Neer Dose Karnataka
Take a fresh look at your lifestyle.

Biggboss Kannada: ಕಳಪೆ ವಿಚಾರದಲ್ಲಿ ಬಿಗ್ ಬಾಸ್ ಮನೆಯನ್ನು ಮತ್ತೊಮ್ಮೆ ಶೇಕ್ ಮಾಡಿದ ಪ್ರಶಾಂತ್ ಸಂಭರ್ಗಿ; ಕಿಚ್ಚ ಯಾರ ಪರ ನಿಲ್ಲುತ್ತಾರೋ.

Biggboss Kannada: ಬಿಗ್ ಬಾಸ್ ಕನ್ನಡ ಸೀಸನ್ 9 (BBK9) ರಲ್ಲಿ ಸ್ಪರ್ಧಿಗಳ ಜರ್ನಿಯಲ್ಲಿ 10ನೇ ವಾರ ಈಗ ಮುಗಿದು, 11ನೇ ವಾರಕ್ಕೆ ಸಜ್ಜಾಗಿದ್ದಾರೆ. ಈ ವಾರ ಕಿಚ್ಚನ ಪಂಚಾಯಿತಿ ನಡೆಯಲಿದೆ. ಬಿಗ್ ಬಾಸ್ ಮನೆಯಲ್ಲಿ ಈ ವಾರ ಫ್ಯಾಮಿಲಿ ವೀಕ್ ಆಗಿತ್ತು, ಮನೆಯ ಎಲ್ಲಾ ಸ್ಪರ್ಧಿಗಳು ತಮ್ಮ ಕುಟುಂಬದವರನ್ನು ಭೇಟಿ ಮಾಡುವ ಅವಕಾಶ ನೀಡಲಾಗಿತ್ತು. ಅದರ ಜೊತೆಗೆ ಬ್ಯಾಟರಿ ಟಾಸ್ಕ್ ಸಹ ಇತ್ತು. ಈ ವಾರ ಎಲ್ಲಾ ಸ್ಪರ್ಧಿಗಳು ತಮ್ಮ ಕುಟುಂಬದವರನ್ನು ಭೇಟಿ ಮಾಡಿದ್ದಾರೆ. ಟಾಸ್ಕ್ ಮುಗಿದು, ಉತ್ತಮ ಮತ್ತು ಕಳಪೆ ಬಂದಾಗ, ಅರುಣ್ ಸಾಗರ್ (Arun Sagar) ಅವರಿಗೆ ಉತ್ತಮ ಸಿಕ್ಕಿದರೆ, ಪ್ರಶಾಂತ್ ಸಂಬರ್ಗಿ (Prashanth Sambargi) ಅವರಿಗೆ ಕಳಪೆ ಸಿಕ್ಕಿದೆ.

