Neer Dose Karnataka
Take a fresh look at your lifestyle.

Kannada News: ಕಾಂತಾರ ಯಶಸ್ಸು ನೋಡಿ ರಜನಿ, ತಮಿಳಿನಲ್ಲಿ ತೆಗೆದುಕೊಂಡ ಗಟ್ಟಿ ನಿರ್ಧಾರ ಏನು ಗೊತ್ತೇ?? ಕನ್ನಡಿಗರ ಟ್ರೆಂಡ್ ಕಂಡು ಬೆಚ್ಚಿದ ರಜನಿ ಏನು ಮಾಡುತ್ತಿದ್ದಾರೆ ಗೊತ್ತೇ?

Kannada News: ನಟ ರಜನಿಕಾಂತ್ (Rajinikanth) ಅವರು ವಿಶ್ವದಲ್ಲಿ ಅತಿದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟರಲ್ಲಿ ಒಬ್ಬರು. ರಜನಿಕಾಂತ್ ಅವರ ಸಿನಿಮಾ ಬಿಡುಗಡೆ ಆಗುತ್ತದೆ ಎಂದರೆ ಅಭಿಮಾನಿಗಳು ಕಾದು ಕುಳಿತಿರುತ್ತಾರೆ. ರಜನಿಕಾಂತ್ ಅವರ ಹುಟ್ಟುಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ, ಡಿಸೆಂಬರ್ 12ರಂದು ರಜನಿಕಾಂತ್ ಅವರ ಹುಟ್ಟುಹಬ್ಬ, ಈ ವರ್ಷ ರಜನಿಕಾಂತ್ ಅವರಿಗೆ 72ನೇ ಹುಟ್ಟುಹಬ್ಬದ ಸಂಭ್ರಮ. ಈ ಸಮಯದಲ್ಲಿ ರಜನಿಕಾಂತ್ ಅವರ ಹುಟ್ಟುಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಲು, ಅಭಿಮಾನಿಗಳಿಗೆ ಒಂದು ದೊಡ್ಡ ಉಡುಗೊರೆ ನೀಡಲಾಗುತ್ತಿದೆ.

ಅದೇನು ಎಂದರೆ, 20 ವರ್ಷಗಳ ಹಿಂದೆ ತೆರೆಕಂಡಿದ್ದ ರಜನಿಕಾಂತ್ ಅವರ ಬಾಬಾ (Baba) ಸಿನಿಮಾ ಈ ವರ್ಷ ರಜನಿಕಾಂತ್ ಅವರ ಹುಟ್ಟುಹಬ್ಬದಂದು ರೀರಿಲೀಸ್ ಆಗುತ್ತಿದೆ. ಬಾಬಾ ಸಿನಿಮಾ ಆಗ ಹೀನಾಯವಾಗಿ ಸೋತಿತ್ತು, ಈ ಸಿನಿಮಾಗೆ ಕಥೆ ಮತ್ತು ಚಿತ್ರಕಥೆ ಬರೆದು, ನಿರ್ಮಾಣ ಕೂಡ ಮಾಡಿದ್ದು ಸ್ವತಃ ರಜನಿಕಾಂತ್ ಅವರೇ, ಆದರೆ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಸೋತಿತ್ತು, ಇದರಿಂದ ರಜನಿಕಾಂತ್ ಅವರು ಡಿಸ್ಟ್ರಿಬ್ಯುಟರ್ ಗಳಿಗೆ ಆದ ಲಾಸ್ ಅನ್ನು ತಮ್ಮ ಸ್ವಂತ ಹಣದಿಂದ ಭಾರಿಸಿದ್ದರು. ಅಷ್ಟಕ್ಕೂ, ಇದ್ದಕ್ಕಿದ್ದ ಬಾಬಾ ಸಿನಿಮಾವನ್ನು ರೀರಿಲೀಸ್ ಮಾಡುವ ಪ್ಲಾನ್ ನ ಹಿಂದಿನ ಕಾರಣ ಕನ್ನಡದ ಕಾಂತಾರ (Kantara) ಸಿನಿಮಾದ ಯಶಸ್ಸು ಎಂದು ಹೇಳಲಾಗುತ್ತಿದೆ. ಇದನ್ನು ಓದಿ..Rashmika Mandanna: ತನ್ನನ್ನು ಟ್ರೊಲ್ ಮಾಡುತ್ತಿರುವ ಎಲ್ಲರ ಬಾಯಿ ಮುಚ್ಚಿಸುವಂತಹ ಕೆಲಸ ಮಾಡಿದ ರಶ್ಮಿಕಾ. ರಾತ್ರೋ ರಾತ್ರಿ ಪ್ಲಾನ್ ಮಾಡಿ ಮಾಡಿದ್ದೇನು ಗೊತ್ತೆ?

ಬಾಬಾ ಸಿನಿಮಾವನ್ನು ನಿರ್ದೇಶನ ಮಾಡಿದ್ದು ಶೇಖರ್ ಕೃಷ್ಣ (Shekhar Krishna) ಅವರು, ಸಿನಿಮಾ ರೀರಿಲೀಸ್ ಬಗ್ಗೆ ಅವರು ಮಾತನಾಡಿ, “ಈಗ ಸಿನಿಪ್ರಿಯರಿಗೆ ಫ್ಯಾಂಟಸಿ ಕಥೆಗಳು ಇಷ್ಟ ಆಗ್ತಿದೆ. ಬಾಬಾ ಸಿನಿಮಾ ಆಗಿನ ಕಾಲಕ್ಕೆ ಮುಂದೆ ಇದ್ದ ಸಿನಿಮಾ..”ಎಂದಿದ್ದಾರೆ. ಈ ಮಾತು ಕೇಳಿದ ನೆಟ್ಟಿಗರು, ಕಾಂತಾರ ಯಶಸ್ಸಿನಿಂದಲೇ ಈ ರೀತಿ ಹೇಳಿರಬಹುದು ಎನ್ನುತ್ತಿದ್ದಾರೆ. ಬಾಬಾ ಸಿನಿಮಾಗೆ ಹೊಸದಾಗಿ ಡಬ್ಬಿಂಗ್ ಮಾಡಿ, ರೀಮಾಸ್ಟರ್ ಮಾಡಲಾಗಿದ್ದು, ಸಿನಿಮಾದ ಟ್ರೈಲರ್ ಬಿಡುಗಡೆಯಾಗಿ, ಲಕ್ಷಾಂತರ ವೀಕ್ಷಣೆ ಪಡೆಯುತ್ತಿದೆ. ಇದನ್ನು ಓದಿ..Kannada News: ಇದಪ್ಪ ಅಭಿಮಾನ ಪ್ರೀತಿ ಅಂದ್ರೆ, ಸಮಂತಾ ರಾವರಿಗಾಗಿ ತನ್ನನ್ನು ನಂಬಿದ್ದ ಹುಡುಗಿಗೆ ಕೈಕೊಟ್ಟ ವಿಜಯದೇವರಕೊಂಡ. ತೆಲುಗಿನಲ್ಲಿ ಹೊಸ ಕಹಾನಿ?

Comments are closed.