Neer Dose Karnataka
Take a fresh look at your lifestyle.

ಕ್ರಾಂತಿ ಸಿನೆಮಾದ ಪ್ರಮೋಷನ್ ಗಾಗಿ ಬಂಗಾಳಿ ಹುಡುಗನೊಬ್ಬ ಏನು ಮಾಡಿದ್ದಾನೆ ಗೊತ್ತೇ?? ಈತನೇ ಆಸೆ ಏನು ಅಂತೇ ಗೊತ್ತೇ?? ಇದು ಡಿ ಬಾಸ್ ತಾಕತ್ತು.

ನಟ ದರ್ಶನ್ ಅವರಿಗೆ ಇರುವ ಅಭಿಮಾನಿ ಬಳಗ ಎಂಥದ್ದು ಎಂದು ಎಲ್ಲರಿಗು ಗೊತ್ತಿದೆ. ಕರ್ನಾಟಕದಲ್ಲಿ ಅವರಿಗೆ ಮಾಸ್ ಫ್ಯಾನ್ ಫಾಲೋಯಿಂಗ್ ಮಾತ್ರವಲ್ಲ, ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿ ಸಹ ದರ್ಶನ್ ಅವರಿಗೆ ಅಭಿಮಾನಿಗಳಿದ್ದಾರೆ. ಇನ್ನೇನು ದರ್ಶನ್ ಅವರು ನಟಿಸಿರುವ ಕ್ರಾಂತಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ, ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇತ್ತ ದರ್ಶನ್ ಅವರ ಅಭಿಮಾನಿಗಳು ಸಿನಿಮಾ ಪ್ರೂಮೋಷನ್ ಅನ್ನು ಜೋರಾಗಿಯೇ ಮಾಡುತ್ತಿದ್ದಾರೆ. ಈ ನಡುವೆ ದರ್ಶನ್ ಅವರ ಬೆಂಗಾಲಿ ಅಭಿಮಾನಿ ತಮ್ಮ ಮೆಚ್ಚಿನ ನಟನಿಗಾಗಿ ಏನು ಮಾಡಿದ್ದಾನೆ ಗೊತ್ತಾ?

ಬೇರೆ ರಾಜ್ಯಗಳಿಂದ ಬೆಂಗಳೂರಿಗೆ ಬಂದು ಜೀವನ ಕಟ್ಟಿಕೊಳ್ಳುವ ಸಾಕಷ್ಟು ಜನರಿದ್ದಾರೆ. ಹೊರರಾಜ್ಯಗಳಿಂದ ಬಂದು ಕನ್ನಡ ಕಲಿಯದೆ, ಹಿಂದಿ ಇಂಗ್ಲಿಷ್ ನಲ್ಲಿ ಮಾತನಾಡುವುದೇ ಹೆಚ್ಚು, ಕನ್ನಡ್ ಗೊತ್ತಿಲ್ಲ ಎಂದು ಹೇಳುವವರೆ ಹೆಚ್ಚು, ಆದರೆ ಅಂತಹವರ ನಡುವೆ ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಇಂದ 13 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು, ಕನ್ನಡ ಕಲಿತು, ಕನ್ನಡದಲ್ಲೇ ವ್ಯವಹಾರ ಮಾಡುತ್ತಾರೆ. ಅಷ್ಟೇ ಅಲ್ಲದೆ ಇವರು ಕನ್ನಡ ಸಿನಿಮಾಗಳನ್ನು ನೋಡುತ್ತಾರೆ, ನಟ ದರ್ಶನ್ ಅವರ ಅಪ್ಪಟ ಅಭಿಮಾನಿ ಆಗಿದ್ದಾರೆ ವಿವೇಕ್. ಇದೀಗ ತಮ್ಮ ಮೆಚ್ಚಿನ ನಟನ ಸಿನಿಮಾ ಹೆಸರಿನಲ್ಲಿ ಕೆಫೆ ಸಹ ಶುರು ಮಾಡಿದ್ದಾರೆ. ಕ್ರಾಂತಿ ಕೆಫೆ ಎಂದು ಹೆಸರು ಇಟ್ಟಿದ್ದಾರೆ ವಿವೇಕ್. ಬೆಂಗಳೂರಿನ ಅಂಬೇಡ್ಕರ್ ಕಾಲೇಜ್ ಬಳಿ ಕ್ರಾಂತಿ ಕೆಫೆ ಶುರು ಮಾಡಿದ್ದಾರೆ.

ದರ್ಶನ್ ಅವರ ಮೇಲಿನ ಅಭಿಮಾನದ ಬಗ್ಗೆ ಮಾತನಾಡಿ, “ನಮ್ಮ ಡಿಬಾಸ್ ಸಿನಿಮಾ ಬರ್ತಾ ಇದೆ. ನಾನು ಸಿನಿಮಾ ನೋಡೋದಕ್ಕೆ ಕಾಯ್ತಾ ಇದ್ದೀನಿ. ನನ್ನ ಕೆಫೆಗೆ ಅವರ ಸಿನಿಮಾ ಹೆಸರು ಇಟ್ಟಿದ್ದೀನಿ, ಬ್ಯುಸಿನೆಸ್ ಚೆನ್ನಾಗಿ ಆಗ್ತಾ ಇದೆ. ಡಿಬಾಸ್ ಒಂಥರ ದೇವರಾಗಿದ್ದಾರೆ ನನಗೆ, ಅವರನ್ನ ಒಂದು ಸಾರಿ ನೋಡಿ ಮಾತಾಡಿಸದರೆ ಸಾಕು ಇನ್ನೇನು ಬೇಡ. ತುಂಬಾ ಜನ ದರ್ಶನ್ ಅವರ ಅಭಿಮಾನಿಗಳು ಕೆಫೆಗೆ ಬರ್ತಾರೆ. ಅಷ್ಟೇ ಸಾಕು. ಡಿಬಾಸ್ ನ ಭೇಟಿ ಮಾಡಿದರೆ ಸಾಕು, ಆದರೆ ಅವರಿಗೆ ಸಮಯ ಇರೋದಿಲ್ಲ ಅಂತ ಅರ್ಥ ಆಗುತ್ತೆ, ಅವರಿಗೆ ಲಕ್ಷಾಂತರ ಅಭಿಮಾನಿಗಳು ಇರ್ತಾರೆ..” ಎಂದು ಹೇಳಿದ್ದಾರೆ ವಿವೇಕ್. ಡಿಬಾಸ್ ಅಭಿಮಾನಿಗಳಿಂದ ಕ್ರಾಂತಿ ಸಿನಿಮಾ ಪ್ರೊಮೋಷನ್ ಇಷ್ಟರ ಮಟ್ಟಿಗೆ ನಡೆಯುತ್ತಿರುವುದು ನಿಜಕ್ಕೂ ಅಚ್ಚರಿಯ ವಿಚಾರ ಆಗಿದೆ.

Comments are closed.