Neer Dose Karnataka
Take a fresh look at your lifestyle.

Biggboss Kannada: ಬಿಗ್ ಬಾಸ್ ಮನೆಯಲ್ಲಿ ತಲ್ಲಣವನ್ನು ಸೃಷ್ಟಿಸಿದ ಅಮೂಲ್ಯ ಗೌಡ: ಅಮ್ಮು ಮಾಡಿದ್ದೇನು ಗೊತ್ತೇ? ಶೇಕ್ ಆಯಿತು ಬಿಗ್ ಬಾಸ್ ಮನೆ.

Biggboss Kannada: ಬಿಗ್ ಬಾಸ್ (Bigg Boss) ಮನೆಯಲ್ಲಿ ಕಳೆದ ವಾರ ರಾಕೇಶ್ ಅಡಿಗ (Rakesh Adiga) ಅವರು ಕ್ಯಾಪ್ಟನ್ ಆಗಿದ್ದರು. ಇವರು ಕ್ಯಾಪ್ಟನ್ಸಿಯನ್ನು ಚೆನ್ನಾಗಿಯೇ ನಿಭಾಯಿಸಿದ್ದರು ಕೂಡ, ನಡೆದ ಕೆಲವು ವಿಚಾರಗಳು ಭಾರಿ ಹೈಲೈಟ್ ಆದವು. ಅದರಲ್ಲಿ ಒಂದು ಬಿಗ್ ಬಾಸ್ ಮನೆಯ ಇತಿಹಾಸದಲ್ಲಿ ಹಾಲು ಮೊದಲ ಬಾರಿಗೆ ಹಾಲು ಡಿವೈಡ್ ಆಗಿದ್ದು, ಇದರ ಬಗ್ಗೆ ವೀಕೆಂಡ್ ಎಪಿಸೋಡ್ ನಲ್ಲಿ ಸ್ವತಃ ಸುದೀಪ್ (Sudeep) ಅವರು ಸಹ ಪ್ರಶ್ನೆ ಮಾಡಿದರು, ಅಮೂಲ್ಯ (Amulya Gowda) ಅವರೇ ಮನೆಗೆ ಬಂದ ಮೊದಲ ದಿನ ಗಂಡಸರ ಬಾತ್ ರೂಮ್ ಅಂತ ಮಾಡಿದ್ರಿ, ಈಗ ಹಾಲು ಬೇರೆ ಬೇರೆ ಮಾಡಿದ್ದೀರಾ, ನಿಮಗೆ ಈ ಮನೆಗೆ ಹೊಂದಿಕೊಳ್ಳೋದಕ್ಕೆ ಕಷ್ಟ ಆಗ್ತಿದ್ಯಾ ಎಂದು ಕೇಳಿದರು ಸುದೀಪ್.

ಆಗ ಉತ್ತರಿಸಿದ ಅಮೂಲ್ಯ, “ಹೊಂದಿಕೊಳ್ಳೋದಕ್ಕೆ ಕಷ್ಟ ಆಗ್ತಾ ಇಲ್ಲ ಸರ್. ಇಷ್ಟು ದಿನ ನನಗೆ ಟೀ ಮಾತ್ರ ಸಿಗ್ತಾ ಇತ್ತು ಸರ್, ಹಾಲು ಕುಡಿದಿಲ್ಲ. ಗಟ್ಟಿ ಹಾಲಿನ ಟೀ ಬೇಕಿತ್ತು ಅದಕ್ಕೆ ಕೇಳಿದೆ..” ಎಂದು ಅಮೂಲ್ಯ ಹೇಳಿದರು. ಆದರೆ ಮನೆಯವರ ಅಭಿಪ್ರಾಯವೇ ಬೇರೆ ಇತ್ತು. ಪ್ರಶಾಂತ್ ಸಂಬರ್ಗಿ (Prashanth Sambhargi) ಅವರು.. ಈ ರೀತಿ ಮಾಡಿ ಅಮೂಲ್ಯ ಮನೆ ಮುರಿಯುತ್ತಿದ್ದಾರೆ, ಒಬ್ಬರಿಗೆ ಆಗ್ತಿಲ್ಲ ಅಂದ್ರೆ ಅವರನ್ನ ಹೊರಗಿಡಿ, ನಾವೆಲ್ಲಾ ಒಟ್ಟಿಗೆ ಇರಬೇಕು, ಅದೇ ಜೀವನ. ಗಟ್ಟಿ ಹಾಲು ಬೇಕು ಅಂತ ಹೇಳೋದು superiority complex ನ ಪರಮಾವಧಿ ಅಂತ ಹೇಳಿದೆ..ಎಂದು ಪ್ರಶಾಂತ್ ಸಂಬರ್ಗಿ ಹೇಳಿದರು. ಕ್ಯಾಪ್ಟನ್ ರಾಕೇಶ್ ಅವರು, ತಮ್ಮ ಕ್ಯಾಪ್ಟನ್ಸಿಯಲ್ಲಿ ಹಾಲು ಕಡಿಮೆ ಇತ್ತು, ಒಬ್ಬೊಬ್ಬರು ಒಂದೊಂದು ರೀತಿ ಹೇಳಿದರು, ಯಾರು ಒಮ್ಮತದಿಂದ ಒಪ್ಪಲಿಲ್ಲ..ಎಂದು ಹೇಳಿದ್ದಾರೆ ರಾಕೇಶ್ ಅಡಿಗ. ಇದನ್ನು ಓದಿ..Biggboss Kannada: ಮನೆಯಲ್ಲಿ ಪ್ರಶಾಂತ್ ಒಬ್ಬರೇ ರಿಯಲ್, ಉಳಿದ ಎಲ್ಲ ಸ್ಪರ್ದಿಗಳು ಫೇಕ್ ಎಂದ ಸುದೀಪ್. ಯಾಕೆ ಗೊತ್ತೇ?? ನಾಯಿಬಾಲ ಡೊಂಕು ಎಂದ ಪ್ರಶಾಂತ್.

