Neer Dose Karnataka
Take a fresh look at your lifestyle.

Kannada News: ಬಿಗ್ ನ್ಯೂಸ್: ದರ್ಶನ್ ಮೇಲೆ ಚಪ್ಪಲಿ ಎಸೆತ ವಿಷಯದ ಬಗ್ಗೆ ಷಾಕಿಂಗ್ ಪ್ರತಿಕ್ರಿಯೆ ಕೊಟ್ಟ ಸುದೀಪ್. ಏನು ಹೇಳಿದ್ದಾರೆ ಗೊತ್ತೇ?

Kannada News: ಚಿತ್ರರಂಗದಲ್ಲಿ ಈಗ ಭಾರಿ ಚರ್ಚೆಗೆ ಒಳಗಾಗಿರುವುದು ನಟ ದರ್ಶನ್ (Darshan) ಅವರ ಮೇಲೆ ಹೊಸಪೇಟೆಯಲ್ಲಿ ಚಪ್ಪಲಿ ಎಸೆದ ಘಟನೆ. ದರ್ಶನ್ ಅವರು ಕ್ರಾಂತಿ (Kranthi) ಸಿನಿಮಾದ ಎರಡನೇ ಹಾಡನ್ನು ಬಿಡುಗಡೆ ಮಾಡಲು, ಹೊಸಪೇಟೆಗೆ ಕ್ರಾಂತಿ ಚಿತ್ರತಂಡದ ಜೊತೆಗೆ ಬಂದಿದ್ದರು. ಆ ಸಮಯದಲ್ಲಿ ಕಿಡಿಗೇಡಿಯೊಬ್ಬರಿಂದ ಇಂಥಹ ಕೃತ್ಯ ನಡೆದಿದೆ. ಈ ಘಟನೆ ಮಾಡಿರುವುದು ನಟ ಪುನೀತ್ ರಾಜ್ ಕುಮಾರ್ (Puneeth Rajkumar) ಅವರ ಅಭಿಮಾನಿ ಎಂದು ಕೆಲವರು ಹೇಳಿದರೆ, ಅಪ್ಪು ಅಭಿಮಾನಿಗಳು ಮತ್ತು ದರ್ಶನ್ ಅಭಿಮಾನಿಗಳ ನಡುವೆ ಎಲ್ಲವೂ ಸರಿ ಇಲ್ಲ ಎಂದು ತಿಳಿದುಕೊಂಡ ಮೂರನೇ ವ್ಯಕ್ತಿ ಹೀಗೆ ಮಾಡಿದ್ದಾರೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಮತ್ತು ಕೆಲವರು ಇದು ರಾಜಕೀಯದ ಕೈವಾಡ ಎನ್ನುತ್ತಿದ್ದಾರೆ. ಇದರಲ್ಲಿ ಯಾವುದು ನಿಜ ಯಾವುದು ಸುಳ್ಳು ಗೊತ್ತಿಲ್ಲ. ಆದರೆ ಆ ರೀತಿ ನಡೆದ ಮೇಲೆ ದರ್ಶನ್ ಅವರು, ಪರ್ವಾಗಿಲ್ಲ ಬಿಡು ಚಿನ್ನ ಎಂದು ಹೇಳಿ ತಮ್ಮ ದೊಡ್ಡತನ ತೋರಿದ್ದಾರೆ.

