Neer Dose Karnataka
Take a fresh look at your lifestyle.

ಭಾರತಕ್ಕೆ ಬರುತ್ತಿದ್ದಾನೆ ಖಡಕ್ ಆಟಗಾರ: ಈತನ ಎಂಟ್ರಿ ಇಂದನೆ ನಡುಗಿದ ಎದುರಾಳಿ ತಂಡಗಳು. ಭಾರತ ತಂಡ ಸೇರಿಕೊಳ್ಳುತ್ತಿರುವುದು ಯಾರು ಗೊತ್ತೇ??

ಟಿ20 ವಿಶ್ವಕಪ್ ನಲ್ಲಿ ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಪಾಕಿಸ್ತಾನ್ ವಿರುದ್ಧ ಆಡಲಿದೆ. ವಿಶ್ವಕಪ್ ನಲ್ಲಿ ಗೆಲುವಿನ ಮೂಲಕ ತಮ್ಮ ಅಭಿಯಾನ ಶುರು ಮಾಡಬೇಕು ಎಂದುಕೊಂಡಿದೆ ಭಾರತ ತಂಡ. ಈ ನಿಟ್ಟಿನಲ್ಲಿ ಪಾಕಿಸ್ತಾನ್ ವಿರುದ್ಧ ಗೆಲುವು ಸಾಧಿಸಲು ಭಾರತ ತಂಡ ಕೊನೆ ಕ್ಷಣದ ಅಭ್ಯಾಸ ನಡೆಸುತ್ತಿದೆ. ಈ ಸಮಯದಲ್ಲಿ ಭಾರತ ತಂಡಕ್ಕೆ ಒಂದು ಭರ್ಜರಿಯಾದ ಸಿಹಿ ಸುದ್ದಿ ಸಿಕ್ಕಿದೆ, ಅದೇನೆಂದರೆ, ಭಾರತ ತಂಡಕ್ಕೆ ಹಳೆಯ ಪವರ್ ಫುಲ್ ಆಟಗಾರ ವಾಪಸ್ ಬರುತ್ತಿದ್ದಾರೆ, ಅವರ ಸೂಚನೆ ಕೊಟ್ಟಿರುವ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಅಷ್ಟಕ್ಕೂ ಭಾರತ ತಂಡಕ್ಕೆ ವಾಪಸ್ ಬರುತ್ತಿರುವ ಸೂಚನೆ ನೀಡಿರುವ ಆಟಗಾರ ಮತ್ಯಾರು ಅಲ್ಲ, ರವೀಂದ್ರ ಜಡೇಜಾ ಅವರು. ಭಾರತ ತಂಡದ ಅದ್ಭುತವಾದ ಆಲ್ ರೌಂಡರ್ ಎನ್ನಿಸಿಕೊಂಡಿರುವ ರವೀಂದ್ರ ಜಡೇಜಾ ಅವರು, ಏಷ್ಯಾಕಪ್ ಸಮಯದಲ್ಲಿ ಇಂಜುರಿ ಆದ ಕಾರಣ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಹಾಗೆ ಆದ ಕಾರಣ ಜಡೇಜಾ ಅವರು ತಂಡದಿಂದ ಹೊರಗಿದ್ದರು, ಜೊತೆಗೆ, ಏಷ್ಯಾಕಪ್ ಹಾಗೂ ಅದರ ನಂತರ ನಡೆದ ಯಾವುದೇ ಪಂದ್ಯಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ವಿಶ್ವಕಪ್ ನಲ್ಲಿ ಜಡೇಜಾ ಅವರು ಇದ್ದರೆ ಬಹಳ ಸಹಕಾರಿಯಾಗುತ್ತದೆ ಎನ್ನುವ ಮಾತುಗಳು ಸಹ ಕೇಳಿಬಂದಿದ್ದವು.

ಆದರೆ ಜಡೇಜಾ ಅವರ ಬದಲಾಗಿ ಅಶ್ವಿನ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಯಿತು. ಆದರೆ ಇದೀಗ ಜಡೇಜಾ ಅವರು ಒಂದು ಗುಡ್ ನ್ಯೂಸ್ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ರನ್ನಿಂಗ್ ಮಾಡುತ್ತಿರುವ ವಿಡಿಯೋ ಒಂದನ್ನು ಶೇರ್ ಮಾಡಿದ್ದು, ಶಸ್ತ್ರಚಿಕಿತ್ಸೆಯ ನಂತರ ಎಂದು ಕ್ಯಾಪ್ಶನ್ ಬರೆದುಕೊಂಡಿದ್ದಾರೆ. ಪ್ರಸ್ತುತ ಜಡೇಜಾ ಅವರು ಬೆಂಗಳೂರಿನ ಎನ್.ಸಿ.ಎ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಟೀಮ್ ಇಂಡಿಯಾಗೆ ಶೀಘ್ರದಲ್ಲೇ ವಾಪಸ್ ಬರುವ ಸೂಚನೆ ನೀಡಿದ್ದಾರೆ. ರವೀಂದ್ರ ಜಡೇಜಾ ಅವರು ಎಂಥಹ ಪವರ್ ಫುಲ್ ಆಲ್ ರೌಂಡರ್ ಎಂದು ಎಲ್ಲರಿಗೂ ಗೊತ್ತಿದೆ, ಅವರು ವಾಪಸ್ ಬರುತ್ತಾರೆ ಎನ್ನುವ ಕಾರಣಕ್ಕೆ ಎದುರಾಳಿ ತಂಡಗಳು ಶೇಕ್ ಆಗಿರುವುದಂತೂ ಖಂಡಿತ.

Comments are closed.