Neer Dose Karnataka
Take a fresh look at your lifestyle.

Kannada News: ಮುದ್ದು ಮುದ್ದಾಗಿ ‘ಸಿಂಗಾರ ಸಿರಿಯೇ’ ಹಾಡು ಹೇಳಿದ ಪುಟ್ಟ ಮಗು ವೀಡಿಯೋ ವೈರಲ್ ಕಂತಾರ. ವಿಡಿಯೋ ನೋಡಿದ್ರಾ?

Kannada News: ಕಾಂತಾರ (Kantara) ಸಿನಿಮಾ ಇಂದು 400 ಕೋಟಿವರೆಗೂ ಹಣಗಳಿಕೆ ಮಾಡಿ, ದೇಶಾದ್ಯಂತ ಎಲ್ಲಾ ಸಿನಿಮಾಪ್ರಿಯರಿಂದ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ನಮ್ಮ ಕರಾವಳಿ ಭಾಗದ ಸಂಸ್ಕೃತಿಯನ್ನು ಎಲ್ಲರೂ ಬಹಳ ಇಷ್ಟಪಡುತ್ತಿದ್ದಾರೆ. ದೈವಾಧನೆ, ಭೂತಕೋಲ ಇದೆಲ್ಲದರ ಬಗ್ಗೆ ಜನರಿಗೆ ಗೊತ್ತಾಗಿದ್ದು, ಅವುಗಳನ್ನು ಜನರು ಗೌರವದಿಂದ ಕಾಣುತ್ತಿದ್ದಾರೆ. ಕಾಂತಾರ ಸಿನಿಮಾದ ಕ್ಲೈಮ್ಯಾಕ್ಸ್ ನೋಡಿ ಎಲ್ಲರೂ ಅದ್ಭುತವೇ ಸರಿ ಎಂದು ಹೇಳಿದ್ದರು. ಸಿನಿಮಾದಲ್ಲಿ ಪ್ರತಿಯೊಂದು ದೃಶ್ಯ ಮತ್ತು ಹಾಡುಗಳು ಜನರಿಗೆ ಬಹಳ ಇಷ್ಟವಾಗುತ್ತಿದೆ.

ಯುವಕರಿಗೆ ಈಗಿನ ಜೆನೆರೇಷನ್ ನವರಿಗೆ ಬಹಳ ಇಷ್ಟವಾಗಿರುವ ಹಾಡು ಸಿಂಗಾರ ಸಿರಿಯೇ (Singara siriye)..ಈ ಹಾಡಿನಲ್ಲಿ ಡ್ಯುಯೆಟ್ ಎನ್ನುವುದರ ಜೊತೆಗೆ ನಮ್ಮ ಮಣ್ಣಿನ ನೇಟಿವಿಟಿ ಇದೆ, ಜನರಿಗೆ ಬಹಳ ಇಷ್ಟ ಆಗಿರುವುದೇ ಆ ಅಪ್ಪಟ ಕನ್ನಡ ಸಾಹಿತ್ಯ, ಅಜನೀಶ್ ಲೋಕನಾಥ್ (Ajanish Lokanath) ಅವರ ಮೈಮರೆಸುವ ಸಂಗೀತ, ವಿಜಯ್ ಪ್ರಕಾಶ್ (Vijay Prakash) ಅವರ ಗಾಯನ. ಈ ಹಾಡು ಕನ್ನಡದಲ್ಲಿ ಹೊಸ ಟ್ರೆಂಡ್ ಸೃಷ್ಟಿ ಮಾಡಿದೆ ಎಂದರೆ ತಪ್ಪಾಗುವುದಿಲ್ಲ. ಈ ಹಾಡನ್ನು ದೊಡ್ಡವರಿಂದ ಹಿಡಿದು ಮಕ್ಳಳವರೆಗೂ ಎಲ್ಲರೂ ಬಹಳ ಇಷ್ಟಪಡುತ್ತಿದ್ದಾರೆ. ಇದನ್ನು ಓದಿ.. Kannada Astrology: ಇಂದಿನಿಂದಲೇ ನಿಮ್ಮ ಅದೃಷ್ಟ ಆರಂಭ: ಇನ್ನು 5 ತಿಂಗಳು ನಿಮ್ಮನ್ನು ಟಚ್ ಮಾಡಲು ಕೂಡ ಆಗಲ್ಲ. 5 ರಾಶಿಗಳಿಗೆ ಗುರು ದೆಸೆ. ಯಾರಿಗೆ ಗೊತ್ತೇ??

ಸಿಂಗಾರ ಸಿರಿಯೇ ಹಾಡಿಗೆ ಇನ್ಸ್ಟಾಗ್ರಾಮ್ ನಲ್ಲಿ ರೀಲ್ಸ್ ಗಳು ಸಹ ಭರ್ಜರಿಯಾಗಿ ನಡೆಯುತ್ತಿದೆ, ಕನ್ನಡ ಚಿತ್ರರಂಗದ ಸಾಕಷ್ಟು ನಟನಟಿಯರು ಕೂಡ ಸಿಂಗಾರ ಸಿರಿಯೇ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಇದೀಗ ಈ ಹಾಡನ್ನು ಪುಟ್ಟ ಮಗುವೊಂದು ಹಾಡಿದ್ದು, ಆ ಹಾಡಿನ ವಿಡಿಯೋ ಎಲ್ಲೆಡೆ ಭಾರಿ ವೈರಲ್ ಆಗಿದೆ. ಮುದ್ದಾದ ಮಗು, ಮುದ್ದು ಮುದ್ದಾಗಿ ಸಿಂಗಾರ ಸಿರಿಯೇ ಹಾಡು ಹಾಡುತ್ತಿರುವುದನ್ನು ನೋಡಿ, ಫಿದಾ ಆಗಿರುವ ನೆಟ್ಟಿಗರು, ಈ ವಿಡಿಯೋ ವೈರಲ್ ಆಗುವ ಹಾಗೆ ಮಾಡಿದ್ದಾರೆ. ನೀವು ಕೂಡ ತಪ್ಪದೇ ಈ ವಿಡಿಯೋ ನೋಡಿ.. ಇದನ್ನು ಓದಿ..Cricket News: ರವೀಂದ್ರ ಜಡೇಜಾಗೆ ಶಾಕ್ ಕೊಟ್ಟು, ಹೊಸ ಖಡಕ್ ಪ್ಲೇಯರ್ ಅನ್ನು ತಂಡಕ್ಕೆ ಆಯ್ಕೆ. ಸ್ಥಾನ ಪಡೆದ ಖಡಕ್ ಪ್ಲೇಯರ್ ಯಾರು ಗೊತ್ತೇ?

Comments are closed.