Neer Dose Karnataka
Take a fresh look at your lifestyle.

Cricket News: ಭಾರತ ಕ್ರಿಕೆಟ್ ತಂಡದಿಂದ ಈ ಕೂಡಲೇ ನಿವೃತ್ತಿ ಪಡೆದುಕೊಳ್ಳಬೇಕಾದ ಟಾಪ್ ಆಟಗಾರರು ಯಾರ್ಯಾರು ಗೊತ್ತೇ??

Cricket News: ಟಿ20 ವಿಶ್ವಕಪ್ (T20 World Cup) ನಲ್ಲಿ ಭಾರತ ತಂಡವು ಉತ್ತಮ ಪ್ರದರ್ಶನ ನೀಡಲಿಲ್ಲ. ಅದರಲ್ಲೂ ಸೆಮಿಫೈನಲ್ಸ್ ನಲ್ಲಿ ಬಹಳ ಕಳಪೆ ಪ್ರದರ್ಶನದಿಂದ ಭಾರತ ತಂಡ ಇಂಗ್ಲೆಂಡ್ ವಿರುದ್ಧ (India vs England) ಸೋತಿತು. ಇಂಗ್ಲೆಂಡ್ ತಂಡದ ಒಂದೇ ಒಂದು ವಿಕೆಟ್ ಕೂಡ ತೆಗೆದುಕೊಳ್ಳದೆ ಸೋತು ಹೋಯಿತು. ಈ ಟೂರ್ನಿಯಲ್ಲಿ ಭಾರತ ತಂಡದ ಹಿರಿಯ ಆಟಗಾರರು ಉತ್ತಮ ಪ್ರದರ್ಶನ ನೀಡದ ಕಾರಣ ಮೂವರು ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohit Sharma), ದಿನೇಶ್ ಕಾರ್ತಿಕ್ (Dinesh Karthik) ಮತ್ತು ರವಿಚಂದ್ರನ್ ಅಶ್ವಿನ್ (Ravichandran Ashwin) ಮೂವರು ಕೂಡ ರಿಟೈರ್ ಆಗಬಹುದು ಎನ್ನಲಾಗುತ್ತಿದೆ.

ಈ ಮೂವರು ಕೂಡ ಉತ್ತಮ ಸ್ಥಿರ ಪ್ರದರ್ಶನ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಈ ಮೂವರು ರಿಟೈರ್ ಆಗಬಹುದು ಎನ್ನಲಾಗುತ್ತಿದೆ. ಇದೀಗ ಇಂಗ್ಲಿಷ್ ಸ್ಪಿನ್ನರ್ ಮಾಂಟಿ ಪನೆಸರ್ (Monty Panesar) ಅವರು ಕೂಡ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, “ಭಾರತ ತಂಡ (Team India) ಎಲ್ಲರನ್ನು ನಿರಾಶೆಗೊಳಿಸಿತು, ಮುಂದಿನ ದಿನಗಳಲ್ಲಿ ಕೆಲವು ಆಟಗಾರರು ರಿಟೈರ್ಮೆಂಟ್ ತೆಗೆದುಕೊಳ್ಳುತ್ತಾರೆ ಎಂದು ಅನ್ನಿಸುತ್ತಿದೆ. ಪ್ರಾಮಾಣಿಕವಾಗಿ ಹೇಳುವುದಾದರೆ, ಭಾರತ ತಂಡ ಸೆಮಿಫೈನಲ್ಸ್ ನಲ್ಲಿ ಒಳ್ಳೆಯ ಪ್ರದರ್ಶನ ನೀಡಲಿಲ್ಲ, ಅದು ಒನ್ ಸೈಡೆಡ್ ಗೇಮ್ ಆಗಿತ್ತು. ಬಟ್ಲರ್ (Jos Buttler) ಮತ್ತು ಹೇಲ್ಸ್ (Alex Hales) ನಡುವೆ ಭಾರತ ತಂಡದ ಬೌಲರ್ ಗಳಿಗೆ ಹೇಗೆ ಬೌಲಿಂಗ್ ಮಾಡಬೇಕು ಎಂದು ಗೊತ್ತಾಗಲೇ ಇಲ್ಲ. ಇದನ್ನು ಓದಿ.. Kannada Astrology: ಬರೆದು ಇಟ್ಕೊಳಿ, ಇನ್ನು 9 ದಿನ ನಂತರ ನೀವೇ ರಾಜ. ನಿಮಗೆ ಗುರು ದೆಸೆ ನೀಡಿ ಅದೃಷ್ಟ ಕೊಡುತ್ತಾನೆ ಗುರು. 5 ರಾಶಿಗಳು ಯಾವುವು ಗೊತ್ತೆ?

ಸೆಮಿಫೈನಲ್ಸ್ ಆಡುವಾಗ ಒಳ್ಳೆಯ ಫೈಟ್ ಕೊಡಬೇಕು. 168 ಕಡಿಮೆ ಸ್ಕೋರ್ ಆಗಿರಲಿಲ್ಲ. ರೋಹಿತ್ ಶರ್ಮಾ, ದಿನೇಶ್ ಕಾರ್ತಿಕ್ ಮತ್ತು ಅಶ್ವಿನ್ ರಿಟೈರ್ಮೆಂಟ್ ತೆಗೆದುಕೊಳ್ಳಬಹುದಾದ ಹೆಸರುಗಳಾಗಿದೆ. ಮ್ಯಾನೇಜ್ಮೆಂಟ್ ಖಂಡಿತವಾಗಿಯು ಈ ಮೂವರ ಜೊತೆಗೆ ಮಾತನಾಡಿ, ಇವರ ಮುಂದಿನ ಯೋಜನೆಗಳ ಬಗ್ಗೆ ಮಾತನಾಡುತ್ತಾರೆ ಎಂದು ಅನ್ನಿಸುತ್ತದೆ. ಯುವ ಆಟಗಾರರಿಗೆ ಅವಕಾಶ ಕೊಡಬೇಕಾದ ಸಮಯ ಇದು…” ಎಂದು ಹೇಳಿದ್ದಾರೆ ಮಾಂಟಿ. ಜೊತೆಗೆ ವಿರಾಟ್ ಕೊಹ್ಲಿ (Virat Kohli) ಅವರ ಪರ್ಫಾರ್ಮೆನ್ಸ್ ಬಗ್ಗೆ ಸಂತೋಷವಾಗಿ ಮಾತನಾಡಿದ್ದಾರೆ. ಇದನ್ನು ಓದಿ.. Car kannada: ಅತ್ಯಂತ ಕಡಿಮೆ ಬೆಲೆಗೆ ಸಿಗುವ ಮೂರು ಡೀಸೆಲ್ ಕಾರುಗಳು ಯಾವ್ಯಾವು ಗೊತ್ತೇ?? ಇವುಗಳ ಕ್ಷಮತೆ, ಬೆಲೆ ಕೇಳಿದರೆ ಇಂದೇ ಓಡಿ ಹೋಗಿ ಖರೀದಿ ಮಾಡುತ್ತೀರಿ.

Comments are closed.