Neer Dose Karnataka
Take a fresh look at your lifestyle.

ವಿಚ್ಚೇದನ ಪಡೆದ ಮೇಲೆ ಮಾಜಿ ಮಾವನ ಕೆಲಸದ ಮೇಲೆಯೇ ಕಣ್ಣಿಟ್ಟ ಸಮಂತಾ. ಮತ್ತೊಂದು ನಿರ್ಧಾರದ ಮೂಲಕ ಸದ್ದು ಮಾಡುವರೇ ಸಮಂತಾ. ಏನು ಗೊತ್ತೇ?

ನಟಿ ಸಮಂತಾ ರುತ್ ಪ್ರಭು ಅವರು ಪತಿಗೆ ವಿಚ್ಛೇದನ ನೀಡಿದ ಬಳಿಕ ಅವರಿಗೆ ಇರುವ ಬೇಡಿಕೆ ಮತ್ತು ಸಿಗುತ್ತಿರುವ ಅವಕಾಶಗಳು ಎಲ್ಲವೂ ಸಹ ಹೆಚ್ಚಾಗಿದೆ. ಸಮಂತಾ ಅವರು ಹೆಚ್ಚಾಗಿ ತಮ್ಮ ಕೆರಿಯರ್ ಕಡೆಗೆ ಗಮನ ಹರಿಸುತ್ತಿದ್ದು, ಸಕ್ಸಸ್ ಪಡೆಯುತ್ತಿದ್ದಾರೆ. ವಿಚ್ಛೇದನದ ಬಳಿಕ ಅವರಿಗೆ ಸಾಕಷ್ಟು ಅವಾರ್ಡ್ ಗಳು ಸಹ ಸಿಕ್ಕಿವೆ. ಸಧ್ಯಕ್ಕೆ ವಿಜಯ್ ದೇವರಕೊಂಡ ಅವರ ಜೊತೆಗಿನ ಖುಷಿ ಸಿನಿಮಾದ ಮೊದಲ ಶೆಡ್ಯೂಲ್ ಚಿತ್ರೀಕರಣ ಮುಗಿಸಿದ್ದು, ಯೋಶೋಧ ಸಿನಿಮಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಸಮಂತಾ ಬಗ್ಗೆ ಹೊಸದೊಂದು ಸುದ್ದಿ ಕೇಳಿ ಬರುತ್ತಿದೆ..

ನಾವೆಲ್ಲರು ನೋಡಿರುವ ಹಾಗೆ ಬಿಗ್ ಬಾಸ್ ಕಾರ್ಯಕ್ರಮ ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲು ಸಹ ಬಹಳ ಫೇಮಸ್ ಆಗಿದೆ. ಅದರಲ್ಲೂ ತೆಲುಗಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಆಗಾಗ ನಿರೂಪಕರು ಬದಲಾಗುತ್ತಾರೆ. ಮೊದಲಿಗೆ ಜ್ಯೂನಿಯರ್ ಎನ್.ಟಿ.ಆರ್ ಅವರು ನಿರೂಪಣೆ ಮಾಡುತ್ತಿದ್ದರು, ನಂತರ ನಾನಿ ಅವರು ನಿರೂಪಣೆ ಮಾಡುತ್ತಿದ್ದರು, ಪ್ರಸ್ತುತ ಕಳೆದ ಸೀಸನ್ ವರೆಗೂ ನಾಗಾರ್ಜುನ ಅವರೇ ಕಾರ್ಯಕ್ರಮ ನಿರೂಪಣೆ ಮಾಡುತ್ತಿದ್ದರು. ಇಲ್ಲಿಯವರೆಗೂ 5 ಸೀಸನ್ ಮುಗಿದಿದ್ದು, 6ನೇ ಸೀಸನ್ ಶುರುವಾಗಲಿದೆ. ಈ ಸಮಯದಲ್ಲಿ ಬಿಗ್ ಬಾಸ್ ತೆಲುಗು ಸೀಸನ್ 6ರನ್ನು ಸಮಂತಾ ಅವರು ನಿರೂಪಣೆ ಮಾಡಲಿದ್ದಾರೆ ಎನ್ನುವ ಸುದ್ದಿಯೊಂದು ಕೇಳಿ ಬಂದಿದೆ.

ಆದರೆ ಈಗಾಗಲೇ ನಾಗಾರ್ಜುನ ಅವರು ಇರುವ ಪ್ರೋಮೋ ಬಿಡುಗಡೆ ಆಗಿದ್ದು, ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದಾರೆ ಎನ್ನುವುದು ಖಚಿತವಾಗಿದೆ. ಆದರೂ ಸಮಂತಾ ನಿರೂಪಣೆ ಮಾಡುತ್ತಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿದೆ. ಈ ಹಿಂದೆ ನಾಗಾರ್ಜುನ ಅವರು ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾಗ, ಸಮಂತಾ ಅವರು ಹಾಗು ಇನ್ನಿತರ ಕಲಾವಿದರು ಬಂದು ಶೋ ನಡೆಸಿಕೊಟ್ಟಿದ್ದರು, ಈ ಸೀಸನ್ ನಲ್ಲೂ ಅದೇ ರೀತಿ ಆಗುತ್ತಾ ಎಂದು ಅಭಿಮಾನಿಗಳಲ್ಲಿ ಅನುಮಾನ ಮೂಡಿದೆ. ಸಮಂತಾ ಅವರಿಗೆ ಈಗ ಬೇಡಿಕೆ ಹೆಚ್ಚಾಗಿದ್ದು, ಬಿಗ್ ಬಾಸ್ ಶೋ ನಿರೂಪಣೆ ಮಾಡುವ ಅವಕಾಶ ಸಹ ಅವರಿಗೆ ಸಿಕ್ಕಿದೆಯೇ ಎಂದು ಆಶ್ಚರ್ಯವೂ ಆಗುತ್ತಿದೆ.

Comments are closed.