Neer Dose Karnataka
Take a fresh look at your lifestyle.

Kannada News: ಯಾರು ಸಹಾಯ ಮಾಡದಿದ್ದರೆ ಏನಂತೆ, ಏಕಾಂಗಿಯಾಗಿ ಎದ್ದು ನಿಂತ ರವಿ ಚಂದ್ರನ್, ಕುಲಾಯಿಸಿದ ಅದೃಷ್ಟ ಏನು ಗೊತ್ತೇ?

Kannada News: ಕೆಲವು ದಿನಗಳ ಹಿಂದೆ ಕ್ರೇಜಿಸ್ಟಾರ್ ವಿ.ರವಿಚಂದ್ರನ್ (Ravichandran) ಅವರು ಬಹಳ ಕಷ್ಟದಲ್ಲಿರುವ ವಿಚಾರವನ್ನು ಕಾರ್ಯಕ್ರಮ ಒಂದರಲ್ಲಿ ರವಿಚಂದ್ರನ್ ಅವರೇ ತಿಳಿಸಿದ್ದರು. ಸ್ವಂತ ಮನೆಯನ್ನು ಬಿಟ್ಟು ಹೊರಬಂದಿದ್ದರು ಕ್ರೇಜಿಸ್ಟಾರ್. ಈ ಘಟನೆ ನಂತರ ರವಿಚಂದ್ರನ್ ಅವರಿಗೆ ಅವರು ಸಹಾಯ ಮಾಡಿದ್ದಾರೆ, ಇವರು ಸಹಾಯ ಮಾಡಿದ್ದಾರೆ ಎನ್ನುವ ಹಲವು ಸುದ್ದಿಗಳು ಹರಿದಾಡಿದ್ದವು. ಅವುಗಳಿಗೆ ರವಿಚಂದ್ರನ್ ಅವರೇ ಉತ್ತರ ಕೊಟ್ಟು, ಅದೆಲ್ಲವೂ ಸುಳ್ಳು ಸುದ್ದಿ ಎಂದು ಕ್ಲಾರಿಟಿ ನೀಡಿದ್ದರು. ಕಷ್ಟದಲ್ಲಿದ್ದ ರವಿಚಂದ್ರನ್ ಅವರಿಗೆ ಇದೀಗ ಹೊಸದೊಂದು ಅವಕಾಶ ಸಿಕ್ಕಿದೆ..

ಅದೇನೆಂದರೆ ರವಿಚಂದ್ರನ್ ಅವರು ಹೊಸ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದು, ಸಿನಿಮಾದ ಹೆಸರು ಗೌರಿ (Gowri), ಈ ಸಿನಿಮಾವನ್ನು ಎನ್.ಎಸ್.ರಾಜ್ ಕುಮಾರ್ (NS Rajkumar)ಮತ್ತು ವಿ.ಎಸ್ ರಾಜ್ ಕುಮಾರ್ (VS Rajkumar) ನಿರ್ಮಾಣ ಮಾಡುತ್ತಿದ್ದಾರೆ. ಅನಿಸ್ (Anis) ಅವರು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ನಾಯಕನಾಗಿ ರವಿಚಂದ್ರನ್ ಅವರು ನಟಿಸುತ್ತಿದ್ದು, ಸಿನಿಮಾದ ಮುಹೂರ್ತ ಬೆಂಗಳೂರಿನ (Bangalore) ಶೇಷಾದ್ರಿಪುರಂ ನಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದೆ. ಈ ಸಿನಿಮಾಗೆ ರವಿಚಂದ್ರನ್ ಅವರಿಗೆ ಸಾಥ್ ನೀಡಲು ಶಿವಣ್ಣ ಅವರು ಬಂದು ಕ್ಲ್ಯಾಪ್ ಮಾಡಿದರು. ಇದನ್ನು ಓದಿ..Kannada News: ಟಾಪ್ ನಟನಾಗಿದ್ದರೂ ತಮಿಳಿಗೆ ಹೋದ ಶಿವಣ್ಣನಿಗೆ ಶಾಕ್. ಧನುಷ್ ಕೊಟ್ಟಿದ್ದು ಯಾವ ಪಾತ್ರ ಗೊತ್ತೇ?? ಇವೆಲ್ಲ ಬೇಕಿತ್ತಾ ಶಿವಣ್ಣ??

ಇನ್ನು ಸಿನಿಮಾಗೆ ನಾಯಕಿಯಾಗಿ ಬಾಂಬೆ ಹುಡುಗಿ ಬರ್ಕ ಬಿಷ್ಟ್ ನಾಯಕಿ ಆಗಿದ್ದಾರೆ. ಇವರು ಅವರಿಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮೊದಲ ಸಿನಿಮಾ ಅಂತೆ. ಈ ಸಿನಿಮಾದಲ್ಲಿ ಇರುವುದೇ ಮೂರು ಪಾತ್ರಗಳು, ಕಥೆ ತುಂಬಾ ವಿಭಿನ್ನವಾಗಿದ್ದು, ಕಾಡಿನ ಬ್ಯಾಕ್ ಡ್ರಾಪ್ ನಲ್ಲಿ ನಡೆಯುವ ಫ್ಯಾಮಿಲಿ ಕಥೆ, ದಾಂಡೇಲಿಯಲ್ಲಿ ಚಿತ್ರೀಕರಣ ನಡೆಯುತ್ತದೆ, ಗಂಡ ಹೆಂಡತಿಯರ ನಡುವೆ ಬರುವ ಸಮಸ್ಯೆಗಳನ್ನು ಸಿನಿಮಾದಲ್ಲಿ ತೋರಿಸಲಾಗುತ್ತದೆ ಎಂದು ಹೇಳಿದ್ದಾರೆ ನಿರ್ದೇಶಕ ಅನಿಸ್. ರವಿಚಂದ್ರನ್ ಅವರು, ಹೊಸ ವರ್ಷಕ್ಕೆ ಹೊಸ ಸಿನಿಮಾ ಮೂಲಕ ಬರ್ತಾ ಇದ್ದೀನಿ ಎಂದು ಸಂತೋಷಪಟ್ಟಿದ್ದಾರೆ. ಕಷ್ಟದಲ್ಲಿದ್ದ ರವಿಚಂದ್ರನ್ ಅವರಿಗೆ ಈಗ ಒಳ್ಳೆಯ ಸಮಯ ಶುರುವಾಗಿದೆ ಎಂದು ಹೇಳಬಹುದು. ಇದನ್ನು ಓದಿ.. Biggboss Kannada: ಈ ವಾರ ಬಿಗ್ ಬಾಸ್ ಮನೆಯಿಂದ ಡಬಲ್ ಎಲಿಮಿನೇಷನ್. ಯಾರ್ಯಾರು ಹೊರಬಂದರು ಗೊತ್ತೇ??

Comments are closed.