Neer Dose Karnataka
Take a fresh look at your lifestyle.

Kannada News: ಕಲರ್ಸ್ ಕನ್ನಡದ 2 ಸೀರಿಯಲ್ ಮುಕ್ತಾಯ, ಎರಡು ಹೊಸ ಸೀರಿಯಲ್ ಎಂಟ್ರಿ: ಏನೆಲ್ಲಾ ಬದಲಾವಣೆ ಗೊತ್ತೇ?

Kannada News: ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಈಗ ಧಾರವಾಹಿಗಳಿಗೆ ಹೆಚ್ಚಿನ ಟಿಆರ್ಪಿ ರೇಟಿಂಗ್ ಬರುತ್ತಿಲ್ಲ. ಹಾಗಾಗಿ ಕೆಲವು ಧಾರವಾಹಿಗಳನ್ನು ಮುಗಿಸುವ ಪ್ಲಾನ್ ನಲ್ಲಿದೆ ಕಲರ್ಸ್ ಕನ್ನಡ ವಾಹಿನಿ. ಹೊಸದಾದ ಎರಡು ಸೀರಿಯಲ್ ಗಳು ಕೂಡ ಲಾಂಚ್ ಆಗುತ್ತಿದೆ. ಕಲರ್ಸ್ ಕನ್ನಡ ವಾಹಿನಿಯ ಮುಖ್ಯ ಸೀರಿಯಲ್ ಗಳೇ ಎಂಡ್ ಆಗುವ ಮಾತುಗಳು ಕೇಳಿ ಬರುತ್ತಿರುವುದು ಆಶ್ಚರ್ಯಕರವಾದ ವಿಷಯ ಆಗಿದೆ. ಮುಗಿಯಲಿರುವ ಸೀರಿಯಲ್ ಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕನ್ನಡತಿ (Kannadathi) ಧಾರವಾಹಿಗೆ ಆರಂಭದಲ್ಲಿ ಅತಿಹೆಚ್ಚು ಕ್ರೇಜ್ ಇತ್ತು, ವೀಕ್ಷಕರು ಬಹಳ ಇಷ್ಟಪಟ್ಟು ಸೀರಿಯಲ್ ನೋಡುತ್ತಿದ್ದರು. ಆದರೆ ಅಮ್ಮಮ್ಮನ ಪಾತ್ರ ಮುಗಿದ ಬಳಿಕ, ಕನ್ನಡತಿ ಧಾರವಾಹಿಗೆ ಹೆಚ್ಚು ರೆಸ್ಪಾನ್ಸ್ ಬರುತ್ತಿಲ್ಲ. ಟಿವಿಆರ್ ರೇಟಿಂಗ್ ಕೂಡ ಕಡಿಮೆ ಆಗಿದೆ. ಹಾಗಾಗಿ ಈ ಧಾರವಾಹಿಯನ್ನು ಶೀಘ್ರದಲ್ಲೇ ಮುಗಿಸಬಹುದು ಎನ್ನಲಾಗುತ್ತಿದೆ. ಇನ್ನು ದಾಸ ಪುರಂಧರ (Dasa Purandhara) ಧಾರವಾಹಿಯ ರೇಟಿಂಗ್ ಕೂಡ ಬಹಳ ಕಡಿಮೆ ಆಗುತ್ತಿರುವುದರಿಂದ ಈ ಧಾರವಾಹಿಯನ್ನು ಮುಗಿಸಬೇಕು ಎನ್ನಲಾಗುತ್ತಿದೆ. ಇನ್ನು ಗಿಣಿರಾಮ (Ginirama) ಧಾರವಾಹಿಯ ವಿಷಯದಲ್ಲಿ ಕೂಡ ಇದೇ ಮಾತು ಕೇಳಿಬರುತ್ತಿದೆ. ಗಿಣಿರಾಮ ಧಾರವಾಹಿ ಪ್ರಸಾರ ಆಗುತ್ತಿದ್ದ ಟೈಮ್ ಚೇಂಜ್ ಆದ ನಂತರ, ಹಿಂದಿನ ಹಾಗೆ ಜನಪ್ರಿಯತೆ ಇಲ್ಲ. ಇದನ್ನು ಓದಿ.. Kannada News: ಗಟ್ಟಿಮೇಳ ಸೀರಿಯಲ್ ನಿಂದ ಸುಹಾಸಿನಿ ಔಟ್.. ಸುಹಾಸಿನಿ ಜಾಗಕ್ಕೆ ಫೇಮಸ್ ನಟಿ ಎಂಟ್ರಿ. ಯಾರು ಗೊತ್ತೇ?

ರೇಟಿಂಗ್ ಕೂಡ ಕಡಿಮೆ ಆಗಿದೆ, ಹಾಗಾಗಿ ಈ ಧಾರವಾಹಿಯನ್ನು ಕೂಡ ನಿಲ್ಲಿಸುವ ಮಾತು ಕೂಡ ಕೇಳಿಬರುತ್ತಿದೆ. ಆದರೆ ಖಂಡಿತವಾಗಿ ಯಾವ ಧಾರವಾಹಿಗಳನ್ನು ನಿಲ್ಲಿಸಲಾಗುತ್ತದೆ ಎನ್ನುವ ಬಗ್ಗೆ ಖಚಿತವಾದ ಮಾಹಿತಿ ಸಿಕ್ಕಿಲ್ಲ. ಇನ್ನು ಎರಡು ಹೊಸ ಧಾರವಾಹಿಗಳು ಕೂಡ ಶುರುವಾಗುತ್ತಿದ್ದು, ಒಂದು ಬಿಗ್ ಬಾಸ್ ಖ್ಯಾತಿಯ ದಿವ್ಯ ಸುರೇಶ್ (Divya Suresh) ಅವರು ಅಭಿನಯಿಸಿರುವ ತ್ರಿಪುರ ಸುಂದರಿ (Tripura Sundari) ಧಾರವಾಹಿ ಹಾಗೂ ಪುಣ್ಯವತಿ (Punyavathi) ಹೆಸರಿನ ಮತ್ತೊಂದು ಧಾರವಾಹಿ ಶುರುವಾಗಲಿದೆ ಎಂದು ಮಾಹಿತಿ ಸಿಕ್ಕಿದೆ. ಕಲರ್ಸ್ ಕನ್ನಡ ವಾಹಿನಿ ಯಾವ ಧಾರವಾಹಿಯನ್ನು ನಿಲ್ಲಿಸುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಇಡೀ ದೇಶವನ್ನು ನಡುಗಿಸಿದ್ದ ರಶ್ಮಿಕಾ ಗೆ ಬಿಗ್ ಶಾಕ್ ಕೈ ಕೊಟ್ಟ ವಿಜಯ್ ದೇವರಕೊಂಡ, ಬಾಲಿವುಡ್ ನಟಿಯ ಜೊತೆ ಏನು ಮಾಡುತ್ತಿದ್ದಾರೆ ಗೊತ್ತೇ?

Comments are closed.