Neer Dose Karnataka
Take a fresh look at your lifestyle.

ನಿಮಗೆ ಶನಿ ದೇವನ ಅನುಗ್ರಹ ಬೇಕು ಎಂದರೆ, ಬಹಳ ಸುಲಭವಾಗಿ ಶನಿವಾದ ಇದನ್ನು ನೋಡಿ ಸಾಕು. ನಿಮ್ಮ ಜೀವನವೇ ಬದಲಾಗುತ್ತದೆ.

ಶನಿದೇವರನ್ನು ನ್ಯಾಯದ ದೇವರು ಎಂದು ಕರೆಯುತ್ತಾರೆ. ಶನಿದೇವರು ಮನುಷ್ಯರು ಮಾಡುವ ಒಳ್ಳೆಯ ಮತ್ತು ಕೆಟ್ಟ ಕೆಲಸಗಳನ್ನು ನೋಡಿ, ಅವರಿಗೆ ಫಲ ನೀಡುತ್ತಾನೆ. ಶನಿದೇವರನ್ನು ಮೆಚ್ಚಿಸಲು ಅನೇಕ ರೀತಿಯ ಕೆಲಸಗಳನ್ನು ಮಾಡುತ್ತಾರೆ. ಶನಿದೇವರ ಕೃಪೆ ಪಡೆಯಲು ಹೆಚ್ಚೇನೂ ಮಾಡಬೇಕಿಲ್ಲ, ಶನಿದೇವರಿಗಾಗಿ ಮೀಸಲಾಗಿರುವ ಶನಿವಾರದೊಂದು, ಇಂದು ನಾವು ತಿಳಿಸುವ ವಿಷಯಗಳಲ್ಲಿ ಒಂದನ್ನು ನೋಡಿ, ನೀವು ಶನಿದೇವರ ಕೃಪೆ ಪಡೆದು, ನಿಮ್ಮ ಕಷ್ಟಗಳಿಂದ ಮುಕ್ತಿ ಪಡೆಯಬಹುದು. ಅವುಗಳು ಏನು ಎಂದು ತಿಳಿಸುತ್ತೇವೆ ನೋಡಿ..

*ಶನಿವಾರದ ದಿನ ನಿಮ್ಮ ಮನೆಗೆ ಯಾರಾದರೂ ಭಿಕ್ಷುಕರು ಬಂದರೆ ಅದು ಒಳ್ಳೆಯ ಸಂಕೇತ. ಭಿಕ್ಷುಕರಿಗೆ ಅಂದು ಸಹಾಯ ಮಾಡಿ, ಅದರಿಂದ ಶನಿದೇವರಿಗೆ ಸಂತೋಷ ಆಗುತ್ತದೆ. ಇದರಿಂದ ಶನಿದೇವರ ಆಶೀರ್ವಾದ ನಿಮಗೆ ಸಿಗುತ್ತದೆ, ಎಲ್ಲಾ ಆಸೆಗಳನ್ನು ದೇವರು ಪೂರೈಸುತ್ತಾರೆ. ಅದೇ ರೀತಿ ಬಡವರು ಅಥವಾ ಭಿಕ್ಷುಕರನ್ನು ಓಡಿಸಿದರೆ ಶನಿದೇವರ ಕೋಪಕ್ಕೆ ಗುರಿಯಾಗುತ್ತೀರಿ.
*ಶನಿವಾರದ ದಿನ ಕಸ ಗುಡಿಸುವ ಕೆಲಸ ಮಾಡುವವರನ್ನು ನೋಡಿದರೆ ಒಳ್ಳೆಯದು ಎಂದು ಹೇಳುತ್ತಾರೆ. ಆ ರೀತಿ ಯಾರನ್ನಾದರು ನೋಡಿದರೆ, ಅವರಿಗೆ ಸ್ವಲ್ಪ ಹಣ ನೀಡಿ ಸಹಾಯ ಮಾಡಿ. ಅದರಿಂದ ನಿಮಗೆ ಒಳ್ಳೆಯದಾಗುತ್ತದೆ. ದೇವರ ಆಶೀರ್ವಾದ ಸಿಗುತ್ತದೆ.

*ಒಂದು ವೇಳೆ ನೀವು ಶನಿವಾರದಂದು ದೇವಸ್ಥಾನಕ್ಕೆ ಹೋದಾಗ, ಕಪ್ಪು ನಾಯಿ ಕಾಣಿಸಿಕೊಂಡರೆ, ಅದಕ್ಕೆ ಬ್ರೆಡ್ ತಿನ್ನಿಸಿ, ಇದರಿಂದಾಗಿ ಶನಿದೇವರಿಗೆ ಸಂತೋಷವಾಗುತ್ತದೆ ಹಾಗೂ ರಾಹು ಕೇತುಗೂ ಸಂತೋಷವಾಗುತ್ತಾರೆ. ಶನಿವಾರದಂದು ಕಪ್ಪು ನಾಯಿ ಕಾಣಿಸಿಕೊಳ್ಳುವುದು ಶುಭ ಎಂದು ಪರಿಗಣಿಸಲಾಗುತ್ತದೆ.
*ಶನಿವಾರದ ದಿನ ನಿಮಗೆ ಕಪ್ಪು ಕಾಗೆ ಕಾಣಿಸಿದರೆ ಮಂಗಳಕರ ಎಂದು ಪರಿಗಣಿಸಲಾಗಿದೆ. ಶನಿವಾರದಂದು ಮ್ಮ ಮನೆಯ ಬಳಿ ಕಪ್ಪು ಕಾಗೆ ಬಂದು ಕೂತರೆ ಒಳ್ಳೆಯದು ಎನ್ನುತ್ತಾರೆ.
*ಶನಿವಾರದ ದಿನ ದೇವಸ್ಥಾನಕ್ಕೆ ಹೋಗುವಾಗ ಕಪ್ಪು ಹಸು ಕಾಣಿಸಿಕೊಂಡರೆ, ನಿಮ್ಮ ಕೆಲಸದಲ್ಲಿ ಖಂಡಿತವಾಗಿ ಯಶಸ್ಸು ಪಡೆಯುತ್ತೀರಿ. ನಿಮ್ಮ ಮನೆಗೆ ಕಪ್ಪು ಹಸುವಿನ ಆಗಮನವಾದರು ಸಹ, ಒಳ್ಳೆಯದು ಎಂದು ಹೇಳುತ್ತಾರೆ.

Comments are closed.