Neer Dose Karnataka
Take a fresh look at your lifestyle.

Kannada News: ನನ್ನ ಹೊಡೆಯೋಕೆ ನಿಂತಿರುವ ಹೀರೋ ಗಳ ಬಗ್ಗೆ ಮೊದಲ ಬಾರಿಗೆ ಖಡಕ್ ಸ್ಟಾರ್ ಡಿ ಬಾಸ್ ಹೇಳಿದ್ದನು ಗೊತ್ತೇ??

Kannada News: ನಟ ದರ್ಶನ್ (Darshan) ಅವರೆಂದರೆ ಅಭಿಮಾನಿಗಳಿಗೆ ಬಹಳ ಕ್ರೇಜ್. ಅವರ ಬಗ್ಗೆ ಪ್ರತಿಯೊಂದು ವಿಚಾರವನ್ನು ಕೂಡ ತಿಳಿದುಕೊಳ್ಳಲು ಅಭಿಮಾನಿಗಳು ಬಯಸುತ್ತಾರೆ. ಪ್ರಸ್ತುತ ದರ್ಶನ್ ಅವರು ಕ್ರಾಂತಿ (Kranthi) ಸಿನಿಮಾ ಪ್ರೊಮೋಷನ್ ನಲ್ಲಿ ಬ್ಯುಸಿ ಆಗಿದ್ದಾರೆ. ಹಲವು ವಿಚಾರಗಳನ್ನು ಕ್ರಾಂತಿ ಪ್ರಮೋಷನ್ ನಲ್ಲಿ ಹೇಳಿಕೊಳ್ಳುತ್ತಿದ್ದಾರೆ. ಈಗಾಗಲೇ ನಮಗೆಲ್ಲಾ ಗೊತ್ತಿರುವ ಹಾಗೆ ಕ್ರಾಂತಿ ಸಿನಿಮಾ ಕಥೆ ಇರುವುದು ಅಕ್ಷರ ಕ್ರಾಂತಿಯ ಬಗ್ಗೆ. ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ಬಗ್ಗೆ ಕ್ರಾಂತಿ ಸಿನಿಮಾದ ಕಥೆಯನ್ನು ಹೆಣೆಯಲಾಗಿದೆ.

ಈ ಸಿನಿಮಾಗೆ ಮಾಧ್ಯಮಗಳಲ್ಲಿ ಪ್ರೊಮೋಷನ್ ಮಾಡದೆ ಇರುತ್ತಿರುವ ಕಾರಣ, ಡಿಬಾಸ್ ದರ್ಶನ್ ಅವರು ಯೂಟ್ಯೂಬ್ ಚಾನೆಲ್ ಗಳಿಗೆ ಕ್ರಾಂತಿ ಸಿನಿಮಾ ಬಗ್ಗೆ ಇಂಟರ್ವ್ಯೂ ಕೊಡುತ್ತಿದ್ದಾರೆ. ಅವುಗಳಲ್ಲಿ ಹಲವು ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದಾರೆ ಡಿಬಾಸ್. ಇತ್ತೀಚೆಗೆ ನೀಡಿದ ಸಂದರ್ಶನ ಒಂದರಲ್ಲಿ, ನಮ್ಮ ನಟರು ಬೇರೆ ಭಾಷೆಗೆ ಹೋಗಿ ನಟನೆ ಮಾಡುತ್ತಿರುವುದು, ಹಾಗೆಯೇ ತೆಲುಗು (Tollywood) ಚಿತ್ರರಂಗ ಇತ್ತೀಚೆಗೆ ಸಂಕ್ರಾಂತಿ ಮತ್ತು ದೀಪಾವಳಿ ಅಂತಹ ಹಬ್ಬಗಳ ಸಮಯದಲ್ಲಿ ಮೊದಲ ಆದ್ಯತೆಯನ್ನು ತೆಲುಗು ಸಿನಿಮಾಗಳಿಗೆ ನೀಡಬೇಕು ಎಂದು ನಿರ್ಧಾರ ಮಾಡಿರುವ ಬಗ್ಗೆ ಡಿಬಾಸ್ ದರ್ಶನ್ ಅವರು ಖಡಕ್ ಆಗಿ ಮಾತನಾಡಿದ್ದಾರೆ.

ತೆಲುಗು ಚಿತ್ರರಂಗದ ನಿರ್ಧಾರದ ಬಗ್ಗೆ ಮಾತನಾಡಿರುವ ದರ್ಶನ್ ಅವರು, ಅವರಿಗೆ ಈಗ ತಳ ಸುಟ್ಟಿದೆ, ನಮ್ಮ ಚಿತ್ರರಂಗಕ್ಕೆ ಈ ಹಿಂದೇನೆ ಅಂತಹ ಪೆಟ್ಟು ಬಿದ್ದಿತ್ತು, ಅದರಿಂದಲೇ ನಾವು ಆಗಲೇ ನಮ್ಮ ರಾಜ್ಯದಲ್ಲಿ ಕನ್ನಡ ಚಿತ್ರಗಳಿಗೆ ಪ್ರಾಧಾನ್ಯತೆ ನೀಡಿ ನಮ್ಮ ನೆಲದಲ್ಲಿ ನಾವೇ ಕಿಂಗ್ ಅಂತ ಹೇಳಿದ್ವಿ. ಅದೊಂದೆ ಅಲ್ಲದೆ, ನಮ್ಮ ಕರ್ನಾಟಕದ ಜನರು ನನ್ನನ್ನು ರಾಜನಂತೆ ನೋಡಿಕೊಂಡಿದ್ದಾರೆ, ಫುಟ್‌ ಪಾತ್ ನಲ್ಲಿದ್ದ ನನ್ನನ್ನು ಮಾಲ್‌ ಗಳಿಗೆ ತಂದು ಕೂರಿಸಿದ್ದಾರೆ, ಹೀಗಿದ್ದಾಗ ನಾನೇಕೆ ಬೇರೆ ಭಾಷೆಗಳಿಗೆ ಹೋಗಿ ನಟಿಸಬೇಕು.. ಎಂದು ಹೇಳುವ ಮೂಲಕ ಬೇರೆ ನಟರಿಗೆ ಖಡಕ್ ಉತ್ತರ ನೀಡಿದ್ದಾರೆ ನಟ ದರ್ಶನ್.

Comments are closed.