Neer Dose Karnataka
Take a fresh look at your lifestyle.

ಬಿಗ್ ನ್ಯೂಸ್: ಬಿಗ್ ಬಾಸ್ ಮನೆಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಘಟನೆ: ಸಹ ಸ್ಪರ್ದಿ ಮೇಲೆ ಚಪ್ಪಲಿ ಎಸೆತ. ಏನಾಗಿದೆ ಗೊತ್ತೇ??

ಬಿಗ್ ನ್ಯೂಸ್: ಬಿಗ್ ಬಾಸ್ ಮನೆಯಲ್ಲಿ ಹಿಂಸಾಚಾರಕ್ಕೆ ತಿರುಗಿದ ಘಟನೆ: ಸಹ ಸ್ಪರ್ದಿ ಮೇಲೆ ಚಪ್ಪಲಿ ಎಸೆತ. ಏನಾಗಿದೆ ಗೊತ್ತೇ??

ಬಿಗ್ ಬಾಸ್ ಕಾರ್ಯಕ್ರಮ ಎಲ್ಲಾ ಭಾಷೆಯಲ್ಲಿ ಬರುತ್ತದೆ, ಹಿಂದಿ, ಕನ್ನಡ, ತಮಿಳು, ತೆಲುಗು ಭಾಷೆಯಲ್ಲಿ ನಡೆಯುತ್ತದೆ. ಹಿಂದಿಯಲ್ಲಿ 16ನೇ ಸೀಸನ್, ಕನ್ನಡದಲ್ಲಿ 9ನೇ ಸೀಸನ್, ತಮಿಳಿನಲ್ಲಿ 6ನೇ ಸೀಸನ್ ನಡೆಯುತ್ತಿದೆ.

ತಮಿಳು ಬಿಗ್ ಬಾಸ್ ಶೋ ಅನ್ನು ಖ್ಯಾತ ನಟ ಕಮಲ್ ಹಾಸನ್ ಅವರು ನಿರೂಪಣೆ ಮಾಡುತ್ತಾರೆ. ಈ ಶೋ ಶುರುವಾಗಿ ಎರಡು ವಾರ ಕಳೆಯುವುದರ ಒಳಗೆ ದೊಡ್ಡ ರಂಪಾಟ ನಡೆದಿದ್ದು, ಮನೆಯಲ್ಲಿದ್ದ ಸ್ಪರ್ಧಿಗಳಿಗೆ ಕಿರಿಕಿರಿ ಉಂಟಾಗಿ, ವೀಕ್ಷಕರು ಆ ಸ್ಪರ್ಧಿಯನ್ನು ಮನೆಯಿಂದ ಹೊರಹಾಕಿ ಎನ್ನುತ್ತಿದ್ದಾರೆ..

ತಮಿಳು ಬಿಗ್ ಬಾಸ್ ನಲ್ಲಿ ಜಗಳ ನಡೆದಿರುವುದು ಇಬ್ಬರು ಆಯೇಷಾ ಮತ್ತು ಅಜಿಂ ಎನ್ನುವ ಇಬ್ಬರು ಸ್ಪರ್ಧಿಗಳ ನಡುವೆ. ಅಜಿಂ ಎನ್ನುವವರ ನಟನಾಗಿದ್ದು ಹಲವು ಧಾರವಾಹಿಗಳಲ್ಲಿ ನಟಿಸಿದ್ದಾರೆ. ಮನೆಯಲ್ಲಿರುವ ಮತ್ತೊಬ್ಬ ಸ್ಪರ್ಧಿ ಆಯೇಷಾ ಎನ್ನುವವರು ಅಜಿಂ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಿದ್ದಾರೆ.

ಅಜಿಂ ಅವರು ಮನೆಯಲ್ಲಿರುವ ಬೇರೆ ಹೆಣ್ಣುಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದರು. ಯಾರು ಎಷ್ಟೇ ಹೇಳಿದರು, ಅದೇ ರೀತಿ ಮಾತನಾಡುತ್ತಿದ್ದರು. ಆಯೇಷಾ ಅವರು ಸಹ ಆ ರೀತಿ ಮಾತನಾಡಬೇಡಿ ಎಂದು ಹೇಳಿದರು ಸಹ ಅಜಿಂ ಕೇಳಲಿಲ್ಲ.
ಆಗ ಕೋಪಗೊಂಡ ಆಯೇಷಾ ಆತನ ಮೇಲೆ ಶೂ ಎಸೆಯುತ್ತಾರೆ.

ಮನೆಯ ಎಲ್ಲಾ ಸ್ಪರ್ಧಿಗಳು ಇವರಿಬ್ಬರನ್ನು ಸಮಾಧಾನ ಮಾಡಲು ಪ್ರಯತ್ನಪಟ್ಟರು ಸಹ, ಇಬ್ಬರು ಜಗಳದಲ್ಲಿ ಸಮಾಧಾನ ಆಗುವುದಿಲ್ಲ. ಹೊರಗಿನ ವೀಕ್ಷಕರು ಅಜಿಂ ಅವರನ್ನು ಎಲಿಮಿನೇಟ್ ಮಾಡಬೇಕು ಎಂದು ಕೇಳಿಕೊಂಡಿದ್ದರು.

ಹಾಗೂ ವೀಕೆಂಡ್ ಎಪಿಸೋಡ್ ನಲ್ಲಿ ಕೂಡ ಕಮಲ್ ಹಾಸನ್ ಅವರು ಏನು ಮಾತನಾಡುತ್ತಾರೆ ಎಂದು ಕುತೂಹಲ ವ್ಯಕ್ತಪಡಿಸಿದ್ದರು. ಅದೇ ರೀತಿ ಕಮಲ್ ಹಾಸನ್ ಅವರು ವೀಕೆಂಡ್ ಎಪಿಸೋಡ್ ನಲ್ಲಿ ಚೆನ್ನಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಅಜಿಂ ಅವರು ಕಮಲ್ ಹಾಸನ್ ಅವರ ಎದುರು, ಕೈಮುಗಿದು ಕ್ಷಮೆ ಕೇಳಿ, ನನಗೆ ಚಿಕ್ಕ ವಯಸ್ಸಿನಿಂದಲು ಬಹಳ ಕೋಪ ಎಂದಿದ್ದಾರೆ. ಆಗ ಕಮಲ್ ಹಾಸನ್ ಅವರು ಇನ್ನುಮುಂದೆ ಎಚ್ಚರಿಕೆಯಿಂದ ಇರಿ ಎಂದು ಹೇಳಿದ್ದಾರೆ.

Comments are closed.