Neer Dose Karnataka
Take a fresh look at your lifestyle.

ಒಬ್ಬರಿಗೆ ಕೊಟ್ಟರೆ ಮತ್ತೊಬ್ಬರಿಗೆ ಕೋಪ, ಅದಕ್ಕಾಗಿ ಸೋನು ಹಾಗೂ ಜಯಶ್ರೀಗೆ ಒಟ್ಟೊಟ್ಟಿಗೆ ಮುತ್ತು ಕೊಟ್ಟ ರಾಕೇಶ್ ಅಡಿಗ. ಏನ್ ಅದೃಷ್ಟ ಗುರು ಎಂದ ಪಡ್ಡೆ ಹುಡುಗ್ರು.

ಬಿಗ್ ಬಾಸ್ ಮನೆಯಲ್ಲಿ ಎಲ್ಲರ ಮೆಚ್ಚುಗೆ ಪಡೆದಿರುವ ಸ್ಪರ್ಧಿಗಳಲ್ಲಿ ಒಬ್ಬರು ರಾಕೇಶ್ ಅಡಿಗ. ಬಹಳ ಕಂಟ್ರೋಲ್ಡ್ ಆಗಿ, ಕಂಪೋಸ್ಡ್ ಆಗಿರುವ ಸ್ಪರ್ಧಿ ರಾಕೇಶ್. ಇವರು ಕೋಪ ಮಾಡಿಕೊಳ್ಳುವುದೇ ಬಹಳ ಕಡಿಮೆ, ಎಲ್ಲರ ಜೊತೆಗೆ ಚೆನ್ನಾಗಿ ಮಾತನಾಡಿಕೊಂಡಿದ್ದಾರೆ, ಆದರೆ ಯಾರ ಜೊತೆಗೂ ಜಗಳಕ್ಕೆ ಹೋಗದೆ ಇರುತ್ತಾರೆ. ಯಾವುದೇ ಪರಿಸ್ಥಿತಿ ಇದ್ದರು ತಮ್ಮದೇ ಶೈಲಿಯಲ್ಲಿ ಕೂಲ್ ಆಗಿ ಹ್ಯಾಂಡಲ್ ಮಾಡುತ್ತಾರೆ. ಇದರ ಬಗ್ಗೆ ಮನೆಯೊಳಗೆ ಕೂಡ ಚರ್ಚೆ ನಡೆದಿದ್ದು, ಪ್ರತಿದಿನ ಧ್ಯಾನ ಮಾಡುವ ಕಾರಣದಿಂದ ರಾಕೇಶ್ ತಮ್ಮನ್ನು ತಾವು ಕಂಟ್ರೋಲ್ ಮಾಡಿಕೊಳ್ಳುತ್ತಾರೆ ಎಂದು ಸಹ ಹೇಳುತ್ತಾರೆ. ಇದೀಗ ರಾಕೇಶ್ ಅವರು ಮಾಡಿರುವ ಅದೊಂದು ಕೆಲಸ ವೈರಲ್ ಆಗುತ್ತಿದೆ.

ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಅವರಿಗೆ ಸೋನು ಗೌಡ ಅವರ ಜೊತೆಗೆ ಒಳ್ಳೆಯ ಬಾಂಡಿಂಗ್ ಇದೆ ಎನ್ನುವುದು ಗೊತ್ತಿರುವ ವಿಚಾರ. ಸೋನು ಸಹ ರಾಕೇಶ್ ಅವರೊಡನೆ ಬಹಳ ಕ್ಲೋಸ್ ಆಗಿರೋದಕ್ಕೆ ಇಷ್ಟಪಡುತ್ತಾರೆ. ಮೊನ್ನೆಯ ಸಂಚಿಕೆಯಲ್ಲಿ ಸೋನು ಬೆಡ್ ಮೇಲೆ ರಾಕೇಶ್ ಹಾಗೂ ಸೋನು ಇಬ್ಬರು ಕುಳಿತು ಮಾತನಾಡುತ್ತಾ ಇರುತ್ತಾರೆ, ಆಗ ಸೋನು, ತನಗೆ ಒಂದು ಮುತ್ತು ಕೊಡಬೇಕೆಂದು ರಾಕೇಶ್ ಅವರಿಗೆ ಕೇಳಿಕೊಳ್ಳುತ್ತಾರೆ, ಆಗ ಒಂದು ಕ್ಷಣವೂ ಯೋಚಿಸದೆ ರಾಕೇಶ್ ಅವರು ಸೋನು ಗೆ ಮುತ್ತು ಕೊಡುತ್ತಾರೆ. ಅದನ್ನು ಜಯಶ್ರೀ ತಮ್ಮ ಬೆಡ್ ಇಂದ ನೋಡುತ್ತಾರೆ. ನಂತರ ಜಯಶ್ರೀ ಸೋನು ಗೌಡ ಪೊಸೆಸಿವ್ ನೆಸ್ ಬಗ್ಗೆ ಮಾತನಾಡಲು ಶುರು ಮಾಡುತ್ತಾರೆ.

ನನಗೂ ಮುತ್ತು ಕೊಡು ರಾಕೇಶ್, ಸೋನು ಪೊಸೆಸಿವ್ ಅಗೋದನ್ನ ನೋಡಬೇಕು ಎಂದು ಹೇಳುತ್ತಾರೆ. ಆಗ ರಾಕೇಶ್, ಜಯಶ್ರೀ ಅವರ ಬೆಡ್ ಬಳಿ ಹೋಗಿ ಆಕೆಗೂ ಮುತ್ತು ಕೊಡುತ್ತಾರೆ. ಸೋನು ಗೌಡ ಆ ಸಮಯಕ್ಕೆ ಉರಿಕೊಂಡಿದ್ದು ನಿಜ, ಅದು ಅವರ ಮುಖ ಭಾವದಲ್ಲೇ ಗೊತ್ತಾಗಿ, ರಾಕೇಶ್ ಮತ್ತು ಜಯಶ್ರೀ ಇಬ್ಬರು ಕೂಡ ನಗೋದಕ್ಕೆ ಶುರು ಮಾಡುತ್ತಾರೆ. ಸೋನು ಮೇಲೆ ತಮಾಷೆ ಮಾಡುತ್ತಾರೆ. ಒಟ್ಟಿನಲ್ಲಿ ಈ ಘಟನೆ ನೋಡುಗರಿಗೆ ನಗು ತರಿಸುವುದರ ಜೊತೆಗೆ ಅಚ್ಚರಿಯನ್ನು ಸಹ ಮೂಡಿಸಿತು. ಅದರಲ್ಲೂ ಸೋಷಿಯಲ್ ಮೀಡಿಯಾದಲ್ಲಿ ಪಡ್ಡೆ ಹುಡುಗರು, ಇದೆಂಥ ಅದೃಷ್ಟ ರಾಕೇಶ್ ಅವರದ್ದು ಎನ್ನುತ್ತಿದ್ದಾರೆ.

Comments are closed.