Neer Dose Karnataka
Take a fresh look at your lifestyle.

Kannada News: ಮೊದಲ ಬಾರಿಗೆ ದರ್ಶನ್ ರವರು ಹತ್ತು ವರ್ಷಗಳು ಆದ ಮೇಲೆ ಸುದೀಪ್ ಹೆಸರು ತೆಗೆದುಕೊಂಡದ್ದು ಯಾಕೆ ಗೊತ್ತೇ??

Kannada News: ನಟ ದರ್ಶನ್ (Darshan) ಅವರೆಂದರೆ ಅಭಿಮಾನಿಗಳಿಗೆ ಬಹಳ ಕ್ರೇಜ್. ಅವರ ಬಗ್ಗೆ ಪ್ರತಿಯೊಂದು ವಿಚಾರವನ್ನು ಕೂಡ ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ. ಪ್ರಸ್ತುತ ದರ್ಶನ್ ಅವರು ಕ್ರಾಂತಿ (Kranthi) ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಹಲವು ವಿಚಾರಗಳನ್ನು ಕ್ರಾಂತಿ ಪ್ರಮೋಷನ್ ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ನಮಗೆಲ್ಲಾ ಗೊತ್ತಿರುವ ಹಾಗೆ ಕ್ರಾಂತಿ ಸಿನಿಮಾ ಕಥೆ ಇರುವುದು ಅಕ್ಷರ ಕ್ರಾಂತಿಯ ಬಗ್ಗೆ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಬಗ್ಗೆ ಕ್ರಾಂತಿ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

ಈ ಸಿನಿಮಾಗೆ ಮಾಧ್ಯಮಗಳಲ್ಲಿ ಪ್ರೊಮೋಷನ್ ಮಾಡದೆ ಇರುತ್ತಿರುವ ಕಾರಣ, ಡಿಬಾಸ್ ದರ್ಶನ್ ಅವರು ಯೂಟ್ಯೂಬ್ ಚಾನೆಲ್ ಗಳಿಗೆ ಕ್ರಾಂತಿ ಸಿನಿಮಾ ಬಗ್ಗೆ ಇಂಟರ್ವ್ಯೂ ಕೊಡುತ್ತಿದ್ದಾರೆ. ಅವುಗಳಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ ಡಿಬಾಸ್. ಹೀಗೆ ಕ್ರಾಂತಿ ಸಿನಿಮಾ ಇಂಟರ್ವ್ಯೂ ಸಮಯದಲ್ಲಿ ಮೊದಲ ಬಾರಿಗೆ ದರ್ಶನ್ ಅವರು ಸುದೀಪ್ (Sudeep) ಅವರ ಹೆಸರನ್ನು ತೆಗೆದುಕೊಂಡಿದ್ದಾರೆ. ಹಿಂದಿನ 10 ವರ್ಷಗಳಲ್ಲಿ ಒಮ್ಮೆ ಕೂಡ ದರ್ಶನ್ ಅವರು ಸುದೀಪ್ ಅವರ ಹೆಸರನ್ನು ಯಾವುದೇ ಕಾರಣಕ್ಕೂ ತೆಗೆದುಕೊಂಡಿರಲಿಲ್ಲ. ಇದೇ ಮೊದಲ ಸಾರಿ ಡಿಬಾಸ್ (Dboss) ಅವರು ಸುದೀಪ್ ಅವರ ಹೆಸರು ತೆಗೆದುಕೊಂಡಿರುವ ಹೇಳಿಕೆ ಈಗ ಎಲ್ಲೆಡೆ ವೈರಲ್ ಆಗಿದೆ. ಇದನ್ನು ಓದಿ.. Kannada News: ತನ್ನ ಸ್ವಂತ ತಂಗಿ ಮದುವೆಗೆ ಹೋಗದೆ ಇರುವುದಕ್ಕೆ ಕಾರಣ ಸಮೇತ ಹೇಳಿಕೆ ಕೊಟ್ಟ ಸಂಜನಾ: ಯಾಕೆ ಅಂತೇ ಗೊತ್ತೇ??

ದರ್ಶನ್ ಅವರಿಗೆ ಇಂಟರ್ವ್ಯೂನಲ್ಲಿ ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ 10 ವರ್ಷಗಳ ಸಮಯ ಪೂರೈಸಿರುವ ಬಗ್ಗೆ ಪ್ರಶ್ನೆ ಕೇಳಲಾಯಿತು, ಆಗ ದರ್ಶನ್ ಅವರು .. “ಒಬ್ಬ ನಾಯಕಿ ಚಿತ್ರರಂಗದಲ್ಲಿ 10 ವರ್ಷ ಪೂರೈಸುವುದು ಸುಲಭದ ಮಾತಲ್ಲ..ನಿಜಕ್ಕೂ ಇದು ದೊಡ್ಡ ವಿಷಯ. ರಚಿತಾ ರಾಮ್ (Rachita Ram) ದೊಡ್ಡ ದೊಡ್ಡ ನಟರ ಜೊತೆಗೆ ಸಿನಿಮಾ ಮಾಡಿದ್ದಾರೆ, ಅಪ್ಪು (Appu), ಸುದೀಪ್, ಶಿವಣ್ಣ (Shivanna) ಹೀಗೆ ಹಲವು ಕಲಾವಿದರ ಜೊತೆಗೆ ನಟಿಸಿದ್ದಾರೆ..” ಎಂದು ಹೇಳಿದ್ದಾರೆ ನಟ ದರ್ಶನ್. ಈ ಹೇಳಿಕೆ ಈಗ ವೈರಲ್ ಆಗುತ್ತಿದು, ಇವರಿಬ್ಬರು ಮತ್ತೆ ಒಂದಾಗಬೇಕು ಎನ್ನುವ ಆಸೆ ಅಭಿಮಾನಿಗಳಲ್ಲಿ ಮತ್ತೆ ಚಿಗುರೊಡೆದಿದೆ. ಇದನ್ನು ಓದಿ..Technology: ವಿಶ್ವದೆಲ್ಲೆಡೆ ಭಾರಿ ಸದ್ದು ಮಾಡಿದ ಗೂಗಲ್ ಪಿಕ್ಸೆಲ್ 6 A ಫೋನ್ ಅನ್ನು ಹತ್ತು ಸಾವಿರಕ್ಕೆ ಖರೀದಿ ಮಾಡುವುದು ಹೇಗೆ ಗೊತ್ತೇ??

Comments are closed.