Neer Dose Karnataka
Take a fresh look at your lifestyle.

ಇದೇ ತಿಂಗಳ ಕೊನೆಯಲ್ಲಿ ಶುಕ್ರನ ಸ್ಥಾನಪಲ್ಲಟದಿಂದಾಗಿ ಈ 4 ರಾಶಿಯವರಿಗೆ ಪ್ರಾರಂಭವಾಗಲಿದೆ ಲಕ್ಷ್ಮೀದೇವಿಯ ಮಹಾ ಕೃಪಾಕಟಾಕ್ಷ, ಯಾವ್ಯಾವು ಗೊತ್ತೇ??

ನಮಸ್ಕಾರ ಸ್ನೇಹಿತರೇ ಪ್ರತಿಯೊಂದು ವಿಚಾರದಲ್ಲಿ ಕೂಡ ನಾವು ಜ್ಯೋತಿಷ್ಯ ಶಾಸ್ತ್ರವನ್ನು ಅನುಸರಿಸುತ್ತೇವೆ. ಇಲ್ಲಿ ಉಲ್ಲೇಖಿತ ವಾಗಿರುವಂತಹ ಹಲವಾರು ಅಂಶಗಳು ಹಾಗೂ ಆಚಾರ-ವಿಚಾರಗಳು ಎನ್ನುವುದು ನಿಜ ಜೀವನದಲ್ಲಿ ಕೂಡ ಕೆಲವೊಮ್ಮೆ ಸತ್ಯವಾಗಿ ಇರುವುದನ್ನು ನಾವು ಗಮನಿಸಿರುತ್ತೇವೆ. ಇಂದು ನಾವು ಹೇಳಲು ಹೊರಟಿರುವುದು ಕೂಡ ಅದೇ ಮಾದರಿಯ ವಿಚಾರದ ಕುರಿತಂತೆ.

ಭೋಗ ವಿಲಾಸ ಸುಖ-ಸಂಪತ್ತು ಗಳ ಒಡೆಯನಾಗಿರುವ ಶುಕ್ರ ಗ್ರಹ ಮಾರ್ಗಿ ಅವಸ್ಥೆಯಲ್ಲಿ ಹೋಗುತ್ತಿರುವುದರಿಂದಾಗಿ ಕೆಲವೊಂದು ರಾಶಿಯವರಿಗೆ ಲಕ್ಷ್ಮೀದೇವಿಯ ಕೃಪೆಯಿಂದಾಗಿ ಲಾಭ ಉಂಟಾಗಲಿದೆ. ಇದು ನಡೆಯುತ್ತಿರುವುದು ಇದೇ ಜನವರಿ 29ರಿಂದ. ಹೀಗಾಗಿ ಈ ಸಂದರ್ಭದಲ್ಲಿ ಈ ಪ್ರಕ್ರಿಯೆಯಿಂದಾಗಿ ಲಾಭವನ್ನು ಪಡೆಯುತ್ತಿರುವ ನಾಲ್ಕು ರಾಶಿಯವರು ಯಾರು ಎಂದು ತಿಳಿಯೋಣ ಬನ್ನಿ. ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದುವುದನ್ನು ಮಾತ್ರ ಮರೆಯಬೇಡಿ.

ಮಿಥುನ ರಾಶಿ; ಈ ಸಂದರ್ಭದಲ್ಲಿ ಮಿಥುನ ರಾಶಿಯವರಿಗೆ ಸಮಾಜದಲ್ಲಿ ಸನ್ಮಾನ ಹಾಗೂ ಗೌರವಗಳು ಹೆಚ್ಚಾಗಲಿವೆ. ಸಂಗಾತಿಯೊಂದಿಗೆ ಸಂಬಂಧ ಎನ್ನುವುದು ವೃದ್ಧಿಯಾಗಲಿದೆ. ಕುಟುಂಬದೊಂದಿಗೆ ಉನ್ನತ ಸಮಯಗಳನ್ನು ಕಳೆಯಲಿದ್ದೀರಿ. ಈ ಸಂದರ್ಭದಲ್ಲಿ ಸಮಸ್ಯೆಗಳಿಂದ ಕೂಡ ಪರಿಹಾರ ದೊರಕಲಿದೆ. ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗಲಿದ್ದು ಕೆಲಸದಲ್ಲಿ ಪ್ರಗತಿಯನ್ನು ಸಾಧಿಸುವಂತಹ ಅವಕಾಶ ದೊರೆಯಲಿದೆ.

