Neer Dose Karnataka
Take a fresh look at your lifestyle.

Kannada Astrology: ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆಯೇ?? ಉಪ್ಪಿನಿಂದ ಈ ಚಿಕ್ಕ ಕೆಲಸ ಮಾಡಿ ಸಾಕು. ಏನಾಗುತ್ತದೆ ಗೊತ್ತೆ? ತಿಳಿದರೆ ಇಂದೇ ಮಾಡಿ ಬಿಡ್ತೀರಾ.

Kannada Astrology: ಪ್ರತಿದಿನ ನಾವು ನೋಡುತ್ತಲೇ ಇರುತ್ತೇವೆ. ಪ್ರತಿಯೊಬ್ಬರ ಮನೆಯಲ್ಲು ಒಂದಲ್ಲ ಒಂದು ಸಮಸ್ಯೆ ಇದ್ದೇ ಇರುತ್ತದೆ. ಪ್ರತಿಯೊಬ್ಬರು ಕೂಡ ಜೀವನದಲ್ಲಿ ಒಂದು ಸಮಸ್ಯೆಯನ್ನಾದರು ಎದುರಿಸುತ್ತಾರೆ. ಅಂತಹ ಸಮಯದಲ್ಲಿ ಮನುಷ್ಯನು ಸಮಸ್ಯೆಗಳಿಂದ ಪರಿಹಾರ ಪಡೆಯಲು ಜ್ಯೋತಿಷಿಗಳ ಮೊರೆ ಹೋಗುತ್ತಾನೆ. ಏಕೆಂದರೆ ಅವರು ಹೇಳುವ ವಿಧಾನಗಳ ಮೂಲಕ ನಾವು ಪರಿಹಾರವನ್ನು ಪಡೆಯುತ್ತೇವೆ ಎನ್ನುವುದು ಕಲ್ಪನೆ ಮತ್ತು ನಂಬಿಕೆ ಆಗಿರುತ್ತದೆ. ಇದರಲ್ಲಿ ಜ್ಯೋತಿಷಿಗಳು ನೀಡುವ ಕೆಲವು ಉಪಾಯಗಳು ಜೀವನದಲ್ಲಿರುವ ಸಮಸ್ಯೆಗಳನ್ನು ದೂರ ಮಾಡುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ.

ಆ ರೀತಿ ನಂಬುವ ಜನರಿಗಾಗಿ ಇಂದು ನಿಮಗೆ ಕೆಲವು ಸಲಹೆಗಳನ್ನು ನೀಡುತ್ತೇವೆ. ಅಡುಗೆ ಮನೆಯಲ್ಲಿ ಪ್ರಾಧಾನ್ಯವಾದ ವಸ್ತು ಉಪ್ಪು, ಉಪ್ಪು ಇಲ್ಲದೆ ಯಾವುದೇ ಅಡುಗೆ ಪೂರ್ತಿ ಆಗುವುದಿಲ್ಲ. ಅಡುಗೆ ಮತ್ತು ಊಟದಲ್ಲಿ ಉಪ್ಪು ಪ್ರಮುಖ ಪಾತ್ರ ವಹಿಸುತ್ತದೆ. ಉಪ್ಪಿನ ಬಳಕೆ ರುಚಿಗೆ ಮಾತ್ರವಲ್ಲಜ್ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಉಪ್ಪಿಗೆ ನಮ್ಮ ನಮ್ಮ ಜೀವನವನ್ನು ಬದಲಾಯಿಸುವ ಶಕ್ತಿ ಕೂಡ ಇದೆ. ಉಪ್ಪಿನಿಂದ ಹಲವು ಪ್ರಯೋಜನಗಳಿವೆ. ವಾಸ್ತು ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ, ನೀವು ಮಾಡಲು ಹೊರಟಿರುವ ಕೆಲಸಗಳು ತಡ ಆಗುತ್ತಲೇ ಇದ್ದರೆ, ಮನೆಯಲ್ಲಿ ನೆಲ ಒರೆಸುವಾಗ ನೀರಿಗೆ ಉಪ್ಪು ಹಾಕಿ ಒರೆಸಿ. ಇದನ್ನು ಓದಿ..Kannada Astrology: ಹೊಸ ವರ್ಷದಿಂದ ಲಕ್ಷ್ಮಿ ಕೃಪೆ ಬೇಕು ಎಂದರೆ, ಹೊಸ ವರ್ಷದ ದಿನ ಪರ್ಸ್ ನಲ್ಲಿ ಈ ವಸ್ತು ಇಡಿ ಸಾಕು. ಇಂದೇ ರೆಡಿ ಮಾಡ್ಕೋತೀರಾ.

ವಾರಕ್ಕೆ ಒಂದು ಸಾರಿ ಹೀಗೆ ಮಾಡಿದರೆ ಸಂಪತ್ತು ಬರುತ್ತದೆ ಎಂದು ಹೇಳಲಾಗುತ್ತದೆ. ಇದಿಷ್ಟೆ ಅಲ್ಲದೆ, ಮಕ್ಕಳಿಗೆ ದೃಷ್ಟಿ ದೋಷ ಉಂಟಾದರೆ, ಅದಕ್ಕೂ ಉಪ್ಪಿನಿಂದ ಪರಿಹಾರ ಇದೆ. ದೃಷ್ಟಿ ದೋಷದಿಂದ ಮಕ್ಕಳನ್ನು ರಕ್ಷಿಸಲು ಉಪ್ಪನ್ನು ಈ ರೀತಿ ಬಳಸಬೇಕು,. ನಿಮ್ಮ ಮಕ್ಕಳಿಗೆ ಸ್ನಾನ ಮಾಡಿಸುವಾಗ, ವಾರಕ್ಕೆ ಒಂದು ಸಾರಿ ನೀರಿಗೆ ಚಿಟಿಕೆ ಉಪ್ಪು ಹಾಕಿ ಸ್ನಾನ ಮಾಡಿಸಿದರೆ ಮಕ್ಕಳಿಗೆ ಅಲರ್ಜಿ ಬರುವುದಿಲ್ಲ. ಶೌಚಾಲಯದಲ್ಲಿ ಉಪ್ಪು ತುಂಬಿದ ಗಾಜಿನ ಲೋಟವನ್ನು ಇಟ್ಟರೆ ನಿಮ್ಮ ಮನೆಯಲ್ಲಿರುವ ನೆಗಟಿವ್ ಎನರ್ಜಿ ನಾಶವಾಗಿ ಹೋಗುತ್ತದೆ ಎಂದು ನಂಬಿಕೆ ಇದೆ. ಇದನ್ನು ಓದಿ..Airtel Plans Kannada: ಏರ್ಟೆಲ್ ಗ್ರಾಹಕರು ಮೂರು ತಿಂಗಳು ಹೊಸ ಸಿನಿಮಾಗಳನ್ನು ಬಿಟ್ಟಿಯಾಗಿ ನೋಡಬೇಕು ಎಂದರೆ, ಈ ಚಿಕ್ಕ ಕೆಲಸ ಮಾಡಿ ಸಾಕು.

Comments are closed.