Neer Dose Karnataka
Take a fresh look at your lifestyle.

ಬಿಗ್ ಬಾಸ್ ನಲ್ಲಿ ಮೊದಲ ಕೆಲವು ದಿನಗಳಲ್ಲಿಯೇ ಪ್ರೇಕ್ಷಕರ ಮನ ಗೆದ್ದು, ಗೆಲುವನ್ನು ಖಚಿತ ಪಡಿಸಿಕೊಂಡ ಸ್ಪರ್ಧಿ ಯಾರು ಗೊತ್ತೇ??

ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ 4 ದಿನಗಳು ಕಳೆದಿವೆ, ಮನೆಯೊಳಗೆ ಇರುವ 18 ಸ್ಪರ್ಧಿಗಳ ನಡುವೆ ಸ್ನೇಹ ಶುರುವಾಗುತ್ತದೆ, ಕೆಲವರಿಗೆ ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ, ಹೀಗೆ ಒಂದು ರೀತಿಯಲ್ಲಿ ಬಿಗ್ ಬಾಸ್ ಮನೆಯ ವಾಸ ಸಾಗುತ್ತಿದೆ. 9 ಜನ ನವೀನರು ಹಾಗೂ 9 ಜನ ಪ್ರವೀಣರ ನಡುವೆ ಪೈಪೋಟಿ ನಡೆಯುತ್ತಿದೆ. ಹೀಗಿರುವಾಗ, ಬಿಗ್ ಬಾಸ್ ಮನೆಗೆ ಕಾಲಿಟ್ಟ ಮೊದಲ ದಿನದಿಂದಲೇ ಗೆಲ್ಲುವುದು ಇವರೇ ಎನ್ನುವ ಹಾಗೆ ಒಬ್ಬ ಸ್ಪರ್ಧಿಯ ಮೇಲೆ ಭಾವನೆ ಮೂಡಿದೆ. ಆ ಸ್ಪರ್ಧಿ ಯಾರು ಗೊತ್ತಾ?

ತಮ್ಮ ಪ್ರತಿಭೆ ಇಂದ ಇಡೀ ಮನೆ ಮತ್ತು ಮನೆಯ ಹೊರಗೆ ವೀಕ್ಷಕರನ್ನು ಸಹ ನಕ್ಕು ನಗಿಸುತ್ತಾ ಇರುವ, ಬಹುಶಃ ಇವರೇ ಗೆಲ್ಲಬಹುದು ಎಂದು ಅನ್ನಿಸುವ ಹಾಗೆ ಮಾಡಿರುವ ಸ್ಪರ್ಧಿ ಮತ್ಯಾರು ಅಲ್ಲ, ಅರುಣ್ ಸಾಗರ್ ಅವರು. ಮೊದಲ ಸೀಸನ್ ನಲ್ಲಿ ಸ್ಪರ್ಧಿಸಿ ರನ್ನರ್ ಅಪ್ ಆಗಿದ್ದ ಅರುಣ್ ಸಾಗರ್ ಅವರು ಇದೀಗ ಮತ್ತೊಮ್ಮೆ ಸೀಸನ್ 9ರಲ್ಲಿ ಸ್ಪರ್ಧೆಗೆ ಇಳಿದಿದ್ದಾರೆ. ಇವರ ಬಗ್ಗೆ ಜನರಿಗೆ ಹೆಚ್ಚಿನ ಪರಿಚಯದ ಅಗತ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ನಟನಾಗಿ ಮತ್ತು ಕಲಾನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗಿಂತ ಹೆಚ್ಚಿನ ಮನರಂಜನೆ ನೀಡುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ..

ಎಲ್ಲಾ ಸ್ಪರ್ಧಿಗಳ ಜೊತೆಗು ಬೆರೆತು, ತಮಾಷೆ ಮಾಡುತ್ತಾ, ಎಲ್ಲರಿಗು ಪ್ರೋತ್ಸಾಹ ನೀಡುತ್ತಾ, ಹೊಸ ಹೊಸ ಹಾಡುಗಳನ್ನು ಹಾಡುತ್ತಾ, ಮಿಮಿಕ್ರಿ ಮಾಡುತ್ತಾ, ಮನರಂಜನೆ ನೀಡುತ್ತಾ ಇದ್ದಾರೆ ಅರುಣ್ ಸಾಗರ್. ಯಾವುದೇ ಸೀರಿಯಸ್ ವಿಷಯ ಆದರು ಅದನ್ನು ಸಾಮಾನ್ಯವಾಗಿ ಸುಲಭವಾಗಿ ಹೇಳುವ ಪ್ರತಿಭೆ ಅವರಿಗೆ ಇದೆ. ಹಾಗು ಲೀಡರ್ಶಿಪ್ ಕ್ವಾಲಿಟಿ ಸಹ ಅರುಣ್ ಸಾಗರ್ ಅವರಲ್ಲಿ ಉತ್ತಮವಾಗಿದೆ. ಈ ಕಾರಣಗಳಿಂದ ಅರುಣ್ ಸಾಗರ್ ಅವರೇ ಈ ಬಿಗ್ ಬಾಸ್ ಕನ್ನಡ ಸೀಸನ್ 9ರ ವಿನ್ನರ್ ಆಗಬಹುದು ಎನ್ನುವ ಅಭಿಪ್ರಾಯ ಮೂಡಿದ್ದು, ಇದರ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ.

Comments are closed.