲ್ಯಾಣ್ ಅವರು ಆಯ್ಕೆ ಮಾಡಿಕೊಂಡಿರುವುದು ಮತ್ಯಾರನ್ನು ಅಲ್ಲ ನಟಿ ಶ್ರೀಲೀಲಾ ಅವರನ್ನು. ಶ್ರೀಲೀಲಾ ಅವರು ತೆಲುಗಿನ ಧಮಾಕ ಸಿನಿಮಾದಲ್ಲಿ ನಟಿಸಿ ದೊಡ್ಡ ಹಿಟ್ ಪಡೆದುಕೊಂಡರು. ಈ ಸಿನಿಮಾದಲ್ಲಿ ಇವರ ಡ್ಯಾನ್ಸ್ ಮತ್ತು ಅಭಿನಗಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಇದನ್ನು ಓದಿ..Kannada News: ಅಪ್ಪು ಉಚಿತವಾಗಿ ಹೋಗಿದ್ದ ವೀಕೆಂಡ್ ವಿಥ್ ರಮೇಶ್ ಗೆ ಅಶ್ವಿನಿ ಮೇಡಂ ಕೇಳಿದ ಸಂಭಾವನೆ ಎಷ್ಟು ಗೊತ್ತೇ?? ತಿಳಿದರೆ ಊಟ ಮಾಡೋದೇ ಬಿಡ್ತೀರಾ.

ಅಷ್ಟೇ ಅಲ್ಲದೆ ನಿರ್ದೇಶಕ ತ್ರಿವಿಕ್ರಂ ಶ್ರೀನಿವಾಸ್ ಮತ್ತು ಮಹೇಶ್ ಬಾಬು ಅವರ ಸಿನಿಮಾದಲ್ಲಿ ನಟಿಸಲು ಶ್ರೀಲೀಲಾ ಅವರಿಗೆ ಅವಕಾಶ ಸಿಕ್ಕಿದೆ. ತಮಿಳಿನ ವಿನೋದಯಾ ಸೀತಂ ಸಿನಿಮಾ ತೆಲುಗಿಗೆ ರಿಮೇಕ್ ಆಗುತ್ತಿದ್ದು, ಈ ಸಿನಿಮಾದಲ್ಲಿ ಸಾಯಿ ಧರಂ ತೇಜ್ ಅವರ ಜೊತೆಗೆ ಪವನ್ ಕಲ್ಯಾಣ್ ಅವರು ಕೂಡ ನಟಿಸಲಿದ್ದಾರೆ. ಈ ಸಿನಿಮಾದ ಸ್ಪೆಷಲ್ ಸಾಂಗ್ ನಲ್ಲಿ ಶ್ರೀಲೀಲಾ ಅವರು ಕಾಣಿಸಿಕೊಳ್ಳಲಿದ್ದಾರಂತೆ. ಈ ರೀತಿಯಾಗಿ ಶ್ರೀಲೀಲಾ ಅವರಿಗೆ ಹೆಚ್ಚಿನ ಅವಕಾಶ ಸಿಗುತ್ತಿದೆ. ಇದನ್ನು ಓದಿ..Film News: ಹಿರಿಯ ನಟ ವಿಶ್ವನಾಥ್ ಕೊನೆಯುಸಿರೆಳೆದ ಕೆಲವೇ ದಿನಗಳಲ್ಲಿ ಕುಟುಂಬಕ್ಕೆ ಮತ್ತೊಂದು ಶಾಕ್. ಕಣ್ಣೀರಿನಲ್ಲಿ ಚಿತ್ರರಂಗ

Comments are closed.