ಅಮೂಲ್ಯ ಗೆ ಸಪೋರ್ಟ್ ಆಗುವ ಹಾಗೆ ಮಾತನಾಡಿದ ದಿವ್ಯ ಉರುಡುಗ (Divya Uruduga), ಅಮೂಲ್ಯ ಒಬ್ಬರಿಂದ ಹೀಗೆ ಆಗಲಿಲ್ಲ, ಎಲ್ಲರೂ ಆ ಟೈಂಗೆ ಬೇಕು, ಈ ಟೈಂಗೆ ಬೇಕು ಅಂತ ಕೇಳ್ತಿದ್ರು, ಅದರಿಂದ ಹೀಗಾಯ್ತು ಎಂದಿದ್ದಾರೆ. ಎಲ್ಲಾರು ಒಂದೇ ಟೀ ಮಾಡೋಣ ಅಂತ ಒಪ್ಪಿಕೊಂಡರು, ಅಮೂಲ್ಯ ಮಾತ್ರ ಬೇರೆ ಬೇಕು ಅಂದ್ರು, ಅವರಿಗೆ ಹೊಂದಿಕೊಳ್ಳೋದಕ್ಕೆ ಕಷ್ಟ ಆಗುತ್ತಿರಬಹುದು ಎಂದು ರೂಪೇಶ್ ರಾಜಣ್ಣ (Roopesh Rajanna) ಹೇಳಿದ್ದಾರೆ..ಆಗ ಅಮೂಲ್ಯ, “ಈ ಮನೆಯಲ್ಲಿ ಎಲ್ಲರೂ ಎಷ್ಟರ ಮಟ್ಟಿಗೆ ಕೂತು ಟೀ ಕುಡಿತಾರೆ ಅಂತ ಅವರಿಗೆ ಗೊತ್ತಿದೆ ಸರ್, ನಾನು ಹೇಳಬೇಕಿಲ್ಲ. ಈ ಸಲ ಜನ ಕಡಿಮೆ ಇದ್ರು, ಒಬ್ಬೊಬ್ಬರಿಗೆ ಬರುತ್ತೆ ಅಂತ ಕೇಳಿದೆ ಅಷ್ಟೇ.. ಇನ್ನೇನು ಇಲ್ಲ..” ಎಂದು ಹೇಳಿದ್ದಾರೆ ಅಮೂಲ್ಯ. ಇದನ್ನು ಓದಿ..Kannada News: ಮೊನ್ನೆ ತಾನೇ ಕನ್ನಡ ಮರೆತು ತೆಲುಗಿನಲ್ಲಿ ರಾಜಾಜಿಸಿದ್ದ ಶ್ರೀ ಲೀಲಾ ಗೆ ಶಾಕ್: ಇಷ್ಟೇ ಸ್ವಾಮಿ ಕನ್ನಡ ಮರೆತವರ ಪರಿಸ್ಥಿತಿ.

Comments are closed.