ಸಿಂಹ ರಾಶಿ; ಈ ಸಂದರ್ಭದಲ್ಲಿ ನೀವು ಭೂಮಿ ಅಥವಾ ವಾಹನವನ್ನು ಖರೀದಿಸಬಹುದಾದಂತಹ ಯೋಗವಿದೆ. ಜಮೀನಿನ ಮೇಲೆ ಬಂಡವಾಳ ಹೂಡಿಕೆ ಅನ್ನುವುದು ನಿಮಗೆ ಲಾಭವನ್ನು ತರಲಿದೆ. ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೀರಿ. ಸಂಗಾತಿಯ ಸಲಹೆಯಿಂದಾಗಿ ಧನ ಲಾಭವನ್ನು ಹೊಂದಲಿದ್ದೀರಿ. ವೈವಾಹಿಕ ಜೀವನ ಎನ್ನುವುದು ಸಾಕಷ್ಟು ಸುಖಮಯವಾಗಲಿದೆ.

ಕನ್ಯಾ ರಾಶಿ; ಈ ಪ್ರಕ್ರಿಯೆಯಿಂದಾಗಿ ನಿಮ್ಮ ಜೀವನದಲ್ಲಿ ಸುಖ ಶಾಂತಿ ಎನ್ನುವುದು ಮರುಕಳಿಸಲಿದೆ. ಈ ಸಂದರ್ಭದಲ್ಲಿ ನಿಮ್ಮ ಸಹೋದರ ಹಾಗೂ ಸಹೋದರಿಯರ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಲಿದ್ದು ಕಷ್ಟಗಳನ್ನು ನೀವು ಎದುರಿಸುವಂತಹ ಆತ್ಮವಿಶ್ವಾಸ ನಿಮ್ಮಲ್ಲಿ ಬೆಳೆಯಲಿದೆ. ಹಣದ ಸಂಬಂಧಿತ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಲಿದ್ದು ಕುಟುಂಬದವರೊಂದಿಗೆ ಉತ್ತಮ ಸಮಯಗಳನ್ನು ಕಳೆಯುವಂತಹ ಅವಕಾಶ ದೊರೆಯಲಿದೆ. ಸರ್ಕಾರಿ ಸಂಬಂಧಿತ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರುತ್ತಿರುವರಿಗೆ ಅತಿಶೀಘ್ರದಲ್ಲಿ ಶುಭಸಮಾಚಾರ ಕೇಳಿಬರಲಿದೆ.

ಧನು ರಾಶಿ; ರಹಸ್ಯಮಯ ಶತ್ರುವಿನಿಂದ ನೀವು ಈ ಸಂದರ್ಭದಲ್ಲಿ ಮುಕ್ತಿಯನ್ನು ಹೊಂದಲಿದ್ದೀರಿ. ಕೆಲಸದಲ್ಲಿ ಸಫಲತೆಯನ್ನು ಪಡೆಯಲು ನೀವು ಸಾಕಷ್ಟು ಪರಿಶ್ರಮವನ್ನು ಪಡಬೇಕಾಗುತ್ತದೆ. ಇದರಿಂದ ನೀವು ದೊಡ್ಡಮಟ್ಟದ ಲಾಭವನ್ನು ಪಡೆಯಲಿದ್ದೀರಿ. ಎಲ್ಲಾ ಕೆಲಸದಲ್ಲೂ ಹಾಗೂ ಜೀವನದ ಪ್ರಮುಖ ಘಟ್ಟಗಳಲ್ಲಿ ನಿಮ್ಮ ಸಂಗಾತಿ ಹಾಗೂ ಪರಿವಾರದವರ ಬೆಂಬಲ ನಿಮ್ಮ ಮೇಲೆ ಇರಲಿದೆ. ಪರಿಶ್ರಮ ಎನ್ನುವುದು ಎಲ್ಲಾ ಕ್ಷೇತ್ರಗಳಲ್ಲಿಯೂ ಬೇಕು ಆದರೆ ಸಫಲತೆ ಎನ್ನುವುದು ನಿಮ್ಮನ್ನು ಆದಷ್ಟು ಬೇಗ ಹುಡುಕಿಕೊಂಡು ಬರಲಿದೆ. ಇವರೇ ಆ ಅದೃಷ್ಟ 4 ರಾಶಿಗಳು. ನಿಮ್ಮ ರಾಶಿ ಕೂಡ ಈ ರಾಶಿಯಲ್ಲಿ ಶಾಮೀಲಾಗಿದ್ದರೆ ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ. ಇಲ್ಲದಿದ್ದರೂ ಪರಿಶ್ರಮವನ್ನು ಕೈಬಿಡಬೇಡಿ ಒಂದಲ್ಲ ಒಂದು ದಿನ ಖಂಡಿತವಾಗಿಯೂ ದೇವರು ನಿಮಗೆ ನಿಮ್ಮ ಪರಿಶ್ರಮಕ್ಕೆ ತಕ್ಕಂತಹ ಫಲವನ್ನು ನೀಡೇ ನೀಡುತ್ತಾನೆ.

Comments are closed.