Neer Dose Karnataka
Take a fresh look at your lifestyle.

Film News: ರಶ್ಮಿಕಾ ಅಲ್ಲ, ಮತ್ತೊಬ್ಬಳು ಕನ್ನಡತಿಯನ್ನು ತನ್ನ ಸಿನೆಮಾಗೆ ನಟಿಯಾಗಿ ಆಯ್ಕೆ ಮಾಡಿದ ವಿಜಯ್. ಈಕೆಯೇ ಬೇಕು ಎಂದು ಹಠ ಹಿಡಿದಿದ್ದು ಯಾರನ್ನು ಗೊತ್ತೆ??

Film News: ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿ ಡೆಬ್ಯು ಮಾಡಿ ನಂತರ ಹಾರಿದ್ದು ತೆಲುಗಿಗೆ, ಮೊದಲ ಸಿನಿಮಾ ಇಂದಲೇ ತೆಲುಗಿನಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದ್ದ ರಶ್ಮಿಕಾ ಅವರಿಗೆ ಸ್ಟಾರ್ ಸ್ಟೇಟಸ್ ತಂದುಕೊಟ್ಟಿದ್ದು ಗೀತಾ ಗೋವಿಂದಮ್ ಸಿನಿಮಾ ಎಂದರೆ ತಪ್ಪಲ್ಲ. ಈ ಸಿನಿಮಾದಲ್ಲಿ ರಶ್ಮಿಕಾ ಅವರಿಗೆ ವಿಜಯ್ ದೇವರಕೊಂಡ ಹೀರೋ ಆಗಿ ನಟಿಸಿದ್ದರು, ಇವರಿಬ್ಬರ ಜೋಡಿ ಸೂಪರ್ ಹಿಟ್ ಆಗಿತ್ತು. ಬಳಿಕ ಈ ಜೋಡಿ ಜೊತೆಯಾಗಿ ಮೂರು ಸಿನಿಮಾಗಳಲ್ಲಿ ನಟಿಸಿ, ಸಿನಿಪ್ರಿಯರ ಫೇವರೆಟ್ ಜೋಡಿ ಆದರು.

ಇವರಿಬ್ಬರು ಕೆರಿಯರ್ ನಲ್ಲಿ ಮಾತ್ರವಲ್ಲ ನಿಜ ಜೀವನದಲ್ಲಿ ಕೂಡ ತುಂಬಾ ಕ್ಲೋಸ್ ಎಂದು ಹೇಳಲಾಗಿದೆ, ವಿಜಯ್ ರಶ್ಮಿಕಾ ಡೇಟ್ ಮಾಡುತ್ತಿದ್ದು, ಇಬ್ಬರು ಮಾಲ್ಡಿವ್ಸ್ ಗೆ ಜೊತೆಯಾಗಿ ಹೋಗಿಬಂದಿದ್ದರು. ಹಲವು ಸಾರಿ ಹೊರಗಡೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ, ಹಾಗಾಗಿ ಇವರಿಬ್ಬರು ಶೀಘ್ರದಲ್ಲೇ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು. ಇಬರಿಬ್ಬರು ಜೊತೆಯಾಗಿ ಮತ್ತೊಂದು ಸಿನಿಮಾ ಮಾಡಲಿ ಎಂದು ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ಇದನ್ನು ಓದಿ..Kannada News: ಸಾಕಷ್ಟು ಕಷ್ಟ, ಅನಾರೋಗ್ಯ ಇವೆಲ್ಲದರ ನಡುವೆಯೂ ಮತ್ತೊಂದು ಕಾರ್ಯಕ್ಕೆ ಕೈ ಹಾಕಿದ ವಿನೋದ್ ಅಣ್ಣ ಹಾಗೂ ಲೀಲಾವತಿ ಅಮ್ಮ. ಏನು ಮಾಡುತ್ತಿದ್ದಾರೆ ಗೊತ್ತೇ?

ಆದರೆ ಇದೀಗ ನಟ ವಿಜಯ್ ದೇವರಕೊಂಡ ತಮ್ಮ ಸಿನಿಮಾಗೆ ಕನ್ನಡದ ಬೇರೆ ನಟಿಯನ್ನು ಆಯ್ಕೆ ಮಾಡಿ ರಶ್ಮಿಕಾ ಅವರಿಗೆ ಶಾಕ್ ಕೊಟ್ಟಿದ್ದಾರೆ. ಸಿತಾರ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಲ್ಲಿ, ಜೆರ್ಸಿ ಖ್ಯಾತಿಯ ಗೌತಮ್ ಅವರು ನಿರ್ದೇಶನ ಮಾಡಲಿರುವ ಮುಂದಿನ ಸಿನಿಮಾಗೆ ವಿಜಯ್ ದೇವರಕೊಂಡ ಅವರು ಹೀರೋ ಆಗಿದ್ದು, ಅವರಿಗೆ ನಾಯಕಿಯಾಗಿ ಕನ್ನಡದ ನಟಿ ಶ್ರೀಲೀಲಾ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ, ಧಮಾಕ ಯಶಸ್ಸಿನ ನಂತರ ಶ್ರೀಲೀಲಾ ಅವರಿಗೆ ತೆಲುಗಿನಲ್ಲಿ ಬೇಡಿಕೆ ಹೆಚ್ಚಾಗಿದ್ದು, ಸಿತಾರ ಎಂಟರ್ಟೈನ್ಮೆಂಟ್ಸ್ ಜೊತೆಗೆ 4 ಸಿನಿಮಾಗಳ ಒಪ್ಪಂದ ಆಗಿದೆಯಂತೆ, ಅದರಲ್ಲಿ ವಿಜಯ್ ದೇವರಕೊಂಡ ಅವರ ಸಿನಿಮಾ ಕೂಡ ಒಂದು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Bhagyalakshmi: ಕಾವೇರಿ ಪ್ಲಾನ್ ಉಲ್ಟಾ: ಖಡಕ್ ಎಂಟ್ರಿ ಕೊಡುತ್ತಾರ ಕೀರ್ತಿ: ವೈಷ್ಣವಿ ಮನಸಿನಲ್ಲಿ ಈಗ ಏನಿದೆ ಗೊತ್ತೇ? ಮತ್ತೊಂದು ಟ್ವಿಸ್ಟ್. ಏನು ಗೊತ್ತೇ??

Comments are closed.