ಇನ್ನು ಈ ಘಟನೆ ಬಗ್ಗೆ ಚಂದನವನದ ಕಲಾವಿದರು ಪ್ರತಿಕ್ರಿಯೆ ನೀಡುತ್ತಿದ್ದಾರೆ, ಶಿವಣ್ಣ (Shivanna) ಅವರು, ಜಗ್ಗೇಶ್ (Jaggesh) ಅವರು ಸೇರಿದಂತೆ ಎಲ್ಲರೂ ಪ್ರತಿಕ್ರಿಯೆ ಕೊಡುತ್ತಿದ್ದು, ಇದೀಗ ಕಿಚ್ಚ ಸುದೀಪ್ (Kiccha Sudeep) ಅವರು ಕೂಡ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಮೂರು ಪುಟಗಳ ಲೆಟರ್ ಬರೆದು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ ಕಿಚ್ಚ ಸುದೀಪ್..ಮೊದಲಿಗೆ ಕನ್ನಡ ನಾಡು, ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಮಾತನಾಡಿರುವ ಸುದೀಪ್ ಅವರು, ನಂತರ ದರ್ಶನ್ ಅವರ ಬಗ್ಗೆ ಬರೆದು, “ಆ ವಿಡಿಯೋ ನನ್ನ ಮನಸ್ಸನ್ನು ಕೆಡಿಸಿತು, ಅದಕ್ಕೆ ಸಂಬಂಧವೇ ಇಲ್ಲದೆ ಸಿನಿಮಾ ನಾಯಕಿ ಮತ್ತು ಚಿತ್ರತಂಡ ಕೂಡ ವೇದಿಕೆಯ ಮೇಲೆಯೇ ಇತ್ತು. ಅವರಿಗೆ ಅವಮಾನ ಮಾಡಿದ್ದು ನ್ಯಾಯವಲ್ಲ. ಕನ್ನಡಿಗರು ಈ ಥರ ನಡೆದುಕೊಳ್ಳುತ್ತಾರಾ ಎಂದು ಪ್ರಶ್ನೆ ಮೂಡುವ ಹಾಗೆ ಮಾಡಿತು. ಅಪ್ಪು ಅಭಿಮಾನಿಗಳು ಮತ್ತು ದರ್ಶನ್ ನಡುವೆ ಎಲ್ಲವೂ ಸರಿ ಇಲ್ಲದ ಹಾಗೆ ಅಲ್ಲಿರಬಹುದು ಆದರೆ ಆ ರೀತಿ ಮಾಡಿದ್ದು ತಪ್ಪು. ಇದನ್ನು ಓದಿ..Kannada News: ಬಾಕ್ಸ್ ಆಫೀಸ್ ನಲ್ಲಿ ಅಬ್ಬರಸಿ ಬೊಬ್ಬಿರದ ಅವತಾರ್ 2: ಚಿಂದಿ ಚಿತ್ರಾನ್ನ ಆಯಿತು ಗಲ್ಲಾಪೆಟ್ಟಿಗೆ. ಕಲೆಕ್ಷನ್ ಮಾಡಿದ್ದು ಎಷ್ಟು ಗೊತ್ತೇ??

ಈ ರೀತಿ ಮಾಡಿದ್ರೆ ಪುನೀತ್ ರಾಜ್ ಕುಮಾರ್ ಅವರು ಅದಕ್ಕೆ ಸಪೋರ್ಟ್ ಮಾಡ್ತಿದ್ರ?ಅದಕ್ಕೆ ಉತ್ತರ ಅವರ ಅಭಿಮಾನಿಗಳಿಗೆ ಗೊತ್ತಿದೆ. ಅಲ್ಲಿದ್ದ ಒಬ್ಬ ವ್ಯಕ್ತಿ ಮಾಡಿದ ಈ ಕೆಲಸಕ್ಕೆ, ಪುನೀತ್ ಅವರ ಅಭಿಮಾನಿಗಳಿಗೆ ಇರುವ ಗೌರವ ಹಾಳು ಮಾಡಬಾರದು. ಕನ್ನಡ ಚಿತ್ರರಂಗಕ್ಕೆ ದರ್ಶನ್ ಅವರ ಕೊಡುಗೆ ಬಹಳ ದೊಡ್ಡದು, ದರ್ಶನ್ ಕುರಿತು ನನಗೆ ಇರುವ ಭಾವನೆಗಳನ್ನು ವ್ಯಕ್ತಪಡಿಸುವುದಕ್ಕೆ ನಮ್ಮ ನಡುವೆ ಇರುವ ವೈಮನಸ್ಸು ತಡೆಯುವುದಿಲ್ಲ. ಅವರಿಗೆ ಈ ರೀತಿ ಮಾಡಿರುವುದು ನಿಜವಾಗಿಯೂ ತಪ್ಪು, ನನ್ನ ಮನಸ್ಸಿಗು ನೋವು ತಂದಿದೆ. ನಮ್ಮ ಚಿತ್ರರಂಗ ಮತ್ತು ಕನ್ನಡಿಗರು ಹೆಸರು ಗಳಿಸಿರುವುದು ಒಳ್ಳೆಯತನಕ್ಕೆ, ಈ ಥರ ಮಾಡಿ ಕೆಟ್ಟ ವಿಚಾರಗಳನ್ನು ರವಾನಿಸುವುದು ತಪ್ಪು.ಕೋಪದಲ್ಲಿ ನಡೆದುಕೊಳ್ಳಬಾರದು. ಎಲ್ಲಾ ನಟರಿಗೂ ಬೇರೆ ಬೇರೆ ರೀತಿಯ ಅಭಿಮಾನಿ ಬಳಗ ಇರುತ್ತೆ, ನಡುವೆ ಬಂದು ಮಾತನಾಡೋದಕ್ಕೆ ನಾನು ಯಾರು ಅಲ್ಲ.