ಪ್ರಶಾಂತ್ ಸಂಬರ್ಗಿ ಜೈಲಿಗೆ ಹೋಗಿದ್ದಾರೆ. ಪ್ರಶಾಂತ್ ಅವರು ಮಾಡಿದ ಎರಡು ತಪ್ಪಿನಿಂದ ಬ್ಯಾಟರಿಯಲ್ಲಿ 20% ಖಾಲಿ ಆಯಿತು, ಜೊತೆಗೆ ಕುಟುಂಬದವರನ್ನು ಭೇಟಿ ಮಾಡಲು ಮನೆಯ ಬೇರೆ ಸ್ಪರ್ಧಿಗಳ ಬಗ್ಗೆ ಯೋಚನೆ ಮಾಡದೆ, ತಮ್ಮ ಬಗ್ಗೆ ಮಾತ್ರ ಯೋಚನೆ ಮಾಡಿ 45% ಬ್ಯಾಟರಿ ಖಾಲಿ ಮಾಡಿದರು ಎಂದು ಮನೆಯ ಸ್ಪರ್ಧಿಗಳು ಕಾರಣ ನೀಡಿ, ಪ್ರಶಾಂತ್ ಅವರನ್ನು ಕಳಪೆ ಎಂದರು, ರಾಕೇಶ್ ಅಡಿಗ (Rakesh Adiga), ಅಮೂಲ್ಯ ಗೌಡ (Amulya Gowda), ಅನುಪಮಾ ಗೌಡ (Amulya Gowda), ದಿವ್ಯ ಉರುಡುಗ (Divya Uruduga), ರೂಪೇಶ್ ಶೆಟ್ಟಿ (Roopesh Shetty) ಮತ್ತು ಅರುಣ್ ಸಾಗರ್ ಪ್ರಶಾಂತ್ ಅವರಿಗೆ ಕಳಪೆ ಎಂದು ವೋಟ್ ಮಾಡಿದರು. ಪ್ರಶಾಂತ್ ಸಂಬರ್ಗಿ ಜೈಲಿಗೆ ಹೋಗಿದ್ದೇನೋ ಆಗಿದೆ.. ಇದನ್ನು ಓದಿ..Kannada News: ಪಾರು ಸೀರಿಯಲ್ ನಟ ಆದಿ ನಿಶ್ಚಿತಾರ್ಥ ಹುಡುಗಿ ಯಾರು ಗೊತ್ತೇ?? ಬ್ಯಾಕ್ ಗ್ರೌಂಡ್ ಏನು ಗೊತ್ತೇ??

ಆದರೆ ಜೈಲಿಗೆ ಹೋದಮೇಲೆ, ತಮಗೆ ಕಳಪೆ ಬಂದಿದ್ದು ಅನ್ಯಾಯ ಎನ್ನುತ್ತಿದ್ದಾರೆ ಪ್ರಶಾಂತ್, ಮನೆಯ ಬೇರೆ ಸ್ಪರ್ಧಿಗಳು ತಪ್ಪು ಮಾಡಿದ್ದಾರೆ, ಪಿಸು ದನಿಯಲ್ಲಿ ಮಾತಾಡೋದೆಲ್ಲಾ ಮಾಡಿದ್ದಾರೆ. ನಾನು ಓಪನ್ ಆಗಿ ಹೇಳಿಕೊಂಡೆ, ಅವರು ಹೇಳಿಲ್ಲ. ನನ್ನ ವಿರುದ್ಧ ರಾಕೇಶ್ ಅಡಿಗ ಅವರ ಗ್ರೂಪ್ ಸಂಚು ಮಾಡುತ್ತಿದ್ದಾರೆ ಎಂದು ಮನೆಯ ಸ್ಪರ್ಧಿಗಳ ವಿರುದ್ಧ ಹೋಗಿದ್ದಾರೆ ಪ್ರಶಾಂತ್ ಸಂಬರ್ಗಿ. ಇನ್ನು ಪ್ರಶಾಂತ್ ಅವರು ಅಮೂಲ್ಯ ಅವರಿಗೆ ಕಳಪೆ ನೀಡಿದರು. ಹೀಗೆ ತಮ್ಮ ವಿರುದ್ಧ ಅನ್ಯಾಯ ನಡೆಯುತ್ತಿದೆ ಎಂದು ಪ್ರಶಾಂತ್ ಅವರು ಹೇಳಿದ್ದು, ಇಂದು ಕಿಚ್ಚ ಸುದೀಪ್ (Kiccha Sudeep) ಅವರು ಯಾರ ಪರವಾಗಿ ಮಾತನಾಡುತ್ತಾರೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Biggboss Kannada: ಮನೆಯಲ್ಲಿ ಉಳಿದುಕೊಳ್ಳಲು ಧಾರವಾಹಿ ತಂತ್ರ: ಗೇಮ್ ಪ್ಲಾನ್ ಚೇಂಜ್ ಮಾಡಿ ಕಾವ್ಯ ಮಾಡುತ್ತಿರುವುದೇನು ಗೊತ್ತೇ?

Comments are closed.