Neer Dose Karnataka
Take a fresh look at your lifestyle.

Bengaluru News: ಆಂಜನೇಯನಿಗೆ ನಮಿಸುತ್ತಾ ತನ್ನ ಪ್ರಾಣ ಬಿಟ್ಟ ಕೋತಿ- ಬೆಂಗಳೂರಿನಲ್ಲಿ ಪವಾಡ.

Bengaluru News: ನಮ್ಮ ದೇಶದಲ್ಲಿ ಕೋತೀಯನ್ನು ಆಂಜನೇಯ ಸ್ವಾಮಿಯ (Anjaneya Swamy) ಸ್ವರೂಪ ಎಂದು ಹೇಳುತ್ತಾರೆ. ಕೋತಿಗಳು ದೇವರಿಗೆ ಭಕ್ತಿ ಸಲ್ಲಿಸುವಂಥ ಅನೇಕ ಸನ್ನಿವೇಶಗಳು, ಘಟನೆಗಳನ್ನು ನಾವು ನೋಡಿರುತ್ತೇವೆ, ಆ ಥರದ ಫೋಟೋಗಳು ಮತ್ತು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತದೆ. ಮೊನ್ನೆಯಷ್ಟೇ ಬೆಂಗಳೂರಿನಲ್ಲಿ (Bengaluru News) ಅಂಥದ್ದೇ ಒಂದು ಘಟನೆ ನಡೆದಿದೆ. ಕೋತಿಯೊಂದು ಆಂಜನೇಯ ಸ್ವಾಮಿಗೆ ನಮಸ್ಕರಿಸುತ್ತಲೇ ಪ್ರಾಣ ಬಿಟ್ಟಿದೆ..

ಈ ಘಟನೆ ಬಗ್ಗೆ ಪೂರ್ತಿಯಾಗಿ ತಿಳಿಸುತ್ತೇವೆ ನೋಡಿ.. ನಿಜಕ್ಕೂ ಈ ಘಟನೆ ನಡೆದಿರುವುದು, ಬೆಂಗಳೂರು ಗ್ರಾಮಾಂತರ ವಿಭಾಗದ, ಆನೇಕಲ್ ತಾಲ್ಲೂಕಿನ, ಸರ್ಜಾಪುರದ ರಾಮನಾಯಕನ ಹಳ್ಳಿಯ ಗ್ರಾಮದ ವೀರಾಂಜನೆಯ ಸ್ವಾಮಿ ದೇವಸ್ಥಾನದ ಹತ್ತಿರ. ಈ ದೇವಸ್ಥಾನದ ಪ್ರವೇಶ ದ್ವಾರದ ಹತ್ತಿರವೇ ಕೋತಿ ಪ್ರಾಣ ಬಿಟ್ಟಿರುವುದು ಒಂದು ವಿಸ್ಮಯಕ್ಕೆ ಕಾರಣವಾಗಿದೆ (Bengaluru News). ಹಾಗೆಯೇ ಇಲ್ಲಿ ಪವಾಡ ನಡೆದಿದೆ ಎಂದು ಕೂಡ ಜನರು ನಂಬುತ್ತಿದ್ದಾರೆ. ನಿಜಕ್ಕೂ ಕೋತಿಯ ವಿಚಾರದಲ್ಲಿ ನಡೆದಿರುವುದು ಏನು ಎಂದರೆ.. ಇದನ್ನು ಓದಿ..News: 40000 ಕೋಟಿ ಆಸ್ತಿ ಬಿಟ್ಟು ಬೌದ್ಧ ಸನ್ಯಾಸಿಯಾದ ಯುವಕ- ತನ್ನ ಆಸ್ತಿಬಿಟ್ಟು ಬಿಟ್ಟ ಯುವಕ.

ಈ ಒಂದು ಕೋತಿ ಪ್ರತಿದಿನ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ, ದೇವಸ್ಥಾನದ ಆವರಣದಲ್ಲೇ ಓಡಾಡಿಕೊಂಡಿತ್ತು. ಬರುವ ಭಕ್ತಾದಿಗಳ ಜೊತೆಗೆ ಚೆನ್ನಾಗಿಯೂ ಇತ್ತು. ಊರಿನ ಜನರು ಕೂಡ ಕೋತಿಗೆ ತೊಂದರೆ ಕೊಡುತ್ತಿರಲಿಲ್ಲ. ಈ ದೇವಸ್ಥಾನದಲ್ಲಿ ರಾಮಕೃಷ್ಣಯ್ಯ ಹೆಸರಿನ ಅರ್ಚಕರು ಪ್ರತಿ ದಿನ ಪೂಜೆ ಮಾಡುತ್ತಾರೆ. ನಿನ್ನೆ ಜುಲೈ 17ರಂದು ಭೀಮನ ಅಮಾವಾಸ್ಯೆ ಇತ್ತು, ಈ ದಿನದ ವಿಶೇಷವಾಗಿ ಅರ್ಚಕರು ಪೂಜೆ ಮಾಡಿ, ದೇವಸ್ಥಾನದ ಬಾಗಿಲು ಹಾಕಿಕೊಂಡು ಮನೆಗೆ ಹೋಗಿದ್ದಾರೆ (Bengaluru News).

