Neer Dose Karnataka
Take a fresh look at your lifestyle.

ಕೊನೆ ಕ್ಷಣದಲ್ಲಿ ಕೈ ಕೊಟ್ಟ ಕಿಚ್ಚ ಸುದೀಪ್: ಹಣವೇ ಮುಖ್ಯವಾಯ್ತಾ ಎಂದ ಫ್ಯಾನ್ಸ್. ದಸರಾಗೆ ಸುದೀಪ್ ಕೈ ಕೊಟ್ಟದು ಯಾಕೆ ಗೊತ್ತೇ??

ಮೈಸೂರು ದಸರಾದ ವಿಶೇಷ ಕಾರ್ಯಕ್ರಮಗಳಲ್ಲಿ ಒಂದು ಯುವದಾಸರಾ. ಇದು ಯುವಪ್ರತಿಭೆಗಳು ಹಾಗೂ ಮೈಸೂರಿನ ಯುವ ಜನತೆಗಾಗಿ ನಡೆಸುವ ವಿಶೇಷವಾದ ಕಾರ್ಯಕ್ರಮ ಆಗಿದೆ. ಯುವದಸರಾ ಕಾರ್ಯಕ್ರಮದಲ್ಲಿ ಪ್ರತಿವರ್ಷ ತಾರಾ ಮೆರುಗು ಜೋರಾಗಿಯೇ ಇರುತ್ತದೆ. ಎರಡು ವರ್ಷಗಳ ಬಳಿಕ ಈ ವರ್ಷ ದಸರಾ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲು ಮೈಸೂರು ಸಿದ್ಧವಾಗಿದ್ದು, ಈ ಬಾರಿ ಯುವದಾಸರಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲು ಕಿಚ್ಚ ಸುದೀಪ್ ಅವರು ಬರುತ್ತಾರೆ ಎನ್ನಲಾಗಿತ್ತು.

ಆದರೆ ಕಿಚ್ಚ ಸುದೀಪ್ ಅವರು ಕೊನೆಯ ಕ್ಷಣದಲ್ಲಿ ಬರಲು ಆಗುವುದಿಲ್ಲ ಎಂದು ಹೇಳಿದ್ದಾರೆ ಎಂದು ನಗರದ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ. ಸುದೀಪ್ ಅವರ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದ್ದಾರೆ ಸೋಮಶೇಖರ್. ಸುದೀಪ್ ಅವರು ಕಾರ್ಯಕ್ರಮ ಉದ್ಘಾಟನಗೆ ಬರುತ್ತಾರೆ ಎಂದು ಎಲ್ಲಾ ಕಡೆ ಪ್ರಚಾರ ಮಾಡಲಾಗಿತ್ತು, ಆದರೆ ಈಗ ಬರಲು ಆಗುವುದಿಲ್ಲ ಎಂದು ಹೇಳಿರುವುದು ಅಯೋಜಕರಿಗೆ ಬಹಳ ಬೇಸರ ಆಗಿದ್ದು, ಈಗ ಬೇರೊಬ್ಬ ನಟನನ್ನು ಉದ್ಘಾಟಣೆಗೆ ಕರೆಸಲು ಪ್ರಯತ್ನ ಮಾಡಲಾಗುತ್ತಿದೆ. ಇದರಿಂದ ಜನರಿಗೂ ಸಹ ಬೇಸರವಾಗಿದೆ.

ಯುವದಾಸರಾ ಏಳು ದಿನಗಳ ಕಾಲ ನಡೆಯುವ ಕಾರ್ಯಕ್ರಮ ಆಗಿದ್ದು, ಸೆಪ್ಟೆಂಬರ್ 27ರಿಂದ ಆಕ್ಟೊಬರ್ 3ರ ವರೆಗೂ ನಡೆಯುತ್ತದೆ. ಉದ್ಘಾಟಣೆಗೆ ಬರುವ ಮೂಲಕ ಸುದೀಪ್ ಅವರು ತಾರಾ ಮೆರುಗನ್ನು ಹೆಚ್ಚಿಸುತ್ತಾರೆ ಎನ್ನಲಾಗಿತ್ತು, ಆದರೆ ಈಗ ಸುದೀಪ್ ಅವರು ಬರಲಾಗುವುದಿಲ್ಲ ಎಂದಿರುವುದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಬಿಗ್ ಬಾಸ್ ಶೋಗೆ ತಪ್ಪಿಸಿಕೊಳ್ಳದೆ ಹೋಗಲು ಆಗುತ್ತದೆ, ಯುವದಸರಾ ಕಾರ್ಯಕ್ರಮಕ್ಕೆ ಬರಲು ಆಗೋದಿಲ್ಲ, ನಿಮಗೆ ಹಣವೇ ಮುಖ್ಯ ಆಯಿತಾ ಎಂದು ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

Comments are closed.