Neer Dose Karnataka
Take a fresh look at your lifestyle.

News:ಪ್ರೀತಿ ಪ್ರೀತಿ ಪ್ರೀತಿ- ಹುಡುಗಿಗೆ ಸಾಕಷ್ಟು ಪ್ರೀತಿ ಕೊಟ್ಟ – ಅವಳು ಅಷ್ಟೇ ಪ್ರೀತಿ ಮಾಡಿದಳು, ಆದರೆ ಕೊನೆಗೆ ಏನಾಗಿ ಹೋಯ್ತು ಗೊತ್ತೇ?

News: ಪ್ರೀತಿ ಎನ್ನುವುದು ಎಲ್ಲರ ಜೀವನದಲ್ಲಿ ಮೂಡುವ ಭಾವನೆ, ಹುಡುಗ ಹುಡುಗಿಯ ನಡುವೆ ಪ್ರೀತಿ ಮೂಡಿ ಒಂದಷ್ಟು ಸಮಯದವರೆಗೂ ಅದು ಇರುತ್ತದೆ. ಕೆಲವು ಸಾರಿ ಅಷ್ಟೇ ಬೇಗ ಬ್ರೇಕಪ್ ಕೂಡ ಆಗುತ್ತದೆ. ಇದೆಲ್ಲವೂ ಜೀವನದಲ್ಲಿ ನಡೆಯುವುದು ಸಹಜ, ಆದರೆ ಇಂಥ ಘಟನೆಗಳು ನಡೆದಾಗ, ಕೆಲವೊಮ್ಮೆ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಸಂದರ್ಭ ಕೂಡ ಬರುತ್ತದೆ. ಇಲ್ಲೊಬ್ಬ ಹುಡುಗನ ಜೀವನದಲ್ಲಿ ಕೂಡ ಹೀಗೆ ನಡೆದಿದೆ. ಅಷ್ಟಕ್ಕೂ ಏನಾಗಿದೆ ಎಂದು ತಿಳಿಸುತ್ತೇವೆ ನೋಡಿ..

ಈ ಘಟನೆ ನಡೆದಿರುವುದು ರಂಗಾರೆಡ್ಡಿ ಜಿಲ್ಲೆಯ ಕೊತ್ವಾಲ್ ಗುಡಾ ಗ್ರಾಮದಲ್ಲಿ ಸಿದ್ಧತಿ ಶಿವ ಎನ್ನುವ ಹುಡುಗ ಒಂದು ಹುಡುಗಿಯನ್ನು ಪ್ರೀತಿಸುತ್ತಿದ್ದ, ಆಕೆಗೂ ಅವನನ್ನು ಕಂಡರೆ ಇಷ್ಟವಿತ್ತು. ಇಬ್ಬರು ಕೂಡ ಪ್ರೀತಿಸಲು ಶುರು ಮಾಡಿ, ಒಬ್ಬರನ್ನೊಬ್ಬರು ಬಿಟ್ಟಿರದ ಹಾಗೆ ಹಚ್ಚಿಕೊಂಡಿದ್ದರು. ಆದಷ್ಟು ಬೇಗ ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿ, ಪ್ರೀತಿ ವಿಷಯವನ್ನು ಮನೆಯಲ್ಲಿ ತಿಳಿಸಿದರು, ಆದರೆ ಮನೆಯವರು ಅದನ್ನು ಒಪ್ಪಲಿಲ್ಲ. ಹುಡುಗಿಯ ಮನೆಯವರು ಆಕೆಯನ್ನು ಮರೆತರೆ ಒಳ್ಳೆಯದು ಎಂದು ಹುಡುಗನಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ಇದನ್ನು ಓದಿ..Power Bill: ನಿಮ್ಮ ಮನೆಯ ಕರೆಂಟ್ ಬಿಲ್ ಜಾಸ್ತಿ ಆಗಿದೆಯೇ?? ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧದಷ್ಟು ಕಡಿಮೆ ಆಗುತ್ತದೆ. ಏನು ಮಾಡಬೇಕು ಗೊತ್ತೇ??

ಹಾಗೆಯೇ ಮತ್ತೊಬ್ಬ ಹುಡುಗನ ಜೊತೆಗೆ ಆಕೆಯ ಮದುವೆಯನ್ನು ಮಾಡುವ ನಿರ್ಧಾರ ಮಾಡಿ, ಸಿದ್ಧತೆಗಳನ್ನು ಸಹ ಮಾಡಿಕೊಂಡಿದ್ದಾರೆ. ಇದೆಲ್ಲವೂ ಆ ಹುಡುಗನಿಗೆ ಗೊತ್ತಾಗಿ ಅವನ ಮನಸ್ಸಿಗೆ ಬಹಳ ನೋವಾಯಿತು. ಮನಸಾರೆ ಇಷ್ಟಪಟ್ಟ ಹುಡುಗಿ ತನ್ನನ್ನು ಮದುವೆ ಆಗಲು ಅಗೋದಿಲ್ಲ ಎಂದು ಅವನಿಗೆ ತಡೆಯಲು ಸಾಧ್ಯವಾಗಲಿಲ್ಲ. ಇದರಿಂದ ಅವನ ಮನಸ್ಸಿಗೆ ನೋವಾಗಿ, ಕೊತ್ವಾಲ್ ಗುಡಾದ ಜಮೀನಿಗೆ ಹೋಗಿ ಪ್ರಾಣ ಕಳೆದುಕೊಂಡಿದ್ದಾನೆ.

ಈ ವಿಷಯ ಅವನ ತಂದೆ ತಾಯಿ ಮತ್ತು ಕುಟುಂಬದವರಿಗೆ ಗೊತ್ತಾಗಿ ಅವರೆಲ್ಲರೂ ಕಣ್ಣೀರು ಹಾಕಿದ್ದಾರೆ. ಆ ಹುಡುಗನ ಮನೆಯವರು, ಹುಡುಗನ ದೇಹವನ್ನು ಹುಡುಗಿಯ ಮನೆಯ ಹತ್ತಿರ ಇಟ್ಟು ಪ್ರತಿಭಟನೆ ಮಾಡಿದರು..ಅವನು ಹೀಗೆ ಮಾಡಿಕೊಳ್ಳಲು ಹುಡುಗಿಯ ಕುಟುಂಬದವರೆ ಕಾರಣ ಎಂದು ಆತನ ತಂದೆ ಆರೋಪ ಮಾಡಿದ್ದಾರೆ. ವಿಚಾರ ಗೊತ್ತಾಗಿ ಪೊಲೀಸರು ಅಲ್ಲಿಗೆ ಬಂದಿದ್ದು ಹುಡುಗನ ತಂದೆ ತಾಯಿ ಜೊತೆಗೆ ಮಾತನಾಡಿ ಸಮಾಧಾನ ಮಾಡಿದ್ದಾರೆ. ಹುಡುಗನ ತಂದೆ ನೀಡಿದ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದು ಪೊಲೀಸರು ಅದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇದನ್ನು ಓದಿ..Business Idea: ಈ ಬೆಳೆ ಬೆಳೆದರೆ, ವರ್ಷಕ್ಕೆ 40 ಲಕ್ಷ ಆದಾಯ ಫಿಕ್ಸ್ – ಅದು ಒಂದು ಎಕರೆಗೆ. ಆದರೆ ಒಳಗಿರುವ ಮರ್ಮವೇನು ಗೊತ್ತೇ?

Comments are closed.