Neer Dose Karnataka
Take a fresh look at your lifestyle.

ಜಗಳ ಆಡಿ ದೂರವಾಗಿದ್ದ ಸಾನ್ಯಾ ಬಿಗ್ ಬಾಸ್ ಮನೆಯಿಂದ ಹೊರ ಬಂದ ಕೂಡ ರೂಪೇಶ್ ಶೆಟ್ಟಿ ಬಗ್ಗೆ ಹೇಳಿದ್ದೇನು ಗೊತ್ತೇ?? ಶಾಕ್ ಆದ ನೆಟ್ಟಿಗರು.

ಬಿಗ್ ಬಾಸ್ ಕನ್ನಡ ಸೀಸನ್ 9ರಲ್ಲಿ ಈಗ 7ನೇ ವಾರ ನಡೆಯುತ್ತಿದೆ. ಪ್ರತಿ ವಾರ ಎಲಿಮಿನೇಶನ್ ನಡೆಯುತ್ತಿದ್ದು, ಕಳೆದ ವಾರ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದರು ಸಾನ್ಯಾ ಅಯ್ಯರ್. ಇವರು ಹೊರಬಂದಾಗ, ರೂಪೇಶ್ ಶೆಟ್ಟಿ ಅವರು ಸಿಕ್ಕಾಪಟ್ಟೆ ಅಳುತ್ತಿದ್ದರು, ಸಾನ್ಯಾ ಮತ್ತು ರೂಪೇಶ್ ಶೆಟ್ಟಿ ಇಬ್ಬರು ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಓಟಿಟಿ ಸೀಸನ್ ಇಂದ ಈ ಜೋಡಿ ಭಾರಿ ಸದ್ದು ಮಾಡಿತ್ತು. ಇಬ್ಬರು ಯವಾಗಲು ಜೊತೆಯಾಗಿ ಇರುತ್ತಿದ್ದರು. ಒಬ್ಬರ ಜೊತೆಗೆ ಮತ್ತೊಬ್ಬರು ಹೆಚ್ಚು ಸಮಯ ಕಳೆಯುತ್ತಿದ್ದರು.

ಆದರೆ ಈಗ ಸಾನ್ಯಾ ಎಲಿಮಿನೇಟ್ ಆಗಿದ್ದು, ರೂಪೇಶ್ ಶೆಟ್ಟಿ ಅವರಿಗೆ ನೋವಾಗಿ, ಸಾನ್ಯಾರನ್ನು ನೆನೆದು ಬಿಗ್ ಬಾಸ್ ಮನೆಯೊಳಗೆ ಕಣ್ಣೀರು ಹಾಕುತ್ತಿದ್ದಾರೆ. ರೂಪೇಶ್ ಶೆಟ್ಟಿ ಅವರು ಹಣೆಗೆ ಮಿಸ್ ಯೂ ಸಾನ್ಯಾ ಎಂದು ಬರೆದು ಅದನ್ನು ಪಟ್ಟಿಯಾಗಿ ಕಟ್ಟಿಕೊಂಡಿದ್ದರು. ಜೊತೆಗೆ ಅನುಪಮಾ ಗೌಡ ಅವರ ಜೊತೆಗೆ ಸಾನ್ಯಾ ಮನಸ್ಸು ಚೇಂಜ್ ಆದ್ರೆ ಅಂತ ತುಂಬಾ ಭಯ ಇದೆ ಎಂದು ಹೇಳಿದ್ದರು. ಸಾನ್ಯಾ ಅವರು ಎಲಿಮಿನೇಟ್ ಆಗುವ ಒಂದೆರಡು ದಿನಗಳ ಹಿಂದೆಯಷ್ಟೇ, ಜಗಳ ಸಹ ಆಡಿದ್ದರು. ಹಾಗಾಗಿ, ಇವರಿಬ್ಬರು ದೂರ ಆಗಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು.

ಬಿಗ್ ಬಾಸ್ ಮನೆಯಿಂದ ಸಾನ್ಯಾ ಅಯ್ಯರ್ ಅವರು ಹೊರಬಂದ ಬಳಿಕ, ಇದೇ ರೀತಿ ಪ್ರೀತಿ ಇರುತ್ತಾ ಎಂದು ಎಲ್ಲರಲ್ಲೂ ಪ್ರಶ ಇತ್ತು, ಆದರೆ ಈಗ ಸಾನ್ಯಾ ಅಯ್ಯರ್ ಈ ಎಲ್ಲಾ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ. ಸಾನ್ಯಾ ಅವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ, ಈ ಎಲ್ಲ ಪ್ರಶ್ನೆಗೂ ತೆರೆ ಎಳೆದಿದ್ದಾರೆ.
“ಬದಲಾಗಲು ಸಾಧ್ಯವೇ ಇಲ್ಲ roopieeeeeee. ಎಂದಿಗೂ ಆ ಮುದ್ದು ನಗುವಾಗಿ ನಿನ್ನಲ್ಲಿ ನಾನು. ಇದು ಅಂತರವಲ್ಲ ನಮ್ಮ ಮನಸ್ಸು ಇನ್ನು ಹತ್ತಿರ. ನಿನ್ನ ಶಕ್ತಿಯಾಗಲು ನಾನು ಯಾವಾಗಲೂ ಶ್ರಮಿಸುತ್ತೇನೆ ನನ್ನ ರಾಕ್‌ಸ್ಟಾರ್..” ಎಂದು ಬರೆದುಕೊಂಡಿದ್ದಾರೆ ಸಾನ್ಯಾ ಅಯ್ಯರ್. ಇದರಿಂದ ಸಾನ್ಯಾ ಅವರು ರೂಪೇಶ್ ಶೆಟ್ಟಿ ಅವರ ವಿಷಯದಲ್ಲಿ ಅಷ್ಟೇ ಪ್ರೀತಿಯಿಂದ ಇದ್ದಾರೆ ಎಂದು ಗೊತ್ತಾಗುತ್ತಿದೆ.

Comments are closed.