ಆದರೆ ದರ್ಶನ್ ಮತ್ತು ಪುನೀತ್ ಇಬ್ಬರ ಜೊತೆಗೂ ಒಳ್ಳೆಯ ಆತ್ಮೀಯತೆ ನನಗೆ ಇತ್ತು, ಇಬ್ಬರ ಜೀವನದಲ್ಲಿ ಒಳ್ಳೆಯ ಸ್ಥಾನ ಪಡೆದುಕೊಂಡಿದ್ದೆ..ಹಾಗಾಗಿ ನನಗೆ ಮಾತನಾಡುವ ಸ್ವಾತಂತ್ರ್ಯ ಇದೆ, ನನ್ನ ಭಾವನೆಗಳನ್ನು ಪದಗಳಲ್ಲಿ ಬರೆದಿದ್ದೇನೆ. ನಾನು ಹೇಳಬೇಕಿದ್ದಿದ್ದಕ್ಕಿಂತ ಹೆಚ್ಚು ಹೇಳಿದ್ದರೆ, ದಯವಿಟ್ಟು ಕ್ಷಮಿಸಿ. ಚಿತ್ರರಂಗದಲ್ಲಿ 27 ವರ್ಷಗಳ ಪ್ರಯಾಣದ ನಂತರ ನನಗೆ ಅರ್ಥವಾಗಿದ್ದು, ಇಲ್ಲಿ ಯಾರೂ ಅಥವಾ ಯಾವುದು ಶಾಶ್ವತವಲ್ಲ. ಎಲ್ಲರಿಗೂ ಪ್ರೀತಿ ಮತ್ತು ಗೌರವ ಕೊಟ್ಟು ಅದನ್ನು ಮತ್ತೆ ಪಡೆಯಿರಿ.. ಯಾರನ್ನೇ ಆದರೂ, ಯಾವುದೇ ಪರಿಸ್ಥಿತಿಯಲ್ಲಿ ಆದರೂ ಗೆಲ್ಲಲು ಇರುವ ಮಾರ್ಗ ಇದೊಂದೇ ಆಗಿದೆ..”ಎಂದು ಪತ್ರ ಬರೆದು ಒಂದೊಳ್ಳೆಯ ಸಂದೇಶ ನೀಡಿದ್ದಾರೆ ಕಿಚ್ಚ. ಇದನ್ನು ಓದಿ.. Useful Tips: ಮನೆಯಲ್ಲಿ ಕರೆಕ್ಟ್ ಬಿಲ್ ಬರಲೇ ಬಾರದು, ಸೊನ್ನೆ ಬರಬೇಕು ಎಂದರೆ, ಜಸ್ಟ್ ಈ ಚಿಕ್ಕ ಕೆಲಸ ಮಾಡಿ ಸಾಕು. ಫುಲ್ ಹಣ ಉಳಿಸಿ.

Comments are closed.