ಮರುದಿನ ಬೆಳಗ್ಗೆ ಬಂದು ನೋಡಿದಾಗ, ದೇವಸ್ಥಾನದ ಬಾಗಿಲ ಹತ್ತಿರವೇ ಕೋತಿ ಮಲಗಿತ್ತು. ಹತ್ತಿರ ಹೋಗಿ ನೋಡಿದಾಗ, ಕೋತಿ ಇನ್ನಿಲ್ಲ ಎನ್ನುವುದು ಗೊತ್ತಾಗಿದೆ. ಆದರೆ ಕೋತಿ ಅಲ್ಲಿ ಮಲಗಿದ್ದ ಸ್ಥಿತಿ ಹೇಗಿತ್ತು ಎಂದರೆ, ಕೈಮುಗಿದ್ ಸ್ಥಿತಿಯುಲ್ಲಿ ಕೋತಿ ಮಲಗಿತ್ತು (Bengaluru News). ಇದನ್ನು ನೋಡಿ ಅರ್ಚಕರು ಆಶ್ಚರ್ಯಗೊಂಡರು. ದೇವಸ್ಥಾನದ ಬಾಗಿಲ ಹತ್ತಿರ ತಲೆ ಇಟ್ಟು, ಆಂಜನೇಯ ಸ್ವಾಮಿಗೆ ನಮಿಸಿ ಪ್ರಾಣ ಬಿಟ್ಟಿದೆ ಎನ್ನುವ ವಿಚಾರ ತಿಳಿದುಬಂದಿದೆ. ಇದನ್ನು ಓದಿ..Loan: ನಿಮ್ಮ ಸಂಬಳ ಕಡಿಮೆ ಇದ್ದರೂ 10 ನಿಮಿಷದಲ್ಲಿ 10 ಲಕ್ಷದ ಲೋನ್ ಪಡೆಯಿರಿ- ಅದು ಜಸ್ಟ್ ಹೀಗೆ ಮಾಡಿ ಸಾಕು.

ವಿಚಾರ ಗೊತ್ತಾಗುತ್ತಿದ್ದ ಹಾಗೆಯೇ ಗ್ರಾಮದ ಜನರೆಲ್ಲರೂ ಬಂದು ಕೋತಿಯನ್ನು ನೋಡಿದ್ದಾರೆ. ಅವರಿಗು ಬೇಸರವಾಗಿ, ಕೋತಿಯನ್ನು ದೇವಸ್ಥಾದ ಬಲಭಾಗಕ್ಕೆ ಸಂಸ್ಕಾರ ಮಾಡಲಾಗಿದೆ. ಈ ದೇವಸ್ಥಾನಕ್ಕೆ 100 ವರ್ಷಗಳ ಇತಿಹಾಸ ಇದೆ. ಈ ದೇವಸ್ಥಾನದ ಜಾಗವನ್ನು ಕೊತ್ತೊಳ್ಳು ಮುನಯ್ಯ ಎನ್ನುವವರು ದಾನವಾಗಿ ನೀಡಿದ್ದರು. ಇವರು ಕಾಶಿಗೆ ಹೋಗಿ ವಾಪಸ್ ಬರಲಿಲ್ಲ (Bengaluru News). ಈಗ ದೇವಸ್ಥಾನದಲ್ಲಿ ರಾಮಕೃಷ್ಣಯ್ಯ ಅವರ ಕುಟುಂಬದವರೇ ಪೂಜೆ ಮಾಡುತ್ತಿದ್ದಾರೆ. ಇದನ್ನು ಓದಿ..News: ಮುಂದಿನ ತಿಂಗಳಿನಿಂದ ಹಣಕಾಸು ವಿಚಾರದಲ್ಲಿ ಏನೆಲ್ಲಾ ಬದಲಾವಣೆ ಆಗಬಹುದು ಗೊತ್ತೆ? ಇಲ್ಲಿದೆ ಸಂಪೂರ್ಣ ಡೀಟೇಲ್ಸ್.

Comments are closed.