Neer Dose Karnataka
Take a fresh look at your lifestyle.

Cricket News: ಅನಗತ್ಯವಾಗಿ ಮೋಜು ಮಾಡಲು ಹೋಗಿ ಇಂಜುರಿ ಮಾಡಿಕೊಂಡು ವಿಶ್ವನಿಂದ ಹೊರಹೋಗಿದ್ದ ಜಡೇಜಾಗೆ ಶಾಕ್ ಕೊಟ್ಟ ಆಯ್ಕೆ ಸಮಿತಿ. ಗಟ್ಟಿ ನಿರ್ಧಾರ ಏನು ಗೊತ್ತೆ?

Cricket News: ಭಾರತ ತಂಡದ ಸ್ಟಾರ್ ಆಲ್ ರೌಂಡರ್ ರವೀಂದ್ರ ಜಡೇಜಾ (Ravindra Jadeja) ಅವರು ಪ್ರಸ್ತುತ ಭಾರತ ತಂಡದಿಂದ ಹೊರಗುಳಿದಿದ್ದಾರೆ. ಆಗಸ್ಟ್ ನಲ್ಲಿ ನಡೆದ ಏಷ್ಯಾಕಪ್ (Asiacup) ಟೂರ್ನಿ ಸಮಯದಲ್ಲಿ ಇಂಜುರಿಗೆ ಒಳಗಾದ ಜಡೇಜಾ ಅವರು ಶಸ್ತ್ರಚಿಕಿತ್ಸೆಯ ಕಾರಣದಿಂದ ತಂಡದಿಂದ ಹೊರಗುಳಿದಿದ್ದರು. ಕೆಲವು ವಾರಗಳ ಕಾಲ ಚಿಕಿತ್ಸೆ ಮತ್ತು ರೆಸ್ಟ್ ಅವಶ್ಯಕತೆ ಇದ್ದ ಕಾರಣ ಜಡೇಜಾ ಅವರು ವಿಶ್ವಕಪ್ ಟೂರ್ನಿಯಲ್ಲಿ (T20 World Cup) ಪಾಲ್ಗೊಳ್ಳಲಿಲ್ಲ. ಈಗ ನಡೆಯುತ್ತಿರುವ ನ್ಯೂಜಿಲೆಂಡ್ ಪ್ರವಾಸದಿಂದಲು ಹೊರಗುಳಿದಿದ್ದಾರೆ ಜಡೇಜಾ. ರವೀಂದ್ರ ಜಡೇಜಾ ಅವರು ಶೀಘ್ರದಲ್ಲೇ ತಂಡಕ್ಕೆ ಕಂಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತು..

ಮುಂದಿನ ತಿಂಗಳು ಡಿಸೆಂಬರ್ ನಲ್ಲಿ ನಡೆಯಲಿರುವ ಬಾಂಗ್ಲಾದೇಶ್ (India vs Bangladesh) ವಿರುದ್ಧ ನಡೆಯಲಿರುವ ಏಕದಿನ ಮತ್ತು ಟೆಸ್ಟ್ ಪಂದ್ಯಾವಳಿಯ ಮೂಲಕ ರವೀಂದ್ರ ಜಡೇಜಾ ಅವರು ಭಾರತ ತಂಡಕ್ಕೆ ಕಂಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗಿತ್ತು. ಬಿಸಿಸಿಐ ನ ಚೇತನ್ ಶರ್ಮಾ (Chetan Sharma) ನೇತೃತ್ವದ ಸಭೆ ರವೀಂದ್ರ ಜಡೇಜಾ ಅವರು ಬಾಂಗ್ಲಾದೇಶ್ ವಿರುದ್ಧದ ತಂಡಕ್ಕೆ ಆಯ್ಕೆ ಮಾಡಿತ್ತು, ಆದರೆ ಬಿಸಿಸಿಐ (BCCI) ಇಂದ ಸಿಕ್ಕಿರುವ ಮಾಹಿತಿಯ ಪ್ರಕಾರ, ರವೀಂದ್ರ ಜಡೇಜಾ ಅವರು ಇನ್ನು ಪೂರ್ತಿಯಾಗಿ ಫಿಟ್ ಆಗಿರದ ಕಾರಣ, ಬಿಸಿಸಿಐ ರವೀಂದ್ರ ಜಡೇಜಾ ಅವರ ಹೆಸರನ್ನು ತೆಗೆದು ಹಾಕಿದೆ ಎಂದು ಮಾಹಿತಿ ಸಿಕ್ಕಿದೆ. ಇದನ್ನು ಓದಿ.. Biggboss Kannada: ರಾಕೇಶ್ ಅಡಿಗ ಬಗ್ಗೆ ಷಾಕಿಂಗ್ ಹೇಳಿಕೆ ಕೊಟ್ಟ ಅಮೂಲ್ಯ. ಕಾರಣ ಕೇಳಿ ಒಮ್ಮೆಲೇ ಬೆಚ್ಚಿಬಿದ್ದ ಪ್ರಶಾಂತ್ ಸಂಭರ್ಗಿ. ಅಮೂಲ್ಯ ಗೌಡ ಹೇಳಿದ್ದೇನು ಗೊತ್ತೇ?

ಬಾಂಗ್ಲಾದೇಶ್ ವಿರುದ್ಧದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರು ಆಡುವುದಿಲ್ಲ ಎನ್ನಲಾಗುತ್ತಿದ್ದು, ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಆಸ್ಟ್ರೇಲಿಯಾ (India vs Australia) ವಿರುದ್ಧ ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ಈ ಪಂದ್ಯಗಳ ಮೂಲಕ ರವೀಂದ್ರ ಜಡೇಜಾ ಅವರು ಕಂಬ್ಯಾಕ್ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಬಾಂಗ್ಲಾದೇಶ್ ವಿರುದ್ಧದ ಪಂದ್ಯಗಳಲ್ಲಿ ಜಡೇಜಾ ಅವರ ಬದಲಾಗಿ ಯಾವ ಆಟಗಾರ ಆಡುತ್ತಾರೆ ಎಂದು ಇನ್ನು ಮಾಹಿತಿ ಸಿಕ್ಕಿಲ್ಲ. ಮುಂಬರುವ ದಿನಗಳಲ್ಲಿ ಜಡೇಜಾ ಅವರ ರೀಪ್ಲೇಸ್ಮೆಂಟ್ ಯಾರಾಗುತ್ತಾರೆ ಎಂದು ಗೊತ್ತಾಗಲಿದೆ. ಇದನ್ನು ಓದಿ.. Kannada News: ನೋಡಲು ಸುರ ಸುಂದರಿಯರು, ಜೀವನದಲ್ಲಿ ಯಶಸ್ಸು ಕೂಡ, ಆದರೆ ಈ ಎಲ್ಲಾ ಅಪ್ಸರೆಗಳು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

Comments are closed.